Sunday, January 28, 2018

ರವಿಯ ಕಿರಣ

ರವಿಯ ಕಿರಣಗಳ ಸ್ಪರ್ಶದಿಂದಲ್ಲವೇ 
ನೆಚ್ಚಗಾಗುವುದು ಸಮಸ್ತ ಜೀವಿತವು

ಸ್ವ ಸ್ವರೂಪ ಪರಚೇತನ ಬೆಳಕಿನಾಗಸದಿ  
ಶಕ್ತಿ ಸಂತಸ ಉಕ್ಕಿ ಚಿಮ್ಮುವುದು ಮನದಿ  

ಸಹಸ್ರ ವರುಷ ಕಳೆದರೇನು ಬೆಳಕಿಗೆ 
ತೆನೆಗೆ ಸ್ಪರ್ಶ ಬೇಡವೇ ತಂಡುಲ ಪ್ರಾಪ್ತಿಗೆ 

ಜಗದಲ್ಲೊಬ್ಬ ರವಿ ಸಾಕು ಸಕಲ ಜೀವರಾಶಿಗೆ 
ಒಡಲರಮನೆಗೆ ಬೇಕಿರುವ ಚೇತನವಿದು ಮಿಗೆ !

-ಸುಬ್ಬು ಪದ್ಮನಾಭ್

Thursday, January 18, 2018

ಕಾಶೀನಾಥರವರ ನೆನಪು - ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ


ಪ್ರೀತಿಯ ಕಾಶೀನಾಥ್ ರವರನ್ನು ಅಕ್ಟೋಬರ್ 2016 ರಲ್ಲಿ ಭೇಟಿ ಮಾಡಿದಾಗ ತೆಗೆದ ಚಿತ್ರ.
ಖುಷಿ ಆಯ್ತಪ್ಪ ನಮ್ಮನ್ನ ನೆನಪಿಸ್ಕೊಂಡು ಮನೆಗೆ ಬಂದ್ರಲ್ಲ ಅಂದ್ರು , ಬೆನ್ನು ತಟ್ಟಿದ್ರು .. ಉಭಯ ಕುಶಲೋಪರಿ ಮಾತು ಕಥೆ ಆದ ಮೇಲೆ ಬರ್ತಾ ಇರಿ ಬೆಂಗಳೂರಿಗೆ ಬಂದಾಗ ಅಂದ್ರು ಇದೇ ನನ್ನ ಜೊತೆ ಕಾಶೀನಾಥ್ ರವರ ಕಡೆಯ ಮಾತು . ಬನ್ನಿ ಸಾರ್ , ಒಂದು ಸೆಲ್ಫಿ ತೆಕೊಳೋಣ ಅಂತ ತೆಕ್ಕೊಂಡೆ. 
ನಾನು ಅವರ ಜಯನಗರ ಮನೆನಲ್ಲಿ ಬಾಡಿಗೆಗೆ ಇದ್ದೆ, ಒಟ್ಟು 5 ಮನೆ , ಜಾಯಿಂಟ್ ಫ್ಯಾಮಿಲಿ 5 ಜನ ಅಣ್ಣ ತಮ್ಮಂದಿರು. ಗಾಯತ್ರಿ ಅವರ ಅಕ್ಕ - "ಗಾಯತ್ರಿ stores " ಅಂಗಡಿಯಲ್ಲಿ ಸುಮಾರು ಸರಿ ಸಾಮಗ್ರಿಗಳು ಖರೀದಿ ಮಾಡುತ್ತಿದ್ದೆ. ಕಾಶೀನಾಥ್ ಅಪ್ಪ ಅಮ್ಮ ಎಲ್ಲರನ್ನು ಒಟ್ಟಿಗೆ ನೋಡುತ್ತಿದ್ದೆ .
ಸಾಮಾನ್ಯ ಮನುಷ್ಯರಿಗೆ ಕಾಶೀನಾಥ್ ಸಿನಿಮಾನ ಅಯ್ಯಪ್ಪ ಬೇಡವೇ ಬೇಡ ಅನ್ನೋ ಮನೋಭಾವನೆ ಇಟ್ಟುಕೊಂಡವರು ಹಲವಾರು ಆದರೆ ಅವರ ಹತ್ತಿರ ಅವಕಾಶ ಕೇಳಿ ಹೋದವರಿಗೆ ಅವರ ಜೊತೆ ಮಾತನಾಡದಿದವರಿಗೆ ಅವರ ಅಂತರಂಗ ಗೊತ್ತಾಗುತ್ತದೆ . ತುಂಬಾ ಒಳ್ಳೆಯ ನಡವಳಿಕೆ ಉಳ್ಳಂತವರು, ಅವರಿಗೆ ಸೈಂಟಿಸ್ಟ್ ಆಗ್ಬೇಕು ಅಂತ ಆಸೆ ಇತ್ತು ಅದೇ ಬುದ್ದಿವಂತಿಕೆ ಕನ್ನಡ ಸಿನೆಮಾಕ್ಕೆ ಧಾರೆ ಎರೆದರು . ಅದಕ್ಕೆ ನೋಡಿ ಎಷ್ಟು ಜನರು ಅವರ ಒಡನಾಟ ಇಟ್ಟುಕೊಂಡವರು ತಮ್ಮ ಸಂತಾಪದ ಮಾತುಗಳು ಸುಂದರವಾಗಿ ಮಾತನಾಡುತ್ತಿದ್ದಾರೆ .
ನಾನು ನೋಡಿದ ಬಹಳ ಸರಳ ಜೀವಿ , ಏನೂ ಒಣ ಜಂಬ ಇಲ್ಲ ಸಿನಿಮಾ ಗತ್ತು ಮೊದಲೇ ಏನೂ ಇರಲಿಲ್ಲ . ಒಂದು ಟೋಪಿ ಹಾಕೊಂಡು ಯಾವಾಗ್ಲೂ ಮನೇನಲ್ಲೇ ಇರ್ತಾ ಇದ್ರೂ , ಪುಸ್ತಕಗಳು ಓದೋದು ಪೇಪರ್ ಓದೋ ಅಭ್ಯಾಸ ಜಾಸ್ತಿ , ಸಂಜೆ ಕೆಲ್ಸದಿಂದ ಬಂದ ಮೇಲೆ ಎಷ್ಟೊಂದು ಸರಿ ಮಾತಾಡಿಸ್ತಾ ಇದ್ರು. 2003 ರಲ್ಲಿ ನನಗೆ ಇನ್ನೂ ನೆನಪಿದೆ ಸಿನಿಮಾಕ್ಕೆ ಬರೋ ಇಷ್ಟ ಇದ್ದೀಯ ಅಂತ ನನ್ನ ಕೇಳಿದ್ರು . ಒಳ್ಳೆ ಎತ್ತರ ಇದ್ದೀರಾ , ಎಷ್ಟಿದೀರಪ್ಪಾ ಅಷ್ಟುದ್ದ ಇದ್ದೀರಲ್ಲಾ ಅಂತ ಕೇಳಿದ್ರು . ದುಡ್ಡು ಚೆನ್ನಾಗಿ ದುಡೀಬೇಕು ಅಂದ್ರೆ ಸಿನಿಮಾದಲ್ಲಿ ಸಾಧ್ಯವಾ ಅಂತ ಕೇಳಿದ್ದಕ್ಕೆ ಬಂತು ತಟ್ ಅಂತ ಉತ್ತರ. ಸಿನಿಮಾಕ್ಕೆ ಪ್ರೀತಿ ಇದ್ದರೆ ಮಾತ್ರ ನೆಲೆ ಊರಲು ಕಾರಣ ದುಡ್ಡು ಮಾಡೋ ಚಿಂತನೆ ಇತ್ತು ಬಂದರೆ ಜಾಸ್ತಿ ಉಳ್ಯಲ್ಲ ಇಲ್ಲಿ - ಜೋಪಾನ ಅಂತ ಹೇಳ್ತಾ ಇದ್ರು.
ತುಂಬಾ ಸರಳ ಸಜ್ಜನ - ಎಲ್ಲರಿಗೂ ಒಳ್ಳೆದಾದ್ರೆ ಸರಿ ಅಷ್ಟೇ ಅನ್ನೋ ಮನೋಭಾವ .ಕನ್ನಡದ ಬುದ್ದಿವಂತ ನಟ ನಿರ್ದೇಶಕ ನಿರ್ಮಾಪಕ - ಕನ್ನಡಕ್ಕೆ ದೊಡ್ಡ ನಷ್ಟ ಆಗಿರೋದು ಮಾತ್ರ ಸತ್ಯ . 
ಲೊ ಬಜೆಟ್ ಅಲ್ಲಿ ಸಿನಿಮಾ ಮಾಡೋದು ಹೇಗೆ ಅಂತ ಆ ಕಾಲದಲ್ಲೇ ತೋರಿಸಿಕೊಟ್ಟವರು . ಆ ಕಾಲದಲ್ಲೇ ದೊಡ್ಡ ದೊಡ್ಡ ಕಲಾವಿಧರ ದಂಡು ಇರಬೇಕಾದರೆ ಒಳ್ಳೆಯ ಬರವಣಿಗೆ ಇಟ್ಟುಕೊಂಡು ಮಡಿವಂತಿಕೆ ಬಿಟ್ಟು ಕರ್ನಾಟಕ ತಿರುಗಿ ನೋಡುವ ಹಾಗೆ ನಿರ್ದೇಶನ ಮಾಡಿ ತೋರ್ಸಿದ್ರು, ಒಂದಲ್ಲ ಎರಡಲ್ಲ ಹಲಾವಾರು ಚಿತ್ರಗಳು. ಕಡಿಮೆ ಬಜೆಟ್ ಅಲ್ಲಿ ಸಿನಿಮಾ ಮಾಡಿ ಅಪರ್ಣ ಥೀಯೇಟರ್ ಗೆ ಲಗ್ಗೆ ಹೊಡೆದ ಜನರು ಕೋಟಿಗಟ್ಟಲೆ . ಗೆಲುವು ಸೋಲು ಏನು ಬಂದರೂ ಸಮಾನವಾಗಿ ತೆಗೆದುಕೊಂಡು ಹೋಗುತ್ತಿದ್ದವರು . ಬರವಣಿಗೆ ಅಚ್ಚುಕಟ್ಟಾಗಿದ್ದರೆ ಯಾರು ಬೇಕಿದ್ರೂ ಹೀರೋ ಆಗಬಹುದು ಅಂತ ತಾವೇ ಹೀರೋ ಆಗಿ ಕೂಡ ಗೆದ್ದವರು , ಸಾಹಿತ್ಯ ಓದಿರುವವರು, ಬರಹ , ವಿಚಾರಗಳು ಹೆಚ್ಚು ಉಳ್ಳಂತವರು. ವಿ ಮನೋಹರ್ , ಬ್ಯಾಂಕ್ ಜನಾರ್ಧನ್, ಸುನಿಲ್ ಕುಮಾರ್ ದೇಸಾಯಿ ಹೀಗೆ ಹಲಾವಾರು ಪ್ರತಿಭೆಗಳಿಗೆ ಪ್ರೋತ್ಸಾಹ ಕೊಟ್ಟು ಬೆಳೆಸಿದ್ದರು . ಕರ್ನಾಟಕದಲ್ಲಿ Super Stardom ಸಂಪಾದಿಸಿ ಅಪಾರ ಜನಪ್ರಿಯತೆ ಕಂಡ , ಪ್ರಜಾಕೀಯ ಹುಟ್ಟು ಹಾಕಿ ಪ್ರಜಕೀಯ ಮಾಡುತ್ತಿರುವ ಕನ್ನಡದ ಗಂಡುಗಲಿ ಮತ್ತೆ ಹೆಸರುವಾಸಿಯಾದಂತ Real Star ಉಪೇಂದ್ರ ಕೂಡ ಇವರ ಘರಡಿಯ ಕೂಸು . ಉಪೇಂದ್ರರವರು ಕಾಶೀನಾಥ್ ಶಿಷ್ಯ ಎಂದು ಹೆಮ್ಮೆಯಿಂದ ಇವತ್ತಿಗೂ ಹೇಳಿಕೊಳ್ಳುತ್ತಾರೆ. ಸಾಧ್ಯವಾದ್ದಂತ ಸಾಮಾಜಿಕ ಚಿಂತನೆ ಮತ್ತು ಕಳಿಕಳಿ ಅಪಾರ , ಅದನ್ನ ಆಧಾರವಾಗಿಟ್ಟುಕೊಂಡು ತಮ್ಮ ಸ್ವಂತ ದುಡ್ಡು ಹಾಕಿ ನಿರ್ದೇಶನ ಮಾಡಿ ಹೊಸಬರ ಗುಂಪು ಕಟ್ಟಿಕೊಂಡು ಸುಮಾರು ಜನರಿಗೂ ಅವಕಾಶ ಕೊಟ್ಟ ಧೀಮಂತ ಹೃದಯವಂತ ಸಿನಿಮಾ ಪ್ರೇಮಿ . ಕಾಶೀನಾಥ್ ಗಲಾಟೆ ಇಲ್ಲ , ಅಬ್ಬರ ಇಲ್ಲ ,ಒಬ್ಬ ವೈರಿಯೂ ಇಲ್ಲದೆ ಕೆಲ್ಸದಿಂದ ಮಾತ್ರ ಮನೆ ಮಾತಾದ ನಿಜ ಜೀವನದ ಹೀರೋ ಕಾಶಿನಾಥ್ - ಬದುಕಿನ ಕೊನೆಯ ಪುಟಗಳು ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ . 
ಅವರು ಕಡೆಯದಾಗಿ ನಟಿಸಿದ "ಚೌಕ " ನಾನು ಅಮೇರಿಕಾದಲ್ಲಿ ನೋಡಿದ್ದೆ , ಅವರ ಅತ್ಯುತ್ತಮ ಅಭಿನಯಕ್ಕೆ ಸಿನಿಮಾ ಹೆಸರು ಮಾಡಿತ್ತು . ಎಂಥ ಒಂದು ಸುಂದರವಾದ ಪಾತ್ರ ಮಾಡಿ ಮನೆ ಮಾತಾಗಿ ಅವರ ಜೀವನ ಪ್ರಯಾಣ ಮುಗಿಸಿಕೊಂಡರು .
ಮೃತರಿಗೆ ಶಾಂತಿ ಪ್ರಾಪ್ತಿಯಾಗಲಿ ಹಾಗು ಭಗವಂತ ಅವರ ಮನೆಯವರಿಗೆ ಮರಣದ ದುಃಖ ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರಾರ್ಥನೆ.
Actor, film producer, director, composer of Kannada Film Industry expired on Jan 18 2018. He was 67 year old. He had one dream that he wanted to direct an English film with universal theme/philosophy but it was not to be.
Om Shanti !!!

Wednesday, January 17, 2018

ನೂರಾರಿವೆ


ಮೈತ್ರಿಯ ಮಾತು ಸಾಕೆ
ಎಚ್ಚರ ಇರೋ ಸ್ನೇಹ ಬೇಕು  
ಎಲ್ಲವೂ ಬಿಡಿಸಿ ಹೇಳಬೇಕೆ
ಪ್ರೀತಿ ಜೊತೆಗೆ ನಗೆಯೂ ಬೇಕು
- ಸುಬ್ಬು ಪದ್ಮನಾಭ 

ಎಲ್ಲಿರುವನೋ ?


ಜಗವ ಮಾಡಿದಂಥ ದೇವ
ಎಲ್ಲಿ ಹೇಗೆ ಇರುವನೋ 
ಪ್ರತಿ ಉಸಿರಲ್ಲಿರುವನಂತೆ 
ನಿನ್ನಲ್ಲಿ ಅವನನ್ನು ಕಾಣೋ 
-ಸುಬ್ಬು ಪದ್ಮನಾಭ

Sunday, January 7, 2018

ನೋಡಿದ ಪ್ರೀತಿ

ನೋಡಿದ ಪ್ರೀತಿಯ ನೋಟ 
ಉಯ್ಯಾಲೆಯು ಮನಕೆ 
ಆಡಿದ ಪ್ರೇಮದ ಭಾಷೆ
ರಸ ಕಾವ್ಯವು ಮಿಡಿತಕೆ
-ಸುಬ್ಬು ಪದ್ಮನಾಭ

Thursday, January 4, 2018

ಬಬ್ರುವಾಹನ

ಏನು ಪಾರ್ಥ ? ಹಾಹಾ
ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ
ಈಗ ಆ ಶಕ್ತಿ ನಿನ್ನಲ್ಲಿಲ್ಲ
ಪರಮ ಪತಿವ್ರತೆಯನ್ನು ನಿಂದಿಸಿದ ಮರುಕ್ಷಣವೇ ನಿನ್ನ ಪುಣ್ಯವೆಲ್ಲಾ ಉರಿದುಹೋಗಿ ಪಾಪದ ಮೂಟೆ ನಿನ್ನ ಹೆಗಲು ಹತ್ತಿದೆ .
ಹ್ಞೂ ,,ಎತ್ತು ನಿನ್ನ ಗಾಂಡೀವ ... ಹೂಡು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶುಪತಾಸ್ತ್ರ
ಶಿವನನ್ನು ಗೆದ್ದ ನಿನ್ನ ಶೌರ್ಯ ನನಗು ಸ್ವಲ್ಪ ತಿಳಿಯಲಿ
ಅಥವಾ ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ
ಮಧಾಂತ , ಅವರಿವರನ್ನು ಕೊಂದೆ ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ !! ಸುರಲೋಕಕ್ಕೆ ಸೋಪಾನ ಕಟ್ಟಿ ಮತ್ಸ್ಯ ಯಂತ್ರವನ್ನ ಭೇದಿಸಿ ರಣಾಂಗಣದಲ್ಲಿ  ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನೂ ತಿಳಿದಿದೆಯೋ
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೊಳ್ ಆರ್ಜಿಸಿದ ಆ  ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀ ಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆಕಾಯ್ದು  ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ
ಅಸಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪಥವಮ್ ಪಡೆದವನೋ
ಆಗ್ರಹಗಳೆದುರಾಗೋ ಆರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ ,ಉಗ್ರಪ್ರತಾಪಿ
ಓಹೋಹೋ ಉಗ್ರಪ್ರತಾಪಿ, ಹಾಂ  ಹಹಹ
ಸಭೆಯೊಳಗೆ ದ್ರೌಪತಿಯ ಸೀರೆಯನ್ನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈ ಎಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೂ ಗುಂಡಿಗೆಯು ನಿನಗೆಲ್ಲೋ
ಖಂಡಿಸದೆ ಉಳಿಸುವೆ
ಹೋಗೋ ಹೋಗೆಲೊ ಶಿಖಂಡೀ... ಈ.......
ಪಡಾಪಡಾ ಶಿಖಂಡಿಯೆಂದಡಿಗಡಿಗೆ ನುಡಿಯಬೇಡಲೋ ಮೂಡ
ಖಂಡೆರೆದೆ ಗುಂಡಿಗೆಯ ಖಂಡಿಸುತ
ರಣಚಂಡಿಗೌತಣವೀವ ಈ ಗಾಂಡೀವಿ
ಗಂಡುಗಲಿಗಳ ಗಂಡ ಉದ್ದಂಡ
ಭೂಮಂಡಲದೊಳ ಕಂಡ ಕೀರ್ತಿ ಪ್ರಚಂಡಾ
ಚಂಡನೂ ಪ್ರಚಂಡನೂ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಬಂಗ
ಕದನದೊಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ
ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ
ಅಂತಕನಿಗೆ ಅಂತಕನು ಈ ಬಬ್ರುವಾಹನ  
ಮುಚ್ಚು ಬಾಯಿ ಜಾರಿಣಿಯ ಮಗನೆ
ಏ ಪಾರ್ಥ , ನನ್ನ ತಾಯಿ ಜಾರಿಣಿಯೋ ಪತಿವೃತೆಯೋ ಎಂಬ ನಿರ್ಧಾರಕ್ಕೋಸ್ಕರವೇ  ಈ ಯುದ್ಧ
ಮುಗಿಯಿತು ನಿನ್ನ ಆಯಸ್ಸು
ಅದನ್ನ ಮುಗಸಕ್ಕೇ ಇಲ್ಲಿ ಯಾರಿದರೆ ನಿನ್ನ ಸಹಾಯಕ್ಕೆ
ಶಿಖಂಡಿನ ಮುಂದೆ ನಿಲ್ಸಿ ಭೀಷ್ಮನ ಕೊಂದ ಹಾಗೆ ನನ್ನನ್ನು  ಕೊಲ್ಲೋದಕ್ಕೆ ಇಲ್ಲಿ ಯಾವ ಶಿಖಂಡಿನು ಇಲ್ಲ
ಧರ್ಮರಾಯನ ಬಾಯಲ್ಲಿ ಅಬದ್ಧ ನುಡ್ಸಿ ದ್ರೋಣಾಚಾರ್ಯರನ್ನ ಕೊಂದ ಹಾಗೆ ನನ್ನ ಕೊಲ್ಲಲು ಸುಳ್ಳು ಹೇಳೋದಕ್ಕೆ ಧರ್ಮರಾಯ ಇಲ್ಲಿಲ್ಲ
ಹ್ಞೂ  , ರಥದ ಚಕ್ರ ಮುರಿದಿದ್ದಾಗ ಕವಚಕುಂಡಲಗಳನ್ನ ದಾನ ಪಡೆದು ಕರ್ಣನ್ನ ಕೊಲ್ಸಿದ  ಹಾಗೆ ನನ್ನನ್ನ ಕೊಲ್ಸಕ್ಕೆ ನಿನ್ನ ಶ್ರೀ ಕೃಷ್ಣ ಪರಮಾತ್ಮ ಇಲ್ಲಿಲ್ಲ
ಇರೋದು ಪತೀವ್ರತೆಯಾದ ಮಗನಾದ ನಾನು ಪತ್ನಿದ್ರೋಹಿಯಾದ ನೀನು !!!