೧೪.
ಆತ್ಮಜ್ಞಾನಕ್ಕೆ
ತ್ರೈಷೆ ಬೇಕು ( ಶ್ರದ್ದೆ )
ಸಮಾಜಮುಖಿ ಆದಂತ ವಿಧ್ಯೆ ಬಂದರೆ ರಾಜಯೋಗ ಸಿಗುತ್ತೆ
ಗುರುಕುಲ ಪದ್ಧತಿ ಬೇಕು . ಏಕಾಗ್ರತೆಯಲ್ಲಿ ಒಂದೇ ಜಾಗದಲ್ಲಿ ಇದ್ದು ಆಧ್ಯಾತ್ಮಿಕ ವಿಧ್ಯೆ ಕಲಿಯಬೇಕು.
ಸಾತ್ವಿಕ್ ವಾತಾವರಣ ಬೇಕು.
ಸಮಾನತೆ ಇದ್ದರೆ ನೆಲದ ಮೇಲೆ ಕುಳಿತು ವಿದ್ಯಾರ್ಜನೆ ಸಾಧ್ಯ
ಮಾತೃ ಋಣ ಪಿತೃ ಋಣ ದೇವ ಋಣ ಋಷಿ ಋಣ
ಗುರುವೇ ಸಾಕ್ಷಾತ್ ದೈವ
ತಂದೆ ಕೊಡುವುದು ಲೌಕಿಕಾದ್ದು. ಗುರುಗಳು ಕೊಡುವುದು ಅಲೌಕಿಕವಾದ ಜ್ಞಾನ ವೇದ ಜ್ಞಾನ .
ಅಲೆಕ್ಸಾಂಡರ್ ಗು ಕೂಡ ವೇದ ವಿಧ್ಯೆ ಬೇಕು ಎಂದು ತಿಳಿದಿತ್ತು ಆದರೆ ಸಿಗಲಿಲ್ಲ
ಸ್ವಾಮಿ ವಿವೇಕಾನಂದರವರಿಗೆ ಕೂಡ ಗುರು ರಾಮಕೃಷ್ಣರ ಹೆಸರು ಕೂಡ ಸಂಬೋಧಿಸಿ ಹೇಳುತ್ತಿರಲಿಲ್ಲ .
ಎದುರುಗಡೆ ಚಾದಲ ಬಂದಾಗ ಶಂಕರಾಚಾರ್ಯರು ತಪ್ಪಾಗಿ ಗ್ರಹಿಸಿದರು ಅದೇ ತೋರ್ಸುತ್ತೆ ಮನುಷ್ಯ ತಪ್ಪು ಮಾಡುವುದು ಸಹಜ ಆದರೆ ತಕ್ಷಣ ತಿದ್ದು ಕೊಳ್ಳಬೇಕು ಎಂದು .
ನರ್ಮದಾಷ್ಟಕ ಸ್ತೋತ್ರದ ಮೂಲಕ ಸಮಸ್ಯೆ ನಿರ್ಮೂಲನೆ ಮಾಡಿದರು. ಸಮಸ್ಯೆ ಬಂದಾಗ ಮಾತ್ರ ಅಷ್ಟಸಿದ್ಧಿಯನ್ನು ಉಪಯೋಗಿಸಿದರು. ತಮ್ಮ ಅನುಕೂಲಕ್ಕೆ ಬಳಸಲಿಲ್ಲ .
ಚರ್ಚೆಯಲ್ಲಿ ಸೋತವರು ಇವರ ವ್ಯಕ್ತಿತ್ವನ್ನು ತುಂಬಾ ಇಷ್ಟಪಡುತ್ತಿದ್ದರು. ಅಜಾತಶತ್ರು .
ಗುರುಕುಲದಲ್ಲಿ ಗೋವಿಂದ ಭಗವದ್ಪಾದರನ್ನು ಭೇಟಿ ಮಾಡಿದ್ದರು. ಅವರ ಗುರು ಗೌಡಪಾದಾಚಾರ್ಯರು ಉಪನಿಷತ್ತಿಗೆ ಕಾರಿಕೆ ಬರೆದಿದ್ದರು. ಪೂರ್ವಪಕ್ಷ , ಉತ್ತರ ಉತ್ತರಾಪಕ್ಷ ಮಂಡಿಸಿದ ಗುರುಗಳ ಗುರು ಅವರು .
ಆತ್ಮಾವಲೋಕವನ್ನು ಮಾಡಿಕೊಳ್ಳುವುದು ಮುಖ್ಯ ( ಶ್ರಾವಣ ಮನಾನಾ ನಿಧಿಧ್ಯಾಸನ )
೧-೨ ಪುಸ್ತಕ ನೋಡಿ ಅಳವಡಿಸಿಕೊಳ್ಳಬೇಕು .
ಎಷ್ಟು ತಿಳಿದರೂ ಅಳವಡಿಸಿಕೊಳ್ಳಲೇಬೇಕು ಆಗಲೇ ಮುಕ್ತಿ ಮಾರ್ಗ ದಾರಿ ತೆಗೆದುಕೊಳ್ಳುತ್ತದೆ.
ಭಕ್ತಿ ಯೋಗ ( ಮೊದಲು ಬೇಕಾಗಿರೋದು ), ಜ್ಞಾನ ಯೋಗ ( ಭಕ್ತಿಯನ್ನು ಉಪಯೋಗಿಸಿ ಅಭ್ಯಾಸ ಮಾಡಬೇಕು , ಅದಕ್ಕೆ ವೈರಾಗ್ಯಬೇಕು ). ಅದನ್ನು ಉಪಯೋಗಿಸಿ ವಿವೇಕ ಬರಿಸಿಕೊಳ್ಳಬೇಕು . ವಿವೇಕದಿಂದ ಬ್ರಹ್ಮ ಜ್ಞಾನ ಪ್ರಾಪ್ತಿ . ಆಮೇಲೆ ನಿತ್ಯ ಕರ್ಮವೂ ಬಿಟ್ಟುಹೋಗುತ್ತದೆ . ನಿವೃತ್ತಿ ಮಾರ್ಘಕ್ಕೆ ಸೇರುತ್ತೇವೆ .
ಶಂಕರಾಚಾರ್ಯರು ಸೂಕ್ತವಾದ ಪಂಡಿತರು /ವಾರ್ತಿಕರು / ಗಣಪಂಡಿತರು ಸಿಕ್ಕಿದರು . ಅವರೇ ಕುಮಾರಿಲಭಟ್ಟರು. ಲಕ್ಷಾಂತರ ಶಿಷ್ಯರನ್ನು ಸಿದ ಪಡಿಸಿದ ಕುಮಾರಿಲ ಭಟ್ಟರನ್ನು ವಾದದಲ್ಲಿ ಸೋಲಿಸಿ ಜನನ ಮಾರ್ಗಕ್ಕೆ ತರಬೇಕು ಎಂದು ಬಾವಿಸಿದ್ದರು .
ಆದರೆ ಭಟ್ಟರು ದೇಹ ತ್ಯಾಗ ಮಾಡಲು ನಿಶ್ಚಯಿಸಿರುತ್ತಾರೆ .
ಪ್ರಯಾಗದಲ್ಲಿ ವಾಸಿಸುತ್ತಿರುತ್ತಾರೆ .
ಶಂಕರಾಚಾರ್ಯರು ಅಲ್ಲಿಗೆ ಬಂದು ಪದ್ಮಾಸನದಲ್ಲಿ ಬತ್ತದ ಹೊಟ್ಟಿನ ಮೇಲೆ ಕುಳಿತು ಬೆಂಕಿ ( ತೃಷಾಗ್ನಿ ಪ್ರಾಯಶ್ಚಿತ್ತ ) ಹಾಕಿಸಿಕೊಂಡಿರುತ್ತಾರೆ.
ಭಟ್ಟರು ಬೌದ್ಧ ಧರ್ಮವನ್ನು ಸೋಲಿಸಿ ನಿಂತು ಗೆದ್ದವರು . ಅವರು ಶಂಕರಾಚಾರ್ಯರ ಜೊತೆ ವಾದ ಮಾಡಲು ಮನಸ್ಸು ಬದಲಾಯಿಸುವುದಿಲ್ಲ . ಆಳವಾಗಿ ಬೌದ್ಧ ಧರ್ಮವನ್ನು ತಿಳಿದು ಅದನ್ನು ಖಂಡಿಸಿದರು . ಪಾಪ ಪ್ರಜ್ಞೆಗೆ ತೃಷಾಗ್ನಿ ಪ್ರಾಯಶ್ಚಿತ್ತವನ್ನು ಮಾಡಿಕೊಂಡರು . ಮಾಡಿಕೊಳ್ಳುವ ಮನ್ಯಾಚೆ ಮಂಡನ ಮಿಶ್ರರಿಂದ ವಾರ್ತಿಕೇಯನ್ನು ಬರೆಸಿಕೊಳ್ಳಿ ಎಂದು ತಿಳಿಸಿದರು .
ಶಂಕರರು ಕಾಶಿಗೆ ಬಂದು ವೈಧಿಕ ವಿಷಯವನ್ನು ಚರ್ಚೆ ಮಾಡಿದ್ದಾರೆ . ಪರಿಪಕ್ವರಾಗಿದ್ದಾರೆ .
ಗೋವಿಂದ ಭಾಗವದ್ಪಾದರ ಆಶೀರ್ವಾದ ಮತ್ತು ಅಪ್ಪಣೆಯೊಂದಿಗೆ ಬಾಷ್ಯದ ಕೆಲಸ ಶುರುವಾಗುತ್ತದೆ.
ನಾರಾಯಣನ ವಿಗ್ರಹವನ್ನು ತಮ್ಮ ತಪಶಕ್ತಿಯಿಂದ ತೆಗೆದು ಕಾಶಿಯಲ್ಲಿ ಸ್ಥಾಪಿಸುತ್ತಾರೆ .
ಸರಸ್ವತಿ ನದಿಯ ತೀರದಲ್ಲಿ ವ್ಯಾಸಗುಹದಲ್ಲಿ ಕುಳಿತು ಉಪನಿಷದ್ ಭಗವದ್ಗೀತೆ ಮತ್ತು ಬ್ರಹ್ಮಸೂತ್ರಕ್ಕೆ ಭಾಷ್ಯವನ್ನು ಬರೆಯುತ್ತಾರೆ. ಎಲ್ಲರಿಗೂ ತಲುಪಲೆಂದು ಆಗಾಗ ಉಪನ್ಯಾಸಗಳನ್ನು ಕೊಡುತ್ತಿದ್ದಾರೆ .
ಅವರ ಪರಮ ಶಿಷ್ಯ ಸನಂದ ( ವಿಷ್ಣುಶರ್ಮ ) ನ ಜೊತೆ ಇರುತ್ತಾರೆ .
ಸನಂದ ಎಂದು ಕೂಗಿದ ತಕ್ಷಣ ಗುರುಗಳನ್ನು ಭೇಟಿ ಮಾಡಲು ನೀರಿನ ಮೇಲೆ ಓಡೋಡಿ ಬರುತ್ತಾರೆ. ಅಲ್ಲೆಲ್ಲಾ ಪದ್ಮ ಪಾತ್ರ ಉದ್ಭವಿಸುತ್ತದೆ . ಅವರಿಗೆ ಸನ್ಯಾಸ ಸ್ವೀಕರಿಸಿದಾಗ ಸನಂದ ಎಂದು ಹೆಸರಿಟ್ಟು ನಂತರ ಪದ್ಮಪಾದಾಚಾರ್ಯ ಎಂಬ ಹೆಸರನ್ನು ಕೊಡುತ್ತಾರೆ .
ಭಗವದ್ಪಾದರಿಗೆ ಈಗ ೧೬ ವರ್ಷ . ಆಯಸ್ಸು ಮುಗಿತಾ ಬಂದಿದೆ . ಕಾರ್ಯ ಬಹಳಷ್ಟಿದೆ. ನಾಸ್ತಿಕ ಧರ್ಮವನ್ನು ಖಂಡಿಸಿ ವೇದ ಧರ್ಮವನ್ನು ಸ್ಥಾಪಿಸಬೇಕಾಗಿದೆ .
ವೇದವ್ಯಾಸರು ಒಬ್ಬ ವೃದ್ಧ ರೂಪದಲ್ಲಿ ಬಂದು ಪ್ರಶ್ನೆ ಮಾಡಿದರು . ಸಮಾಧಾನವಾಗಿ ಉತ್ತರಿಸುತ್ತಾರೆ . ಶಂಕರಾಚಾರ್ಯರಿಗೆ ಅವರು ವೇದವ್ಯಾಸರು ಎಂದು ತಿಳಿಯುತ್ತದೆ . ಆಗ ಸಾಕ್ಷಾತ್ ವೇದವ್ಯಾಸರೇ ಅಲ್ಲಿರುವುದು ಎಂದು ನಮಸ್ಕರಿದ ಶಂಕರರಿಗೆ ಇನ್ನೂ ೧೬ ವರ್ಷ ಆಯಸ್ಸು ಕರುಣಿಸುತ್ತಾರೆ .