ರಾಜ್ಯೋತ್ಸವದ ಶುಭಾಶಯಗಳು
--------------------------
ಉತ್ತರ ಭಾರತದಿಂದ ಬಂದಿರುವ ಒಂದು ಹುಡುಗಿ ಹತ್ತು ವರ್ಷ ಬೆಂಗಳೂರಿನಲ್ಲೇ ವಾಸವಿದ್ದು ಬೆಂಗಳೂರಿನಲ್ಲೇ ಅದೂ ಬನಶಂಕರಿಯಲ್ಲೇ ಇಂಜಿನಿಯರಿಂಗ್ ಸಹ ಕಲಿತು ನಮ್ಮ ಜೊತೆಯಲ್ಲೇ ಈಗ ಅಮೇರಿಕಾದಲ್ಲಿ ಕೆಲಸ ಮಾಡ್ತಾ ಇದ್ದಾರೆ . ಅವರು ಬೆಂಗಳೂರಿನಲ್ಲೇ ೧೦ ವರ್ಷ ಇದ್ದರು ಅಂತ ತಿಳಿದ ತಕ್ಷಣ ನಾನು ಅವರಲ್ಲಿ ಕನ್ನಡದಲ್ಲೇ ಮಾತನಾಡಲು ಬಯಸಿದೆ . ನಂಗೆ ಕನ್ನಡ್ ಗೊತ್ತಿಲ್ಲ ಅಂದ್ರು . ನಾನು ಉತ್ತರಿಸಿದೆ ೩ ಪದ ಉಪಯೋಗಿಸಿದೀರಾ . ೧ . ನಂಗೆ ೨. ಕನ್ನಡ್ ೩. ಗೊತ್ತಿಲ್ಲ . ಅದರಲ್ಲಿ ಎರಡು ಪದ ಸರಿ ಇದೆ . ಕನ್ನಡ್ ಬದಲು ಕನ್ನಡ ಹೇಳಿ ಅಷ್ಟೇ ಅಂದೇ . ಮತ್ತೆ ಸರಿ ಹೇಳುದ್ರು . ಆಮೇಲೆ ಹೇಳ್ದೆ ಅದನ್ನೇ ನಂಗೆ ಕನ್ನಡ ಬರುತ್ತೆ ಅಂತ ಹೇಳಿ ಅಂದೆ. ವಾಟ್ ಡಸ್ ಥಟ್ ಮೀನ್ ಅಂತ ಕೇಳುದ್ರು .. ಅಂದ್ರೆ I know ಕನ್ನಡ ಅಂತ ಅಂದೆ .
೩ ಪದ ಗೊತ್ತಿದೆ ಅಂದ್ರೆ ಡೈಲಿ ಒಂದು ಪದ ಹೇಳ್ಕೊಡ್ತೀನಿ ನಿಮಗೆ ೧೦೦ ಪದ ಗೊತ್ತಾದ್ರೆ ಅದರ ಅರ್ಥ ಗೊತ್ತಾದ್ರೆ ಆಮೇಲೆ ಕೇವಲ grammer ಅಷ್ಟೇ . ಅದನ್ನು ಹೇಳಿಕೊಡ್ತೀನಿ ದಯವಿಟ್ಟು ಕನ್ನಡ ಗೊತ್ತಿಲ್ಲ ಅನ್ಬೇಡಿ ಮೇಡಂ ಅಂತ ಕೇಳ್ಕೊಂಡೆ . ಆದರು ಸುಮಾರು ಸರಿ ನಾನು ಮತ್ತೊಬ್ಬರ ಜೊತೆ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿ ದಿಸ್ ಐಸ್ ವಾಟ್ ಯು ಸ್ಪೋಕ್ , ರೈಟ್ ಅಂತ ಮಾತುಗಳ context ಹೇಳ್ತಾರೆ . ನಮ್ಮ ತಂಡದಲ್ಲಿರೋ ಪ್ರತಿಯೊಬ್ಬ ತಮಿಳರು ತೆಲುಗು ಜನರು ಅವರ ಭಾಷೆಯಲ್ಲಿ ಅವರವರ ಜನರ ಜೊತೆ ಸಂಭಾಷಣೆ ನಡೆಸುತ್ತಾರೆ . ಅದಕ್ಕೋ ಏನೋ ಅಮೇರಿಕಾದಲ್ಲಿ ತೆಲುಗು ತುಂಬಾ ವೇಗವಾಗಿ ಬೆಳೆಯುತ್ತಿರುವ ಭಾಷೆ . ಮತ್ತೊಂದು ಸಂಗತಿಯನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದ್ದೇನೆ . ನಮ್ಮ ಕನ್ನಡದ ತಂದೆ ತಾಯಂದಿರು ತಮ್ಮ ತಮ್ಮ ಮಕ್ಕಳಿಗೆ ಇಂಗ್ಲಿಷ್ ನಲ್ಲಿ ವ್ಯವಹರಿಸುವುದನ್ನು ನೋಡಿದ್ದೇನೆ . ನಾವೇ ಮನೆಯಲ್ಲಿ ನಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಡದೆ , ಭಾಷೆಯನ್ನೂ ಮಾತನಾಡುವುದಕ್ಕೆ ಪ್ರೋತ್ಸಹಿಸದೆ ಇದ್ದರೆ ಮುಂದಿನ ದಿನಗಳಲ್ಲಿ ತುಂಬಾ ಕಷ್ಟ ಇದೆ . ಉಪೇಂದ್ರರವರು ಬುದ್ದಿವಂತ ಚಿತ್ರದಲ್ಲಿ ಹೇಳಿರುವ ಹಾಗೆ ಕನ್ನಡಿಗರು ತುಂಬಾ ವಿಶಾಲ ಹೃದಯದವರು . ಮೂರ್ನಾಲ್ಕು ಭಾಷೆ ಕಲಿತರೆ ಮತ್ತು ಮಾತನಾಡ್ತಾರೆ . ನಮ್ಮ ಮಾತೃಭಾಷೆಯನ್ನು ನಾವು ಎಂದೂ ಬಿಟ್ಟುಕೊಡಬಾರದು. ಉಳಿಸಿಕೊಳ್ಳುವುದಲ್ಲದೆ ಬೆಳೆಸುದಕ್ಕೂ ಪ್ರಯತ್ನಿಸುವುದಾದರೆ ಮಾತ್ರ ಮುಂದಿನ ದಿನಗಳಲ್ಲಿ ನಮ್ಮ ಭಾಷೆ ಉಳಿಸಿಕೊಳ್ಳಲು ಸಾಧ್ಯವಾದೀತು. ಈ ನಿಟ್ಟಿನಲ್ಲಿ ನಿಮಗೆ ಇಷ್ಟವಿರುವ ಕ್ಷೇತ್ರವನ್ನು ಆಯ್ಕೆ ಮಾಡ್ಕೊಂಡು ನಮ್ಮ ಕೈಲಿ ಆದಷ್ಟು ಸ್ವಲ್ಪ ಸ್ವಲ್ಪ ಪ್ರಯತ್ನ ಮಾಡಲೇಬೇಕು . ಅತೀ ಬುದ್ದಿವಂತರ ಹಾಗೆ ಸರ್ಕಾರದ ಕೆಲಸ ಅಂತ ಅನ್ಕೊಂಡು ನಮ್ಮ ಕೈಲಾದಷ್ಟು ಕೆಲಸಗಳನ್ನು ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಬಹಳ ಕಷ್ಟ ಇದೆ ಅನ್ನೋ ನೋವು ನನ್ನೊಳಗೆ ತುಂಬಾ ಇದೆ . ನೀವು ನಿಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲೇ ಓದಿಸಿದರೂ ಪರ್ವಾಗಿಲ್ಲ ಆದರೆ ಮನೆಯಲ್ಲಿ ಮಾತ್ರ ಕನ್ನಡ ವಾತಾವರಣ ಕನ್ನಡ ಭಾಷೆಯ ಬಳಕೆ ಮಾತ್ರ ಇರ್ಬೇಕು . ಪ್ರತಿ ಹಬ್ಬಗಳನ್ನು ಆಚರಿಸಿ ಅದರ ಅರ್ಥ ಉದ್ದೇಶ ಎಲ್ಲವನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಅವರು ನನಗೆ ಹೇಳುತ್ತಿದ್ದರು ಕನ್ನಡವನ್ನು ನಿತ್ಯ ಓದು ಬರಿ ಎಂದು ಹೇಳುತ್ತಿದ್ದರು . ನಮ್ಮ ತಂದೆ ನನಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸಿ ಬಿಟ್ಟರು . ಇವತ್ತು ಅವರು ಇಲ್ಲ ಆದರೂ ಕನ್ನಡ ಓದುವುದು ಬರೆಯುವುದು ನನ್ನ ಹವ್ಯಾಸ ವಾಗಿದೆ ಅವರನ್ನು ನೆನೆಸಿಕೊಂಡು ಈ ಲೇಖನ ಬರೆಯುತ್ತಿದ್ದೇನೆ . ಯೋಚಿಸಿ ನೋಡಿ , ಅಮೇರಿಕಾದಲ್ಲಿ ಮನೆಯೊಳಗೇ ಅಲ್ಪ ಸ್ವಲ್ಪ ಕನ್ನಡ ಇನ್ನು ಸ್ವಲ್ಪ ಉಸಿರಾಡ್ತಾ ಇದೆ . ಅದು ಸ್ವಲ್ಪ ಅಷ್ಟೇ . ಪರಸ್ಪರ ಮಾತು ಕಡಿಮೆ ಆಗಿದೆ . ಊಟ ತಿಂಡಿ ಮಾಡುವಾಗಲೂ ಟೀವಿಯೋ ಫೋನೋ ಜೊತೆ ಇರುತ್ತೆ . ಅದರಲ್ಲೇ ರೊಟ್ಟಿಯಂಗಡಿ ಕಿಟ್ಟಪ್ಪ , ನಮ್ಮ ಮನೆಯಲ್ಲೊಂದು ಸಣ್ಣ ಪಾಪ ಈ ರೀತಿಯ ಪದ್ಯಗಳನ್ನು ಸಹ ತೋರಿಸುವುದು ಒಳ್ಳೆಯದು . ನೀವೇ ಯೋಚಿಸಿ , ಕನ್ನಡ ತಂದೆ ತಾಯಂದಿರು ಮಕ್ಕಳಿಗೆ ಕನ್ನಡ ಹೇಳಿಕೊಡಲು ಎಷ್ಟು ಪ್ರಯತ್ನ ಮಾಡಬೇಕು ಅಂತ. ಮನೆಯಿಂದ ಆಚೆ ಇಂಗ್ಲಿಷ್ . ಇವತ್ತಿನ ದಿನ ಸ್ಥಿತಿ ಹೇಗಾಗಿದೆ ಅಂದರೆ ಮಕ್ಕಳನ್ನು ಕನ್ನಡ ಶಾಲೆಗೆ ( ವಾರಕ್ಕೆ ೧ ಗಂಟೆ ಅಷ್ಟೇ ) ಸೇರಿಸಿ ಕೆಲವರು ಮಕ್ಕಳು ಕನ್ನಡದಲ್ಲಿ ಏಕೆ ಮಾತಾಡಲ್ಲ ಅಂತ ಕೇಳ್ತಾರೆ . ಅಮೇರಿಕಾದಲ್ಲಿ ಮನೆಯೊಳಗೇ ಅಲ್ಪ ಸ್ವಲ್ಪ ಕನ್ನಡ ಇನ್ನು ಸ್ವಲ್ಪ ಉಸಿರಾಡ್ತಾ ಇದೆ . ಅದು ಸ್ವಲ್ಪ ಅಷ್ಟೇ . ಮಾತು ಕಡಿಮೆ , ಬರಿ ಫೋನ್ , ಟೀವಿ ಅದರಲ್ಲಿ ಕೂಡ ಇಂಗ್ಲಿಷ್ ಮಯವಾಗಿದೆ. ನೀವೇ ಯೋಚಿಸಿ , ಕನ್ನಡ ತಂದೆ ತಾಯಂದಿರು ಮಕ್ಕಳಿಗೆ ಕನ್ನಡ ಹೇಳಿಕೊಡಲು ಎಷ್ಟು ಪ್ರಯತ್ನ ಮಾಡಬೇಕು ಅಂತ . ಎಷ್ಟೊಂದು ತಂದೆ ತಾಯಂದ್ರುಗೆ ನಾನು ಕೇಳಿಕೊಂಡಿದೀನಿ . ಕನ್ನಡ ಮಾತಾಡ್ಸಿ ಅಂತ . ಅವರ ಉತ್ತರ ಮಕ್ಕಳು ಇಂಗ್ಲಿಷ್ ಅಲ್ಲಿ ಉತ್ತರ ಕೊಡ್ತಾರೆ ಅಂತ. ಮಕ್ಕಳು ಇಂಗ್ಲಿಷ್ನಲ್ಲಿ ಉತ್ತರ ಕೊಟ್ರು ಪರ್ವಾಗಿಲ್ಲ ನೀವು ಸತತವಾಗಿ ಕನ್ನಡ ಪದಗಳೇ ಬಳಸುತ್ತೀರಿ ಎಂದು ಕೇಳಿಕೊಂಡಿರುವೆ . ದಿನಕ್ಕೆ ಒಂದು ಪದದ ಹಾಗೆ ವರ್ಷಕ್ಕೆ ೩೬೫ ಪದಗಳು ಕಲಿಸಬಹುದಲ್ಲವೇ ? ಈ ಪ್ರಯತ್ನ ಇವತ್ತಿನಿಂದಲೇ ಶುರುವಾಗಲಿ . ಮುಂದಿನ ರಾಜ್ಯೋತ್ಸವಕ್ಕೆ ನಿಮ್ಮ ಮಕ್ಕಳಿಗೆ ೩೬೫ ಪದಗಳು ಬರುತ್ತದೆ . ಅದನ್ನ ರಾಜ್ಯೋತ್ಸವ ದಿನದಂದು ಸಂಭ್ರಮಿಸಿ . ರಾಜ್ಯೋತ್ಸವಕ್ಕೆ ಒಂದು ಘನತೆ ಸಹ ಹೆಚ್ಚುತ್ತದೆ ಅಲ್ಲವೆ ?. ಇಲ್ಲಿ ಬರೆದಿರುವುದೆಲ್ಲವೂ ನನಗೂ ಸಹ ಅನುವಹಿಸುವುದು. . ಮನೆ ಮನೆಯಲ್ಲಿ ಕನ್ನಡ ನಿತ್ಯ ಮಾತನಾಡುವುದು , ಟೀ ವಿ ಯಲ್ಲಿ ಕನ್ನಡ ತೋರಿಸುವುದು , ಬರೆಸುವುದು , ಕನ್ನಡ ಹಾಡುಗಳನ್ನು ಹಾಡಿಸುವುದು , ಹಾಡುವುದು ಮಾಡಿದರೆ ಈ ಪ್ರಶ್ನೆಯೇ ಏಳುವುದಿಲ್ಲ , ಅಲ್ಲವೇ ? ಕವಿ ವಾಣಿಯನ್ನು ಎಂದೂ ಮರೆಯದಿರೋಣ .
ಎಲ್ಲಾದರೂ ಇರು ಎಂತಾದರು ಇರು ಎಂದೆಂಗಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
https://www.facebook.com/subbu.padmanabh/posts/10217855123828165
--------------------------
ಉತ್ತರ ಭಾರತದಿಂದ ಬಂದಿರುವ ಒಂದು ಹುಡುಗಿ ಹತ್ತು ವರ್ಷ ಬೆಂಗಳೂರಿನಲ್ಲೇ ವಾಸವಿದ್ದು ಬೆಂಗಳೂರಿನಲ್ಲೇ ಅದೂ ಬನಶಂಕರಿಯಲ್ಲೇ ಇಂಜಿನಿಯರಿಂಗ್ ಸಹ ಕಲಿತು ನಮ್ಮ ಜೊತೆಯಲ್ಲೇ ಈಗ ಅಮೇರಿಕಾದಲ್ಲಿ ಕೆಲಸ ಮಾಡ್ತಾ ಇದ್ದಾರೆ . ಅವರು ಬೆಂಗಳೂರಿನಲ್ಲೇ ೧೦ ವರ್ಷ ಇದ್ದರು ಅಂತ ತಿಳಿದ ತಕ್ಷಣ ನಾನು ಅವರಲ್ಲಿ ಕನ್ನಡದಲ್ಲೇ ಮಾತನಾಡಲು ಬಯಸಿದೆ . ನಂಗೆ ಕನ್ನಡ್ ಗೊತ್ತಿಲ್ಲ ಅಂದ್ರು . ನಾನು ಉತ್ತರಿಸಿದೆ ೩ ಪದ ಉಪಯೋಗಿಸಿದೀರಾ . ೧ . ನಂಗೆ ೨. ಕನ್ನಡ್ ೩. ಗೊತ್ತಿಲ್ಲ . ಅದರಲ್ಲಿ ಎರಡು ಪದ ಸರಿ ಇದೆ . ಕನ್ನಡ್ ಬದಲು ಕನ್ನಡ ಹೇಳಿ ಅಷ್ಟೇ ಅಂದೇ . ಮತ್ತೆ ಸರಿ ಹೇಳುದ್ರು . ಆಮೇಲೆ ಹೇಳ್ದೆ ಅದನ್ನೇ ನಂಗೆ ಕನ್ನಡ ಬರುತ್ತೆ ಅಂತ ಹೇಳಿ ಅಂದೆ. ವಾಟ್ ಡಸ್ ಥಟ್ ಮೀನ್ ಅಂತ ಕೇಳುದ್ರು .. ಅಂದ್ರೆ I know ಕನ್ನಡ ಅಂತ ಅಂದೆ .
೩ ಪದ ಗೊತ್ತಿದೆ ಅಂದ್ರೆ ಡೈಲಿ ಒಂದು ಪದ ಹೇಳ್ಕೊಡ್ತೀನಿ ನಿಮಗೆ ೧೦೦ ಪದ ಗೊತ್ತಾದ್ರೆ ಅದರ ಅರ್ಥ ಗೊತ್ತಾದ್ರೆ ಆಮೇಲೆ ಕೇವಲ grammer ಅಷ್ಟೇ . ಅದನ್ನು ಹೇಳಿಕೊಡ್ತೀನಿ ದಯವಿಟ್ಟು ಕನ್ನಡ ಗೊತ್ತಿಲ್ಲ ಅನ್ಬೇಡಿ ಮೇಡಂ ಅಂತ ಕೇಳ್ಕೊಂಡೆ . ಆದರು ಸುಮಾರು ಸರಿ ನಾನು ಮತ್ತೊಬ್ಬರ ಜೊತೆ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿ ದಿಸ್ ಐಸ್ ವಾಟ್ ಯು ಸ್ಪೋಕ್ , ರೈಟ್ ಅಂತ ಮಾತುಗಳ context ಹೇಳ್ತಾರೆ . ನಮ್ಮ ತಂಡದಲ್ಲಿರೋ ಪ್ರತಿಯೊಬ್ಬ ತಮಿಳರು ತೆಲುಗು ಜನರು ಅವರ ಭಾಷೆಯಲ್ಲಿ ಅವರವರ ಜನರ ಜೊತೆ ಸಂಭಾಷಣೆ ನಡೆಸುತ್ತಾರೆ . ಅದಕ್ಕೋ ಏನೋ ಅಮೇರಿಕಾದಲ್ಲಿ ತೆಲುಗು ತುಂಬಾ ವೇಗವಾಗಿ ಬೆಳೆಯುತ್ತಿರುವ ಭಾಷೆ . ಮತ್ತೊಂದು ಸಂಗತಿಯನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದ್ದೇನೆ . ನಮ್ಮ ಕನ್ನಡದ ತಂದೆ ತಾಯಂದಿರು ತಮ್ಮ ತಮ್ಮ ಮಕ್ಕಳಿಗೆ ಇಂಗ್ಲಿಷ್ ನಲ್ಲಿ ವ್ಯವಹರಿಸುವುದನ್ನು ನೋಡಿದ್ದೇನೆ . ನಾವೇ ಮನೆಯಲ್ಲಿ ನಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಡದೆ , ಭಾಷೆಯನ್ನೂ ಮಾತನಾಡುವುದಕ್ಕೆ ಪ್ರೋತ್ಸಹಿಸದೆ ಇದ್ದರೆ ಮುಂದಿನ ದಿನಗಳಲ್ಲಿ ತುಂಬಾ ಕಷ್ಟ ಇದೆ . ಉಪೇಂದ್ರರವರು ಬುದ್ದಿವಂತ ಚಿತ್ರದಲ್ಲಿ ಹೇಳಿರುವ ಹಾಗೆ ಕನ್ನಡಿಗರು ತುಂಬಾ ವಿಶಾಲ ಹೃದಯದವರು . ಮೂರ್ನಾಲ್ಕು ಭಾಷೆ ಕಲಿತರೆ ಮತ್ತು ಮಾತನಾಡ್ತಾರೆ . ನಮ್ಮ ಮಾತೃಭಾಷೆಯನ್ನು ನಾವು ಎಂದೂ ಬಿಟ್ಟುಕೊಡಬಾರದು. ಉಳಿಸಿಕೊಳ್ಳುವುದಲ್ಲದೆ ಬೆಳೆಸುದಕ್ಕೂ ಪ್ರಯತ್ನಿಸುವುದಾದರೆ ಮಾತ್ರ ಮುಂದಿನ ದಿನಗಳಲ್ಲಿ ನಮ್ಮ ಭಾಷೆ ಉಳಿಸಿಕೊಳ್ಳಲು ಸಾಧ್ಯವಾದೀತು. ಈ ನಿಟ್ಟಿನಲ್ಲಿ ನಿಮಗೆ ಇಷ್ಟವಿರುವ ಕ್ಷೇತ್ರವನ್ನು ಆಯ್ಕೆ ಮಾಡ್ಕೊಂಡು ನಮ್ಮ ಕೈಲಿ ಆದಷ್ಟು ಸ್ವಲ್ಪ ಸ್ವಲ್ಪ ಪ್ರಯತ್ನ ಮಾಡಲೇಬೇಕು . ಅತೀ ಬುದ್ದಿವಂತರ ಹಾಗೆ ಸರ್ಕಾರದ ಕೆಲಸ ಅಂತ ಅನ್ಕೊಂಡು ನಮ್ಮ ಕೈಲಾದಷ್ಟು ಕೆಲಸಗಳನ್ನು ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಬಹಳ ಕಷ್ಟ ಇದೆ ಅನ್ನೋ ನೋವು ನನ್ನೊಳಗೆ ತುಂಬಾ ಇದೆ . ನೀವು ನಿಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲೇ ಓದಿಸಿದರೂ ಪರ್ವಾಗಿಲ್ಲ ಆದರೆ ಮನೆಯಲ್ಲಿ ಮಾತ್ರ ಕನ್ನಡ ವಾತಾವರಣ ಕನ್ನಡ ಭಾಷೆಯ ಬಳಕೆ ಮಾತ್ರ ಇರ್ಬೇಕು . ಪ್ರತಿ ಹಬ್ಬಗಳನ್ನು ಆಚರಿಸಿ ಅದರ ಅರ್ಥ ಉದ್ದೇಶ ಎಲ್ಲವನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಅವರು ನನಗೆ ಹೇಳುತ್ತಿದ್ದರು ಕನ್ನಡವನ್ನು ನಿತ್ಯ ಓದು ಬರಿ ಎಂದು ಹೇಳುತ್ತಿದ್ದರು . ನಮ್ಮ ತಂದೆ ನನಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸಿ ಬಿಟ್ಟರು . ಇವತ್ತು ಅವರು ಇಲ್ಲ ಆದರೂ ಕನ್ನಡ ಓದುವುದು ಬರೆಯುವುದು ನನ್ನ ಹವ್ಯಾಸ ವಾಗಿದೆ ಅವರನ್ನು ನೆನೆಸಿಕೊಂಡು ಈ ಲೇಖನ ಬರೆಯುತ್ತಿದ್ದೇನೆ . ಯೋಚಿಸಿ ನೋಡಿ , ಅಮೇರಿಕಾದಲ್ಲಿ ಮನೆಯೊಳಗೇ ಅಲ್ಪ ಸ್ವಲ್ಪ ಕನ್ನಡ ಇನ್ನು ಸ್ವಲ್ಪ ಉಸಿರಾಡ್ತಾ ಇದೆ . ಅದು ಸ್ವಲ್ಪ ಅಷ್ಟೇ . ಪರಸ್ಪರ ಮಾತು ಕಡಿಮೆ ಆಗಿದೆ . ಊಟ ತಿಂಡಿ ಮಾಡುವಾಗಲೂ ಟೀವಿಯೋ ಫೋನೋ ಜೊತೆ ಇರುತ್ತೆ . ಅದರಲ್ಲೇ ರೊಟ್ಟಿಯಂಗಡಿ ಕಿಟ್ಟಪ್ಪ , ನಮ್ಮ ಮನೆಯಲ್ಲೊಂದು ಸಣ್ಣ ಪಾಪ ಈ ರೀತಿಯ ಪದ್ಯಗಳನ್ನು ಸಹ ತೋರಿಸುವುದು ಒಳ್ಳೆಯದು . ನೀವೇ ಯೋಚಿಸಿ , ಕನ್ನಡ ತಂದೆ ತಾಯಂದಿರು ಮಕ್ಕಳಿಗೆ ಕನ್ನಡ ಹೇಳಿಕೊಡಲು ಎಷ್ಟು ಪ್ರಯತ್ನ ಮಾಡಬೇಕು ಅಂತ. ಮನೆಯಿಂದ ಆಚೆ ಇಂಗ್ಲಿಷ್ . ಇವತ್ತಿನ ದಿನ ಸ್ಥಿತಿ ಹೇಗಾಗಿದೆ ಅಂದರೆ ಮಕ್ಕಳನ್ನು ಕನ್ನಡ ಶಾಲೆಗೆ ( ವಾರಕ್ಕೆ ೧ ಗಂಟೆ ಅಷ್ಟೇ ) ಸೇರಿಸಿ ಕೆಲವರು ಮಕ್ಕಳು ಕನ್ನಡದಲ್ಲಿ ಏಕೆ ಮಾತಾಡಲ್ಲ ಅಂತ ಕೇಳ್ತಾರೆ . ಅಮೇರಿಕಾದಲ್ಲಿ ಮನೆಯೊಳಗೇ ಅಲ್ಪ ಸ್ವಲ್ಪ ಕನ್ನಡ ಇನ್ನು ಸ್ವಲ್ಪ ಉಸಿರಾಡ್ತಾ ಇದೆ . ಅದು ಸ್ವಲ್ಪ ಅಷ್ಟೇ . ಮಾತು ಕಡಿಮೆ , ಬರಿ ಫೋನ್ , ಟೀವಿ ಅದರಲ್ಲಿ ಕೂಡ ಇಂಗ್ಲಿಷ್ ಮಯವಾಗಿದೆ. ನೀವೇ ಯೋಚಿಸಿ , ಕನ್ನಡ ತಂದೆ ತಾಯಂದಿರು ಮಕ್ಕಳಿಗೆ ಕನ್ನಡ ಹೇಳಿಕೊಡಲು ಎಷ್ಟು ಪ್ರಯತ್ನ ಮಾಡಬೇಕು ಅಂತ . ಎಷ್ಟೊಂದು ತಂದೆ ತಾಯಂದ್ರುಗೆ ನಾನು ಕೇಳಿಕೊಂಡಿದೀನಿ . ಕನ್ನಡ ಮಾತಾಡ್ಸಿ ಅಂತ . ಅವರ ಉತ್ತರ ಮಕ್ಕಳು ಇಂಗ್ಲಿಷ್ ಅಲ್ಲಿ ಉತ್ತರ ಕೊಡ್ತಾರೆ ಅಂತ. ಮಕ್ಕಳು ಇಂಗ್ಲಿಷ್ನಲ್ಲಿ ಉತ್ತರ ಕೊಟ್ರು ಪರ್ವಾಗಿಲ್ಲ ನೀವು ಸತತವಾಗಿ ಕನ್ನಡ ಪದಗಳೇ ಬಳಸುತ್ತೀರಿ ಎಂದು ಕೇಳಿಕೊಂಡಿರುವೆ . ದಿನಕ್ಕೆ ಒಂದು ಪದದ ಹಾಗೆ ವರ್ಷಕ್ಕೆ ೩೬೫ ಪದಗಳು ಕಲಿಸಬಹುದಲ್ಲವೇ ? ಈ ಪ್ರಯತ್ನ ಇವತ್ತಿನಿಂದಲೇ ಶುರುವಾಗಲಿ . ಮುಂದಿನ ರಾಜ್ಯೋತ್ಸವಕ್ಕೆ ನಿಮ್ಮ ಮಕ್ಕಳಿಗೆ ೩೬೫ ಪದಗಳು ಬರುತ್ತದೆ . ಅದನ್ನ ರಾಜ್ಯೋತ್ಸವ ದಿನದಂದು ಸಂಭ್ರಮಿಸಿ . ರಾಜ್ಯೋತ್ಸವಕ್ಕೆ ಒಂದು ಘನತೆ ಸಹ ಹೆಚ್ಚುತ್ತದೆ ಅಲ್ಲವೆ ?. ಇಲ್ಲಿ ಬರೆದಿರುವುದೆಲ್ಲವೂ ನನಗೂ ಸಹ ಅನುವಹಿಸುವುದು. . ಮನೆ ಮನೆಯಲ್ಲಿ ಕನ್ನಡ ನಿತ್ಯ ಮಾತನಾಡುವುದು , ಟೀ ವಿ ಯಲ್ಲಿ ಕನ್ನಡ ತೋರಿಸುವುದು , ಬರೆಸುವುದು , ಕನ್ನಡ ಹಾಡುಗಳನ್ನು ಹಾಡಿಸುವುದು , ಹಾಡುವುದು ಮಾಡಿದರೆ ಈ ಪ್ರಶ್ನೆಯೇ ಏಳುವುದಿಲ್ಲ , ಅಲ್ಲವೇ ? ಕವಿ ವಾಣಿಯನ್ನು ಎಂದೂ ಮರೆಯದಿರೋಣ .
ಎಲ್ಲಾದರೂ ಇರು ಎಂತಾದರು ಇರು ಎಂದೆಂಗಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
https://www.facebook.com/subbu.padmanabh/posts/10217855123828165