Monday, November 27, 2017

ಕಗ್ಗ 904 - ಕನ್ನಡದ ಭಗವದ್ಗೀತೆ

ವಹಿಸು ಕೆಲ ಭಾರಗಳ; ಸಹಿಸು ಕೆಲ ನೋವುಗಳ |
ಪ್ರಹರಿಸರಿಗಳನನಿತು ಯುಕ್ತಗಳನರಿತು ||
ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು |
ವಿಹರಿಸಾತ್ಮಾಲಯದಿ - ಮಂಕುತಿಮ್ಮ

ಜೀವನದ ಕೆಲವು ಭಾರಗಳನ್ನು ನಾವು ವಹಿಸಿಕೊಳ್ಳಲೇಬೇಕು , ಕೆಲವು ನೋವುಗಳನ್ನು ಸಹಿಸಿಕೊಳ್ಳಲೇಬೇಕು . ಯೋಗ್ಯ ಯಾವುದು ಅನುಚಿತ ಯಾವುದು ಎಂದು ಅರಿತು ನಮಗೆ ಹಿತವೆನಿಸದೆ ಇರುವುದರಿಂದ ದೂರವಿರಬೇಕು . ಈ ಜಗತ್ತಿನ ನಾಟಕದಲ್ಲಿ ನಾವು ಮನಸ್ಸು ಕೊಟ್ಟು ಕುಣಿಯುತ್ತಾ ಆತ್ಮಸಂತೋಷದಿಂದ ವಿಹರಿಸಬೇಕು .

Sunday, November 26, 2017

ಕಗ್ಗ 919 - ಕನ್ನಡದ ಭಗವದ್ಗೀತೆ

ಕಗ್ಗ - ಕನ್ನಡದ ಭಗವದ್ಗೀತೆ
--------------------
ಜೀವದುದಯ ರಹಸ್ಯ, ಜೀವವಿಲಯ ರಹಸ್ಯ |
ಜೀವನದ ದೃಶ್ಯ ಮರುವಿನ ಬಿಸಿಲ್ಗುದುರೆ ||
ಭಾವಿಸಲಿದೇ ತತ್ತ್ವ : ಬ್ರಹ್ಮಮಾಯೆಯೆ ವಿಶ್ವ |
ಕೇವಲಾತ್ಮ ಬ್ರಹ್ಮ - ಮಂಕುತಿಮ್ಮ ||
ಜೀವದ+ಉದಯ , ಬಿಸಿಲ್+ಕುದುರೆ , ಭಾವಿಸಲು+ಇದೆ , ಕೇವಲ + ಆತ್ಮ
ವ್ಯಾಖ್ಯಾನ :
ಜೀವವು ಒಂದು ಉಪಾದಿಯಲ್ಲಿ ಹೇಗೆ ಹುಟ್ಟಿಕೊಂಡು ಒಂದು ದಿನ ಕೊನೆಗೊಳ್ಳುತ್ತದೆ ಎನ್ನುವ ವಿಚಾರವೇ ರಹಸ್ಯವಾಗಿದೆ . ಆದರೆ ಈ ಜೀವನದ ದೃಶ್ಯ ಮಾತ್ರ ಒಂದು ಮರುಭೂಮಿಯಲ್ಲಿನ ( ಮರುವಿನ ) ಬಿಸಿಲ್ಗುದುರೆಯ ಹಾಗೆ ಕಾಣುತ್ತಿದೆ . ಭಾವಿಸಲು ಇದೇ ತತ್ವ - ವಿಶ್ವವೆಲ್ಲವೂ ಬ್ರಹ್ಮನು ಸೃಷ್ಟಿಸಿದ ಮಾಯಾಲೋಕ . ಕೇವಲ ಆತ್ಮವೇ ಬ್ರಹ್ಮ . ಇನ್ನೂ ಹೆಚ್ಚು ವಿವರಣೆ ನೀಡುವುದಾದರೆ ನಮ್ಮ ದೇಹ ಬುದ್ದಿ ಅಹಂಕಾರವೆಂಬುದು ಪ್ರಕೃತಿ ಅಂದರೆ ಅದು ನಿಧಾನವಾಗಿ ಬದಲಾವಣೆಯಾಗಿ ನಶಿಸಿಹೋಗುವಂತಹದ್ದು. ಆದರೆ ಆತ್ಮಕ್ಕೆ ಸಾವಿಲ್ಲ , ಅದು ನಿರ್ಗುಣ ನಿರಾಕಾರ ಸಗುಣ ಸರ್ವವ್ಯಾಪಿ - ಎಲ್ಲೆಲ್ಲೂ ಬೆಳಗುತ್ತಿರುವ ಜ್ಯೋತಿ. ಇದನ್ನೇ ಜಗದ್ಗುರು ಭಗವತ್ಪಾದರಾದ ಆದಿಶಂಕರರು " ಅಹಂ ಬ್ರಹ್ಮಾಸ್ಮಿ " ಎಂದು ವಿಶ್ವಕ್ಕೆ ತಿಳಿಸಿರುವ ಅದ್ವೈತ ಸಿದ್ದಾಂತ .

ನನ್ನ ತಂದೆಯ ಬದುಕು ನನಗೆ ಕಲಿಸಿಕೊಟ್ಟ ಪಾಠಗಳು


ನಮ್ಮ ಮನೆಯಲ್ಲಿ ನನ್ನ ತಂದೆಯವರ ಒಂದು ಹೆರ್ಕ್ಯುಲಸ್ ಸೈಕಲ್ಲು. ನಾನು ಹುಟ್ಟುವ ವೇಳೆಗೆ ಅದಕ್ಕೆ ೨೦ ವರ್ಷ ಆಗಿತ್ತು. ಅದರಲ್ಲೇ ಅವರು ಪೂರ್ತಿ ಜೀವನ ಕಳೆದರು. ನನಗೆ ನಮ್ಮ ಚಿಕ್ಕಪ್ಪ ಹೈ ಸ್ಕೂಲ್ ಗೆ ಬಂದಾಗ ಅಟ್ಲಾಸ್ ಸೈಕಲ್ ಕೊಟ್ಟರು. ಒಟ್ಟು ಮನೆಯಲ್ಲಿ ಎರಡು ಸೈಕಲ್ಲುಗಳೇ ಕಲಿಸಿಕೊಟ್ಟಂತ ಪಾಠ , ಅದರಿಂದ ಸಿಕ್ಕಂತಾ ಸಂತೋಷ ಇವತ್ತು ಬಂಗಲೆಯಂತ ಮನೆಯಲ್ಲಿ ವಾಸವಾಗಿದ್ದು ಕಣ್ಣಿಗೆ ಕಾಣುವುದೆಲ್ಲವನ್ನೂ ಅನುಭವಿಸಿ ಏ ಸಿ ಕಾರಿನಲ್ಲೇ ಓಡಾಡಿದರು ಸಿಗದಿರುವುದು ನನ್ನ ಸ್ವಂತ ಅನುಭವ.
ಆ ಸೈಕಲ್ಲುಗಳನ್ನು ದಿನಾ ಒರೆಸಿಕೊಂಡು ಆಗಾಗ ಸ್ನಾನ ಮಾಡ್ಸಿ , ಆಯುಧ ಪೂಜೆಯ ದಿನ ಪೂಜೆ ಮಾಡಿ ಬಲೂನ್ ಸಿಕ್ಸಿ , ಗಂಧದ ಕಡ್ಡಿ ಸಿಕ್ಸಿ ಒಂದು ದೊಡ್ಡ ರೌಂಡ್ ಹೋಗಿ ಬರುತ್ತಿದ್ದೆ . ಎಂಟನೇ ತರಗತಿಯಿಂದ ಇಂಜಿನಿಯರಿಂಗ್ ೫ ನೇ ಸೆಮಿಸ್ಟರ್ ತನಕ ನನ್ನ ಅಚ್ಚುಮೆಚ್ಚಿನ ಸ್ನೇಹಿತನಾಗಿ ನನ್ನ ಜೊತೆಯೇ ಇತ್ತು . ಪ್ರತಿನಿತ್ಯ ಶಾರದಾ ವಿಲಾಸ್ ಶಾಲೆ ಮತ್ತು ಕಾಲೇಜಿಗೆ ಹೋಗಿ ಬರುತ್ತಿದ್ದೆ . ಇಂಜಿನಿಯರಿಂಗ್ ಕಲಿಯುವ ದಿನಗಳಲ್ಲಿ ಮೈಸೂರು ಬಸ್ ಸ್ಟಾಂಡ್ ಎದುರು ಇದ್ದ ವೆಲ್ಲಿಂಗ್ಟನ್ ಸೈಕಲ್ ಸ್ಟ್ಯಾಂಡ್ನಲ್ಲಿ ಸೈಕಲ್ಲನ್ನು ಇಟ್ಟು ಬಸ್ ಹಿಡಿದು ಮಂಡ್ಯಕ್ಕೆ ಇಂಜಿನಿಯರಿಂಗ್ ಕಲಿಯಲು ಹೋಗುತ್ತಿದ್ದೆ. ಇಂಜಿನಿಯರಿಂಗ್ ಕಲಿಯುವ ದಿನಗಳಲ್ಲಿ ೨:೨೦ ಕ್ಕೆ ವಾಪಸ್ ಬಂದು ಮಂದಿರಾ ಬೇಡಿ ನಟಿಸಿದ್ದ 'ಶಾಂತಿ' ಧಾರಾವಾಹಿ ನೋಡುವ ಹಂಬಲ, ಅದಕ್ಕೆಂದೇ ಸೀದಾ ಮನೆಗೆ ಬಂದು ನಮ್ಮ ಕೇಶುಭಾವನ ಮನೆಯಲ್ಲಿ ಟೀವಿ ಮುಂದೆ ಹಾಜರು .
ಮೈಸೂರಿನ ಹಲವಾರು ಚಿತ್ರಮಂದಿರಕ್ಕೆ ( ಗಣೇಶ , ವಿದ್ಯಾರಣ್ಯ , ಸರಸ್ವತಿ , ಪದ್ಮ , ಶಾಂತಲಾ , ವುಡ್ಲ್ಯಾಂಡ್ಸ್ , ಸಂಗಮ್ , ರಣಜಿತ್ , ರತ್ನ, ಸ್ಟರ್ಲಿಂಗ್ , ಸ್ಕೈಲೈನ್, ಲಿಡೋ ) ನಾನು ಮತ್ತು ನನ್ನ ಸ್ನೇಹಿತರು ನನ್ನ ಸೈಕಲ್ ಹತ್ತಿ ಡಬಲ್ಸ್ ಕೆಲವು ಸರಿ ಟ್ರಿಪ್ಪಲ್ ರೈಡ್ ಮಾಡಿಕೊಂಡು ಸಿನೆಮಾ ನೋಡಲು ಹೋಗುತ್ತಿದ್ದೆವು.
ನಾನು ಮತ್ತು ನನ್ನ ಪೂಜ್ಯ ತಂದೆಯವರು ಪ್ರತಿ ಗುರುವಾರ ನಮ್ಮ ತಂದೆಯ ಸೈಕಲ್ಲಲ್ಲೇ ಕೃಷ್ಣಮೂರ್ತಿಪುರಂ ರಾಯರ ಮಠಕ್ಕೆ ಡಬಲ್ಸ್ ಹೋಗುತ್ತಿದ್ದವು ರಾಯರ ದರ್ಶನ ಮಾಡುತ್ತಿದ್ದೆವು.
ಚಾಮುಂಡಿಪುರಂ ತುಂಬಾ ಅಪ್ ಇದೆ ಮತ್ತು ಶಾರದಾ ವಿಲಾಸ್ ಕಾಲೇಜು ಹತ್ರ ಅಪ್ ಇದೆ ನನ್ನ ತಂದೆ ಪೆಡಲ್ ಹೊಡೆಯುವಾಗ ಅವರು ಕಷ್ಟ ಪಡುತ್ತಾ ಇದ್ದಿದ್ದು ನೋಡಿ ಅದೇ ಪೆಡಲ್ ಮೇಲೆ ಅರ್ಧ ಕಾಲು ಹಾಕಿ ಪೆಡಲ್ ಮಾಡ್ತಿದ್ದೆ. ರಾಯರ ಪಂಚಾಮೃತ ಅಭಿಷೇಕ ಸೇವಿಸಲು ಮಹಾ ಇಷ್ಟ , ಕಾತುರತೆ. ವಠಾರದಲ್ಲಿ ಎಲ್ಲರ ಮನೆಗೆ ಕೊಟ್ಟು ಬಾ ಅಂತ ಅಜ್ಜಿ ಕಳುಹಿಸುತ್ತಿದ್ದರು. ವಾಪಸ್ ಬಂದ ಮೇಲೆ ಶಾಲೆಗೆ ಹೋಗುವುದು. ಅವರು ಕೆಲ್ಸಕ್ಕೆ ಹೋಗುವುದು.ಇವೆಲ್ಲವೂ ಚಿಕ್ಕಂದಿನಿಂದ ರೂಡಿ.
ಇಬ್ಬರಿಗೂ ಎರಡು ಸೈಕಲ್ ಅಷ್ಟೇ , ತಂದೆಯ ರೈಲ್ವೆ ಕೆಲ್ಸದಿಂದ ವಸ್ತು ವಾಹನ ಮನೆ ಕಟ್ಟಿಕೊಳ್ಳುವಷ್ಟು ದುಡ್ಡು ನಮ್ಮ ತಂದೆಗೆ ಇರಲಿಲ್ಲ . ಸಂಸಾರ ದೊಡ್ಡದು ..೫ ಜನರಿಗೆ ವಿದ್ಯೆ ಕೊಡಿಸಿ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದೇ ಆಗಿನ ಕಾಲಕ್ಕೆ ದೊಡ್ಡ ವಿಷಯ , ಸಾಲ ಸೌಲ ಮಾಡಿ ಮನೆ ಕಟ್ಕೋಬೇಕು ಅನ್ನೋದು ಅವರಿಗೆ ಬೇಕಿರಲಿಲ್ಲ. ಸಾಲ ಮಾತ್ರ ಯಾವತ್ತೂ ಮಾಡಬಾರದು ಅನ್ನೋ ಮನೋಭಾವ . ವಸ್ತು ವಾಹನಗಳು ಬೇಕು ಬೇಕು ಅನ್ನುವ ಆಸೆ ಆಗ ನನ್ನಲ್ಲಿ ಇರಲಿಲ್ಲ, ನನ್ನ ತಂದೆ ಒಂದೇ ಮಾತು ಹೇಳುತ್ತಿದ್ದರು ಚೆನ್ನಾಗಿ ಓದು ಬರಿ. ಎರಡನೇ ಪೀ ಯು ಇಂದ ಇಂಜಿನಿಯರಿಂಗ್ ಮುಗಿಯುವ ತನಕ ಬರೀ ಟೀವಿ , ಸ್ನೇಹಿತರು ಅಂತ ಕಾಲ ಹರಣ ಮಾಡುತ್ತಿದ್ದೆ . ಕಾಲೇಜು ಪುಸ್ತಕಗಳನ್ನು ತುಂಬಾ ಏನೂ ಓದಿ ಓದಿ ದಬ್ಬಾಕಿಲ್ಲ , ಎಷ್ಟು ಬೇಕೋ ಅಷ್ಟು . ಜೀವನ ಪುಸ್ತಕಗಳನ್ನು ಚೆನ್ನಾಗಿ ಓದಿಕೊಂಡೆ ಅನ್ನಬಹುದು. ಅವರ ಮಾತುಗಳನ್ನು ಚಾಚೂತಪ್ಪದೆ ಅಕ್ಷರಸಹ ಇವತ್ತಿಗೂ ನೆನಪಿಟ್ಟುಕೊಂಡು ಪರಿಪಾಲಿಸಕೊಂಡು ಬರ್ತಾ ಇದ್ದೀನಿ. ನನ್ನ ಕೈಲಿ ಆಗುವುದು ನಾನು ಮಾಡ್ತೀನಿ ಅನ್ನುತ್ತಿದ್ದರು. ಅವರು ತುಂಬಾ ಕಷ್ಟ ಜೀವಿ ಅದಕ್ಕೆ ನನಗೆ ಏನೂ ಕೇಳಬಾರದು ದುಡ್ಡು ಕೇಳಬಾರದು ಶೋಕಿ ಮಾಡುವುದಕ್ಕೆ ದುಡ್ಡು ಸುರಿಯಬಾರದು ಅನ್ನುವುದು ಆಗಲೇ ಮನದಟ್ಟಾಗಿತ್ತು . ಯಾರಾದ್ರೂ ತುಂಬಾ ಕಷ್ಟ ಇವರಿಗೆ ಅಂತ ಅಂದ್ರೆ ನನಗೆ ಮಲ್ಕೋಳೊ ಸಮಯದಲ್ಲಿ ಹೇಳ್ತಾ ಇದ್ದ ಮಾತುಗಳು "ಕಷ್ಟ ಕಾರ್ಪಣ್ಯದಿಂದ ಮಾತ್ರ ಮನುಷ್ಯ ಕಲಿಯೋಕ್ಕೆ ಸಾಧ್ಯ ರಾಜ . ಸುಖದ ಸುಪ್ಪತಿಗೆ ಇದ್ರೆ ಏನೂ ಕಲ್ಯಲ್ಲ "-- ಎಷ್ಟು ಸತ್ಯ ಅಲ್ವಾ ? ತಮ್ಮ ನಲವತ್ತೆರಡನೆ ವಯಸ್ಸಿನಲ್ಲಿ ನನ್ನ ಅಮ್ಮನನ್ನು ಕಳೆದುಕೊಂಡು ಬಹಳ ದುಃಖದಲ್ಲಿ ಮುಳುಗಿಹೋಗಿದ್ದರು. ನನಗೆ ಆಗ ಎರಡುವರೆ ವರ್ಷ. ಅವರಿಗೆ ಒಂದಿಬ್ಬರು ಪುನಃ ಮದುವೆ ಮಾಡಿಕೊಳ್ಳಲು ಒತ್ತಾಯಿಸಿದ್ದರಂತೆ , ಅವರ ಮಾತನ್ನು ನಿರಾಕರಿಸಿದ್ದರು. ನನ್ನ ತಾಯಿಯ ಸಾವಿನ ದುಃಖದಿಂದ ಬಹಳ ಬೇಗ ಹೊರಬಂದು ಮಕ್ಕಳ ಸಲುವಾಗಿ ಎರಡೆರಡು ಶಿಫ್ಟ್ ಕೆಲಸ ಮಾಡಿ ನನ್ನ ೪ ಜನ ಅಕ್ಕಂದಿರ ಮದುವೆ ಮಾಡಿಸಿ, ನನಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದರು.
ತನ್ನ ಕೊನೆಯ ಉಸಿರಿರುವವರೆಗೂ ಸ್ವಂತ ಮಗನಾದ ನನ್ನನ್ನೂ ಸೇರಿಸಿ ಒಬ್ಬರನ್ನೂ ಒಂದು ರೂಪಾಯಿ ಸಹ ಕೇಳದೆ ಆದರ್ಶ ಬದುಕು ಬದುಕಿದವರು. ಆದಷ್ಟು ದೇವರ ಪೂಜೆ ಪುನಸ್ಕಾರ ಅವನ ನಾಮಸ್ಮರಣೆಯಲ್ಲೇ ತಮ್ಮ ಜೀವನ ನಡೆಸಿದವರು. ನೆಂಟರಿಷ್ಠರ ಮದುವೆ ಸಮಾರಂಭಗಳಲ್ಲಿ ಹೋಗಿ ತಮಗೆ ಯಾರು ಹೇಳದಿದ್ದರೂ ಮುನ್ನುಗ್ಗಿ ತಾವೇ ಕೆಲಸ ಮಾಡಿಕೊಡುತ್ತಿದ್ದರು. ಅವರ ಓದಾರ್ಯವನ್ನು ದುರುಪಯೋಗ ಪಡೆಸಿಕೊಂಡವರ ನೆಂಟರನ್ನೂ ನಾನು ಹಲವು ಬಾರಿ ನೋಡಿದ್ದೇನೆ. ಕೆಲವು ಬಾರಿ ಈ ಕುರಿತು ಪ್ರಶ್ನಿಸಿದಾಗ ಅವರು ಹೇಳುತ್ತಿದ್ದ್ದ ಮಾತು - " ರಾಜ , ನಾವು ಮಾಡಿದ್ದು ನಮಗೆ ಅವರು ಮಾಡೋದು ಅವರಿಗೆ " .
ಆ ಮಾತಿನ ಅರ್ಥ ಮಾತಿನ ಸಿದ್ದಾಂತ ಮತ್ತವರ ಆಂತರ್ಯ ಎಲ್ಲವೂ ನನಗೆ ಇವತ್ತಿಗೆ ತಿಳಿಯುತ್ತದೆ .
ಸ್ವಂತ ಮಕ್ಕಳಾದ ನಾವೇ ಎಷ್ಟೊಂದು ಸಾರಿ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದೆವು , ಹಾಗೆ ಮಾತನಾಡಬಾರದು ಅನ್ನುವ ತಿಳುವಳಿಕೆ ನಮಗೆ ಇರಲಿಲ್ಲ. ಈಗಲೂ ಇಲ್ಲ ಬಿಡಿ. ನನ್ನ ತಂದೆ ನಿಜವಾಗಿ ಸಿಟ್ಟು ಮಾಡಿಕೊಂಡು ಒಂದಕ್ಕೂ ಪ್ರತಿಕ್ರಿಯಿಸಿದ್ದು ನನ್ನ ಜನ್ಮದಲ್ಲಿ ನಾನು ನೋಡೇ ಇಲ್ಲ. ಬಹಳ ಮೃದು ಸ್ವಭಾವದ ಏಕಾಂಗಿ ವ್ಯಕ್ತಿತ್ವ ಮತ್ತು ಸರ್ವಶಕ್ತ ಆಧ್ಯಾತ್ಮ ಚಿಂತಕರು. ಉತ್ತುಂಗತ ಮಟ್ಟದಲ್ಲಿ ಬದುಕನ್ನು ಅರ್ಥ ಮಾಡಿಕೊಂಡು ಅವರ ಅತ್ಯುತ್ತಮ ಚಿಂತನೆಗಳೊಂದಿಗೆ ನಡೆದುಕೊಂಡವರು. ತುಂಬಾ ಸರಳವಾದ ಜೀವನ ಶೈಲಿ ನಡೆಸಿದವರು. ಈ ಮಾತುಗಳನ್ನು ಒಪ್ಪುವುದಕ್ಕೆ ಇವತ್ತಿಗೆ ಕನಿಷ್ಠ ಅಂದ್ರು ೫೦೦ ಜನರಾದ್ರು ಸಿಗುತ್ತಾರೆ .
ಇನ್ನು ನಮ್ಮ ಮನೆ ಬಗ್ಗೆ ಏನು ಹೇಳಲಿ ...ಅವರ ಪಾಲಿಗೆ ಬಂದಿದ್ದು ಒಂದು ಚಿಕ್ಕ ಹಂಚಿನ ಮನೆ(300 sq feet) ,ಅದರ ಪಕ್ಕದಲ್ಲಿ ಇನ್ನೊಂದು ಚಿಕ್ಕ ಮನೆ (300 Sq feet ,ತಿಂಗಳಿಗೆ ೨೦೦ ರೂಪಾಯಿ ಬಾಡಿಗೆ ಅದು ನನ್ನ ವಿದ್ಯಾಭ್ಯಾಸಕ್ಕೆ ಅಪ್ಪ ಕೊಡುತ್ತಿದ್ದರು , ಅದರಲ್ಲಿ ನನ್ನ ಓದು ಬರಹ, ಪುಸ್ತಕ ,ಪೆನ್ನು, ಪೆನ್ಸಿಲ್ಲು ಬಟ್ಟೆ ,ಶಾಲೆ ಬ್ಯಾಗು ಮತ್ತು ಸಿನಿಮಾ ಶೋಕಿ ಇಷ್ಟು ನಡೆಯುತ್ತಿತ್ತು ) ನಮ್ಮ ಮನೆಯ ಹಂಚು ೩-೪ ಜಾಗದಲ್ಲಿ ಮುರಿದ ಕಾರಣ ಮಳೆಗಾಲದಲ್ಲಿ ತುಂಬಾ ದಿನಗಳು ಪೂರ್ತಿಯಾಗಿ ನಿದ್ದೆ ಮಾಡಿದ್ದೇ ಇಲ್ಲ. ಅಲ್ಲಲ್ಲಿ ಬಕೀಟು ಇಟ್ಟು ನೀರು ಬೀಳದೆ ಇರುವ ಜಾಗದಲ್ಲಿ ಕೂತು ಕಳೆದ ಹಲಾವಾರು ರಾತ್ರಿಗಳು ಲೆಕ್ಕವೇ ಇಲ್ಲ. ಆ ಚಿಕ್ಕ ಚಿಕ್ಕ ಮನೆಯನ್ನು ಜೋಡಿಸಿ ಈಗ ಶೀಟ್ ಮನೆ ಅಂತ ಇದೆ , ಅಲ್ಲಿ ನನ್ನ ಅಕ್ಕ ತನ್ನ ಮಗನೊಂದಿಗೆ ವಾಸಿಸುತ್ತಿದ್ದಾಳೆ. ನಮ್ಮ ಅಜ್ಜಿ ನಮ್ಮ ಮನೆಯ ಕಷ್ಟ ಕಾರ್ಪಣ್ಯಗಳನ್ನು ನೋಡಿ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಮುದ್ದೆ ಸಾರು ತಿಳಿ ಮಜ್ಜಿಗೆ ನಮ್ಮ ಅಪ್ಪನ ಪ್ರೀತಿಯ ಊಟ . ಅದನ್ನೇ ನಮ್ಮ ಅಜ್ಜಿ ಹೆಚ್ಚು ಮಾಡುತ್ತಿದ್ದರು , ಆಗಲೇ ನನಗೆ ಮುದ್ದೆ ತಿನ್ನುವ ಅಭ್ಯಾಸವಾಯಿತು. ನನ್ನ ಹಲಾವಾರು ಪ್ರಶ್ನೆಗಳಿಗೆ ತುಂಬಾ ಆಧ್ಯಾತ್ಮ ವಿಚಾರಗಳು ಅಡಕವಾಗಿರುವ ಉತ್ತರ ಕೊಡುತ್ತಿದ್ದರು , ಇದು ಅವರ ತುಂಬಾ ಸ್ವಂತ ವಿಚಾರ ಆಚೆಯವರಿಗೆ ಒಂದು ತುಣುಕು ಗೊತ್ತಾಗುತ್ತಿರಲಿಲ್ಲ.
ಹೋದ ವರ್ಷ Sep 8, 2016 ಇದೇ ದಿನ ಮೊದಲು ಅವರು ಹೊಟ್ಟೆಯಲ್ಲಿ ನೋವು ತಡೆಯಕ್ಕೆ ಕಷ್ಟ ಆಗ್ತಾ ಇದೆ ಎಂದು ಹೇಳಿಕೊಂಡಿದ್ದು. ವಿಷಯ ಹೀಗೆ ಅಂತ ತಿಳಿದ ಮೇಲೆ ಒಂದು ಕ್ಷಣವೂ ಅಮೇರಿಕಾದಲ್ಲಿ ಉಳಿಯುದಕ್ಕೆ ಮನಸ್ಸಿರಲಿಲ್ಲ . ಮ್ಯಾನೇಜರ್ ಹತ್ರ ಹೋದೆ , ಎಷ್ಟು ಕಾಲ ಆಗುತ್ತೋ ಗೊತ್ತಿಲ್ಲ ನನ್ನ ಕೆಲ್ಸಕ್ಕೆ ರಾಜೀನಾಮೆ ಅಂತ ಲೆಕ್ಕ ಅಂದೆ... ಸೀದಾ ಭಾರತಕ್ಕೆ ಮರಳಿದೆ . ೧೦ ವರ್ಷಗಳಿಂದ ಅಮೇರಿಕಾದಲ್ಲಿ ವಾಸವಾಗಿದ್ದ ನನಗೆ ನನ್ನನ್ನು ತುಂಬಾ ಕಾಡುವ ವಿಷಯ ಅಂತ ಇದ್ದಿದ್ದು ನನ್ನ ತಂದೆಯ ಕಡೆಯ ದಿನಗಳ ಬಗ್ಗೆ ಮಾತ್ರ . ನಾನು ಅವರ ಕಡೆಯ ದಿನಗಳಲ್ಲಿ ಹೇಗಾದರೂ ಉಪಯೋಗವಾಗಬೇಕು ಅನ್ನುವುದೊಂದೇ , ಮತ್ತೇನೂ ಇಲ್ಲ . ಸ್ಕ್ಯಾನ್ ಮಾಡಿಸಿಕೊಂಡು ಮೈಸೂರಿನಲ್ಲಿ ಆಸ್ಪತ್ರೆ ಸೇರಿಕೊಂಡವರು (ಅಲ್ಲಿಂದ ಬೆಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು ).ಇನ್ನು ನಾನು ಅಮೇರಿಕಾದಿಂದ ಹೋಗಿ ಬೆಂಗಳೂರಿನ ಆಸ್ಪತ್ರೆಯಿಂದ ನಮ್ಮ ಬೆಂಗಳೂರಿನ ಮನೆಗೆ ಕರೆದುಕೊಂಡು ಬರುವವರೆಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳುತ್ತಾ ಇದ್ದರು. ೮೪ ವರ್ಷ ಮತ್ತು ನಾಲ್ಕನೇ ಹಂತದ Esophageal cancer. ಏನು ನಿರೀಕ್ಷಿಸಬಹುದು ಎಂಬುದು ನಮಗೆ ತಿಳಿದರೆ ಸಾಕು.
ಬೆಂಗಳೂರಿನ ಆಸ್ಪತ್ರೆಗೆ ಹೋಗಿ ನಮ್ಮಪ್ಪನನ್ನು ತಬ್ಬಿಕೊಂಡು ಗಳ ಗಳ ಅತ್ತುಬಿಟ್ಟೆ . ನನ್ನಪ್ಪ ನನಗೆ ಕಣ್ಣು ಒರೆಸಿ ಅಳಬೇಡಪ್ಪ ಅಂತ ಸಮಾಧಾನ ಮಾಡಿದ್ದರು . ಎಷ್ಟೇ ಸಮಾಧಾನ ಮಾಡಿದ್ರು ಮನಸ್ಸು ಸುಮ್ನೆ ಇರ್ಬೇಕಲ್ಲ , ದುಃಖ ಆವರಿಸಿಕೊಂಡು ಬಂದೇ ಬರುತ್ತೆ. ದೇವರ ಸತ್ಯ ಅಂತ ಒಂದು ಇರುತ್ತೆ ಅದರ ಪ್ರಕಾರ ಎಲ್ಲವೂ ನಡಿಯುತ್ತೆ ಅಂತ ನನ್ನನ್ನು ಮತ್ತೆ ಮತ್ತೆ ಸಮಾಧಾನ ಮಾಡಿದ್ರು. ಅವರಲ್ಲಿ ಆ ಮಟ್ಟಕ್ಕೆ ಚಿಂತನೆಗಳು ಇದೆ ಎಂದು ಮಗನಾದ ನನ್ನ ಬಿಟ್ಟರೆ ಬೇರೆ ಯಾರಿಗೂ ತಿಳಿದಿರುವುದಕ್ಕೆ ಸಾಧ್ಯವೇ ಇಲ್ಲ. ಅಷ್ಟು ಸ್ವಂತ ವಿಷಯಗಳು ಅವರದಾಗಿತ್ತು . ಅವರ ಕೊನೆಯ ಹತ್ತು ವರ್ಷಗಳಲ್ಲಿ ಅವರು ತುಂಬಾ ಇಷ್ಟ ಪಟ್ಟು ಹೋಗುತ್ತಿದ್ದ ಜಾಗ ಮೈಸೂರಿನ ಮನೆ ಹತ್ತಿರದ ಸಂಗೀತ ಸಭೆ-ನಾದಬ್ರಹ್ಮ ಸಂಗೀತ ಸಭಾ , ಮೈಸೂರು ಅವರ ತುಂಬಾ ಇಷ್ಟವಾದ ಸ್ಥಳ. ದೊಡ್ಡ ದೊಡ್ಡ ವಿದ್ವಾಂಸರು ಬಂದು ಗೀತಾಜ್ಞಾನ ಯಜ್ಞ , ಮಂಕುತಿಮ್ಮನ ಕಗ್ಗ ಎಲ್ಲದರ ಬಗ್ಗೆ ಮಾತನಾಡುವುದನ್ನು ತಿಳಿದುಕೊಂಡು ಬರುತ್ತಿದ್ದರು. ನಾವಿಬ್ಬರು ಸ್ನೇಹಿತರ ಹಾಗೆ ಗಂಟೆ ಗಟ್ಟಲೆ ಅದರ ಬಗ್ಗೆ ಅಕ್ಟೋಬರ್ ೨೦೧೬ ರ ತನಕವೂ ಮಾತನಾಡುತ್ತಿದ್ದೆವು.
ಸೆಪ್ಟೆಂಬರ್ ತಿಂಗಳ ಕೊನೆಯ ೨೮ ನೇ ತಾರೀಕು ಆಸ್ಪತ್ರೆಯಲ್ಲಿ ಅವರಿದ್ದಾಗ ನಾನು ಕ್ಯಾಂಟೀನ್ ಇಂದ ಸ್ವಲ್ಪ ತಿಂಡಿ ಕಾಫಿ ತಂದು ಒಳಗೆ ಬರುವಾಗ ಅವರ ಕ್ಯಾನ್ಸರ್ ರಿಪೋರ್ಟ್ ಓದುತ್ತಾ ಇದ್ರು ತಮಗೆ ಕ್ಯಾನ್ಸರ ಆಗಿರುವುದು ತಿಳಿದುಕೊಂಡು ದೇವರ ಫೋಟೋ ನೋಡಿ ದೇವರಿಗೆ ಕೈ ಮುಗಿದರು. ಒಹ್ ನನಗೆ ಕ್ಯಾನ್ಸರ ಆಗಿರೋದು ಅದಕ್ಕೆ ಇಷ್ಟು ಸಂಕಟ ನೋವು ಎಂದು ಬಾಯಿ ಬಿಟ್ಟು ಹೇಳುದ್ರು . ಅದೆಲ್ಲ ಅಷ್ಟು ಯೋಚ್ನೆ ಮಾಡ್ಬೇಡಪ್ಪಾ , ನಾಳೆ ಡಿಸ್ಚಾರ್ಜ್ ಮಾಡ್ತಾರೆ Morphin ಕೊಟ್ಟಿದಾರೆ ನೋವೆಲ್ಲಾ ಕಡಿಮೆ ಆಗ್ತಾ ಹೋಗುತ್ತೆ ಅಂತ ಸುಳ್ಳು ಹೇಳ್ದೆ , ಆಚೆ ಬಂದು ವಿಪರೀತ ಅತ್ತೆ . ಅವರಿಗೆ ತಿಳಿದಿತ್ತು ಇನ್ನು ಹೆಚ್ಚು ಕಾಲ ಇಲ್ಲ ಅಂತ. ಆದರೂ ದುಃಖ ಪಟ್ಟವರಲ್ಲ. ಸುಮ್ಮನೆ ಕುಳಿತು ಮುಂದೆ ಮಾಡುವ ಕೆಲ್ಸಗಳ ಬಗ್ಗೆ ವಿಚಾರ ಮಾಡುತ್ತಾ ಸ್ವಲ್ಪ ನಮ್ಮೆಲ್ಲರ ಯೋಗಕ್ಷೇಮ ವಿಚಾರಗಳನ್ನು ಮಾತನಾಡಿದರು. ಆ ಮಟ್ಟಕ್ಕೆ ಜೀವನ ತೃಪ್ತಿ ಅನುಭವಿಸಿ ಮುಂದಿನ ಪ್ರಯಾಣಕ್ಕೆ ಒಪ್ಪಿಕೊಂಡು ತಯಾರಿದ್ದರು. ದೇವರ ಧ್ಯಾನವೊಂದೇ ಧ್ಯೇಯ. ನನಗೆ ಯಾಕಪ್ಪ ಹೀಗೆ ಮಾಡಿದೆ ಅಂತ ಒಂದು ದಿನವೂ ಅವರ ಬಾಯಲ್ಲಿ ಬರ್ಲೇ ಇಲ್ಲ. ೫೦-೬೦ ಜನ ನೆಂಟರು ಇಷ್ಟರು ಆಸ್ಪತ್ರೆಗೆ ಮತ್ತು ಮನೆಗೆ ಅವರು ಬದುಕಿದ್ದಾಗ ಬಂದು ನಾನು ಅಮೇರಿಕಾದಿಂದ ಕಡೆಗಾಲದಲ್ಲಿ ಬಂದೆ ಅಂತ ಬೆನ್ನು ತಟ್ಟಿ ಪ್ರೋತ್ಸಾಹ ಕೊಟ್ಟು ಅಪ್ಪನನ್ನು ಚೆನ್ನಾಗಿ ನೋಡಿಕೊಪ್ಪ ಅಂದು ಹೋದರು , ಆದರೆ ಇನ್ನು ಕೆಲವರು ಬೇರೆ ಬೇರೆ ವಿಚಾರಗಳನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ, ಅವರಿಗೆಲ್ಲರಿಗೂ ತಮ್ಮ ತಮ್ಮ ಗೊಂದಲಗಳನ್ನು ಬಿಡಿಸಿಕೊಂಡು ವಿಚಾರಗಳನ್ನು ಮೇಲ್ಮಟ್ಟದಲ್ಲಿ ಚಿಂತಿಸುವಂತಾಗಲಿ ಎಂದು ಪ್ರಾರ್ಥಿಸುವೆ.
ಮನೆಗೆ ಕರೆದುಕೊಂಡು ಬಂದು ನಾವಿಬ್ಬರು ಬೇಕಾದಷ್ಟು ವಿಷಯಗಳನ್ನು ಮಾತನಾಡಿದ್ದೇ ನನ್ನಲ್ಲಿ ಉಳಿದ ಎಂದೂ ಅಳಿಯದ ಅತ್ಯುತ್ತಮವಾದ ಆಸ್ತಿ. ನನಗೆ ಏನೆಲ್ಲಾ ವಿಷಯಗಳನ್ನು ತಿಳಿಸಬೇಕೋ ಎಲ್ಲವನ್ನು ತಿಳಿಸಿದರು, ವೇದ ಮಂತ್ರಗಳನ್ನು ಪಕ್ಕದಲ್ಲೇ ಕೂತು ಓದುತ್ತಿದ್ದೆ , ಕೇಳಿ ಸಂತೋಷ ಪಟ್ಟು ನನ್ನ ಕೈಯನ್ನು ಗಟ್ಟಿಯಾಗಿ ಒತ್ತಿ ತಮ್ಮ ಹಣೆಯ ಮೇಲೆ ಇಟ್ಟಿಕೊಳ್ಳುತ್ತಿದ್ದರು .ನನಗೆ ಅಂತರಾಳದಲ್ಲಿ ತುಂಬಾ ಕಾಡುತ್ತಾ ಇದ್ದಿದ್ದು ಅದೇ , ನನ್ನ ತಂದೆಯವರಿಗೆ ಕಡೆಗಾಲದಲ್ಲಿ ನೆರವಾಗಬೇಕು ಅನ್ನುವುದೊಂದೇ.
ನನ್ನ ಪಾಲಿಗೆ ತುಂಬಾ ಖುಷಿ ತಂದಿದೆ, ಅಷ್ಟೊಂದು ದಿನಗಳು ಅವರೊಂದಿಗೆ ಒಟ್ಟಿಗೆ ಕಾಲ ಕಳೆದಿರುವುದು ಎಂದೆಂದಿಗೂ ಮರೆಯಲಾರೆ. ಅದನ್ನು ದೇವರು ಈ ರೀತಿಯಾಗಿ ನನಗೆ ಕರುಣಿಸಿದ ಎಂದು ಭಾವಿಸಿದೆ . ಇದೆಲ್ಲವೂ ನನ್ನ ತಂದೆಯ ಮೂಲಕ ದೇವರು ತನ್ನ ಇರುವಿಕೆಯನ್ನು ನನ್ನ ಅನುಭವಕ್ಕೆ ತಂದುಕೊಟ್ಟ ರೀತಿ.
ಅವರು ಹೇಳಿಕೊಟ್ಟಿರುವ ಮಾತುಗಳು ನಡೆದುಕೊಂಡು ಬಂದ ಆದರ್ಶಗಳನ್ನೇ ಅನುಸರಿಸಿ ನಾನು ಅವರಂತೆಯೇ ನಡೆದುಕೊಳ್ಳಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದೇನೆ. - Subbu Padmanabh

Saturday, November 25, 2017

tarati shokam-aatmavit - उपनिषद् 7.1.3

तरति शोकम् आत्मवित् - छान्दोग्य – उपनिषद् 7.1.3
tarati shokam-aatmavit
You go beyond sorrow when you know the Pure Self or Knower of self(aatman) transcends sorrow.

Tuesday, November 21, 2017

ಆನಂದ ಪ್ರಾಪ್ತಿ ದುಃಖ ನಿವೃತ್ತಿ ಪರಮಾನಂದ ಪ್ರಾಪ್ತಿ ಆತ್ಯಂತಿಕ ದುಃಖ ನಿವೃತ್ತಿ

ಆನಂದ ಪ್ರಾಪ್ತಿ ದುಃಖ ನಿವೃತ್ತಿ ಪರಮಾನಂದ ಪ್ರಾಪ್ತಿ ಆತ್ಯಂತಿಕ ದುಃಖ ನಿವೃತ್ತಿ
-----------------------------------------------------------
Every single human life has purpose . Purpose of life is to attain profound lasting happiness and to overcome sufferings . This is for those who does not understand what God realization/ Enlightening one self means.
Attain 
1) Ultimate eternal everlasting bliss 
2) Complete transcendents of sorrow/cessation of sorrow.
One view is some people are little more happy and some are not, thats the whole thing of life and we all die. This is a hopeless way of looking at life. This is called materialistic outlook. Every religion says there is a possibility of attaining bliss and overcoming sorrow. All our struggles from babyhood till now, everything that we do is trying to overcome discomfort and sorrow and trying to attain some kind of worthwhile happiness, Joy and peace. The moksha in Vedanta means attaining this highest level of bliss , ever lasting happiness, joy and peace.

Monday, November 20, 2017

Swamy Vivekananda says recognize the reality.


Om Ishaa Vaasyam -Idam Sarvam
Yatkincha Jagatyaam Jagat
Tena Tyaktena Bhunjeethaa
Maa Gridha Kasya svid Dhanam
One of the most popular and meaningful of verses from the Vedas
Whatever you see in this world, all pervaded by the Lord, Not only pervaded , Vaasyam - it means to pervade it, recognize the existing reality. There is an underlying reality, Existence, consciousness and bliss right here, Recognize it. How ?
Example: When you see waves in an ocean, comes up at sometime and disappears.Each wave is different from the other waves but all the waves are water. As water pervades all the waves , as the table chairs are all wood, wood pervades all the wood items like chairs tables. Similarly as Gold pervades all ornaments, similarly there is one existence and conciousness which pervades all of us. Every existence in this world is pervaded by one reality. Swamy Vivekananda says recognize the reality.
There are two extremes who might miss their way. Those who feel I shall cut myself off from this life and return to the Himalyan cave to meditate, to be in samadhi there and to give up the body there, Ignoring the world has missed the way.
Those who do many plunges headlong into the enjoyments of the world , He too has missed the way.
Two extremes, Ignoring the world many altogether trying to find the one apart from the many , the other one Ignoring the one in the material world as it is and diving deep into the wordly enjoyment , make merry as long as life lasts .
Swamy Vivekananda says both these extremes have missed their way.
Then what is the way ?
Answer : In a number of place, Swamy Vivekananda says from Vedanta that the way out is defy the world . Mark the words ...Defy the world - Here is the world before you. See Brahman in this world , brahman is appearing which is the ultimate reality , one reality is appearing as many realities before you.
Swamiji says to be religious one need not abandon husband wife and children, they can very much remain but important thing is to see the God in Husband ,Wife and Children.

Sunday, November 19, 2017

ನಾಣಿ ಅಣ್ಣನ ಮನೆಯಲ್ಲಿ ಒಟ್ಟಿಗೆ ಊಟ


೨೫ ವರ್ಷದ ಹಿಂದಿನ ಮಾತು . ನಾನು ನಮ್ಮ ಬೆಂಗಳೂರಿನ ದೊಡ್ಡಪ್ಪನ ಮನೆಗೆ ತಂದೆಯೊಡನೆ ಹೋಗಿ ಬರುತ್ತಿದ್ದಾಗ ನಮ್ಮ ಅಣ್ಣ ನಾರಾಯಣ ಅಮೇರಿಕಾದಲ್ಲಿ ಬಂದು ನೆಲೆಸಾಗಿತ್ತು . ಆಗೆಲ್ಲ ತುಂಬಾ ಕಷ್ಟದ ದಿನಗಳು , ಓದು ಬರಹ ಒಂದೇ ನಮಗೆ. ಅಪ್ಪ ಹಾಕಿದ ಆಲದ ಮರ ಏನೂ ಇಲ್ಲ , ಸುಮಾರು ಜನರ ಮನೆಯಲ್ಲಿ ಹೀಗೆ ಇದ್ದ ಪರಿಸ್ಥಿತಿ. ನಮ್ಮ ಇಡೀ ಕುಟುಂಬದಲ್ಲಿ ಮೊದಲು ಅಮೆರಿಕಕ್ಕೆ ಬಂದು ತನಗೆ ಗೊತ್ತಿಲ್ಲದ ಹಾಗೆ ಬಹಳಷ್ಟು ಜನರಿಗೆ ಉದಾಹರಣೆಯಾಗಿದ್ದು ನಮ್ಮ ಅಣ್ಣ, ನನಗೂ ಕೂಡ. ನಾನು ಇಂಜಿನಿಯರಿಂಗ್ ಕಲಿಯುವಾಗ ನಮ್ಮ ದೊಡ್ಡಪ್ಪ ಮತ್ತು ತಂದೆಯವರು ನಾಣಿಯ ಬಗ್ಗೆ ಹೆಚ್ಚು ಒಳ್ಳೆಯ ವಿಷಯಗಳನ್ನು ತಿಳಿಸುತ್ತಿದ್ದರು , ಮುಖ್ಯವಾಗಿ ಅಣ್ಣನ ಗುಣಗಾನ ಮಾಡುತ್ತಿದ್ದರು , ಅವನಲ್ಲಿರುವ ಸಹಾಯ ಮಾಡುವ ಗುಣ , ಔಧಾರ್ಯದ ಬಗ್ಗೆ , ಮುಂದೆ ಬರುವ ಹುಡುಗರಿಗೆ ಉದಾಹರಣೆಯಾಗಿ ಇರುವ ಬಗ್ಗೆ ಮಾತನಾಡುತ್ತಿದ್ದರು. ನಾಣಿ ಅಣ್ಣ ವರ್ಷಕೊಮ್ಮೆ ಅಮೆರಿಕಾದಿಂದ ಬೆಂಗಳೂರಿಗೆ ಬರುವಾಗ ಒಂದೆರಡು ಬಾರಿ ನೋಡಬೇಕು ಮಾತಾಡಿಸಬೇಕು ಅಂತ ನಾನೂ ಕೂಡ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಇದೆಲ್ಲಾ ಕಳೆದು ಹೋದ ದಿನಗಳ ಸುದ್ದಿ. ಕಳೆದ ಐದು ವರ್ಷಗಳಿಂದ ನಾಣಿ ಅಣ್ಣನ ಮನೆಯ ಹತ್ತಿರವೇ ಇದ್ದೇನೆ. ಸಮಯ ಸಿಕ್ಕಾಗ ಭೇಟಿ ಮಾಡೋದು, ಹಬ್ಬ ಒಟ್ಟಿಗೆ ಆಚರಿಸೋದು , ಸ್ವಲ್ಪ ಸಮಯ ಒಟ್ಟಿಗೆ ಕಳೆಯೋದು ನನ್ನ ಪಾಲಿಗೆ ದೊರಕಿದೆ. ನಾವು ಒಟ್ಟಿಗೆ ವೇದ ಮಂತ್ರಗಳನ್ನು ಕಲಿಯುತ್ತಿದ್ದೇವೆ . ವಾರಕೊಮ್ಮೆಯಾದರು ಅಣ್ಣನನ್ನು ಭೇಟಿ ಮಾಡುವುದು ನನಗೆ ಸಂತೋಷ ತರುತ್ತದೆ .ಈ ವಿಷಯವನ್ನು ನಮ್ಮ ತಂದೆ ಬದುಕಿದ್ದಾಗ ಹೇಳುತ್ತಿದ್ದೆ, ತುಂಬಾ ಸಂತೋಷ ಪಡುತ್ತಾ ಇದ್ದರು. ನಮ್ಮ ತಂದೆ ದೇವರ ಫೋಟೋ ನೋಡಿ ಕೈ ಮುಗಿಯುತ್ತಿದ್ದರು ಮತ್ತು ದೇವರು ಕೊಟ್ಟಿರುವ ಈ ಬದುಕಿಗೆ ಯಾವಾಗಲೂ ಕೃತಾರ್ಥನಾಗಿರಬೇಕು ರಾಜ ಎಂದು ಹೇಳುತ್ತಿದ್ದರು. ಮೊನ್ನೆ ಬೆಂಗಳೂರಿಗೆ ಹೋಗಿದ್ದಾಗ ನಮ್ಮ ದೊಡ್ಡಪ್ಪನಿಗೂ ಇದೇ ವಿಷಯ ಹೇಳಿದೆ , ಸಂತೋಷ ಪಟ್ಟರು.
ಅವರ ಮನೆಯಲ್ಲೇ ಇವತ್ತಿನ ರಾತ್ರಿಯ ಊಟ, ಕೆಳಗೆ ಕೂತು ಊಟ ಮಾಡುವ ಸಂತೋಷವೇ ಬೇರೆ. ಶಾಂತಿ ಮಂತ್ರದಿಂದ ಊಟ ಶುರು.
ಓಂ ಸಹನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ | ಓಂ ಶಾಂತಿಃ ಶಾಂತಿಃ ಶಾಂತಿಃ | 
ಸಂತೋಷ ಪಟ್ಟೆ. ಅನ್ನದಾತೋ ಸುಖಿ ಭವ

Thursday, November 16, 2017

ಧ್ಯಾನದಿಂದರಿವೆ


ಸಂಸಾರಿಯೋ ಸನ್ಯಾಸಿಯೊ 
ಶರೀರ ಇಂದ್ರಿಯ ಬುದ್ದಿ ಮನ 
ಅಹಂಕಾರದ ಹಿಂದಿರುವವನೇ  
ನಿನ್ನರಿತರೆ ನನ್ನನಾನರಿತಂತೆ !!

-ಸುಬ್ಬು ಪದ್ಮನಾಭ

Wednesday, November 15, 2017

ನಿಮಗೆ ನಮಸ್ಕಾರ

ಕಥೆ ಕೇಳುವವರು ಇದ್ದರೆ ಕಟ್ಟುವುದಕ್ಕೆ ಎಷ್ಟು ಸಿನಿಮಾ ಬೇಕಾದ್ರೂ ಮಾಡಬಹುದು . ಅಲ್ಲೆಲ್ಲೋ ಸ್ವರ್ಗದಲ್ಲಿ ಎಲ್ಲಾ ದೇವರುಗಳು ಕೂತಿರೋ ಹಾಗೆ ಜನರು ಅಂದರೆ ನಾವುಗಳು ಆ ಪರಬ್ರಹ್ಮ ಸ್ವರೂಪನಿಗೆ ಆಕಾರ ಕೊಟ್ಟಿದ್ದೀವಿ ( ನಂಬಿಕೆಗೆ ಸುಲಭವಾಗಲಿ ಎಂದು ). ನಿಮಗೆ ತಿಳಿದಿರುವ ಹಾಗೆ ವೇದಾಂತ ಅಂದರೆ ಉಪನಿಷದ್ ಹೇಳಿರೋ ಸಾರ. ವೇದಾಂತದ ಪ್ರಕಾರ ನಿರ್ಗುಣ ನಿರಾಕಾರ ಪರಮಾತ್ಮನಿಗೆ ಹೆಸರಿಲ್ಲ ಆಕಾರ ಇಲ್ಲ. ನಮ್ಮೊಳಗೇ ಆತ್ಮವನ್ನು ಬೆಳಗುತ್ತಿರುವ ದಿವ್ಯವಸ್ತು ಅದೇ ಆಗಿದೆ . ಶರೀರ ಇಂದ್ರಿಯಗಳು ಜಡ , ಅದು ಪ್ರಕೃತಿ . ಯಾವಾಗಲೂ ಬದಲಾಗುವ ಮತ್ತು ನಾಶವಾಗುವ ವಸ್ತು . ಚಿತ್ತದಲ್ಲಿರುವ ಪರಬ್ರಹ್ಮ ಅನುಭವವನ್ನು ನಿತ್ಯ ಧ್ಯಾನ ಮಾಡಿ ಸೂಕ್ಷ್ಮ ಶರೀರದಿಂದ ಅನುಭವ ಪಡೆದುಕೊಳ್ಳಬಹುದು. ನಮ್ಮ ಸ್ತೂಲ ಶರೀರ(ದೇಹ (ಪ್ರಕೃತಿ)), ಬುದ್ದಿ , ಅಹಂಕಾರಕ್ಕೆ ಎಟುಕದ ಚಿಲುಮೆ . ದೇವ ಮಂದಿರ ಭಜನೆ ಇದೆಲ್ಲವೂ ಭಕ್ತಿಯ ಮಾರ್ಗ ಮತ್ತು ಇದರ ಅಗತ್ಯವೂ ತುಂಬಾ ಇದೆ. ಭಕ್ತಿ ಮಾರ್ಗ , ಕರ್ಮ ಮಾರ್ಗ, ಜ್ಞಾನ ಮಾರ್ಗ ಬೇರೆ ಬೇರೆ ಮಾರ್ಗಗಳು . ಇದರ ಬಗ್ಗೆ ಹಲವಾರು ಸಿದ್ದಂತಾಗಳು ಇದೆ , ಅದ್ವೈತ ಸಿದ್ದಾಂತದ ಪ್ರಕಾರ ಆತ್ಮವಸ್ತು ಶೂನ್ಯ ಅಲ್ಲ ಅದೇ ನಮ್ಮೊಳಗೆ ಮತ್ತು ಹೊರಗೆ ನಿತ್ಯ ನಿರಂತರ ಬೆಳಗುತ್ತಿರುವ ಜ್ಯೋತಿ . ( ಉದಾಹರಣೆ : ಬುದ್ದಿಯು ತನ್ನ ಬುದ್ದಿಯನ್ನು ವಿಚಾರ ಮಾಡುವುದಕ್ಕೆ ಬೇಕಾಗಿರುವ ಆತ್ಮವಸ್ತು ).ಸಾಮಾನ್ಯವಾಗಿ ಹೇಳುವುದಾದರೆ ಧ್ಯಾನ ಮಾಡದೆ ಚಿತ್ತ ವಿಚಾರಗಳನ್ನು ಶ್ರವಣ ಮತ್ತು ಮನನ ಮಾಡದೆ ಅವನಿರುವಿಕೆಯ ಅನುಭವ ಸಾಧ್ಯವಿಲ್ಲ. ಮನಸ್ಸನ್ನು ಬೆಳಗುತ್ತಿರುವ ಆತ್ಮವಸ್ತುವನ್ನು ಅನುಭವಿಸಬೇಕಾದರೆ ದಿನನಿತ್ಯ ಧ್ಯಾನ ಮಾಡುತ್ತಾ ಹೋದರೆ ಆ ದಿವ್ಯ ಪರಬ್ರಹ್ಮ ಸ್ವರೂಪದ ಅನುಭವವಾಗುತ್ತದೆ ( ಧ್ಯಾನ ಮಾಡದೆ ಕೆಲವರಿಗೆ ಆ ಸಿದ್ದಿ ಸಿಗಬಹುದು ,ಅದೇ ಮಹಶ್ರೀ ರಮಣರು ತಮ್ಮ ಹದಿನಾರನೇ ವಯಸ್ಸಿಗೆ ಕಂಡುಕೊಂಡ ಚಾರುರ್ತ್ಯಾವಸ್ಥೆ ಕೂಡ ). ಸ್ವಾಮಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಈ ಚತುರ್ತ್ಯಾವಸ್ಥೆಯನ್ನು ತಲುಪಿ ಇರುವುದೆಲ್ಲವೂ ಅವನೊಬ್ಬನೇ . ಕಣ್ಣಿಗೆ ಕಾಣುವ ಜಗತ್ತು ಬರಿ ಅವನ ಸೃಷ್ಟಿಯ ಮಾಯೆ ಮಾತ್ರ ಎಂದರು. ಜಗತ್ತೆಲ್ಲ ಮಲಗಿರಲು ಸಿದ್ದಾರ್ಥ ಬುದ್ಧನಾಗುವುದಕ್ಕೂ ಈ ನಾಲ್ಕನೇ ಅವಸ್ಥೆಯನ್ನು ತಲುಪುವ ಅವರವರ ಸಾಧನೆ ಕಾರಣವಾಯಿತು. ಸಾಮಾನ್ಯರಿಗೆ ಮೂರು ಅವಸ್ಥೆಗಳು ಲಭ್ಯ ( ಎಚ್ಚರ ಕನಸ್ಸು ನಿದ್ದೆ ). ಅವನು ನಿತ್ಯ ನಿರಂತರ ಎಲ್ಲೆಲ್ಲೂ ಬೆಳಗುವ ( ನಮ್ಮೊಳಗೆ ಮತ್ತು ಹೊರಗೆ ) ಅವಿನಾಶಿ ನಿರ್ಗುಣ ನಿರಾಕಾರ ಸಾಕ್ಷಿ . ವೇದಾಂತದ ಪ್ರಕಾರ ಚತುರ್ತ್ಯಾವಸ್ಥೆಯನ್ನು ನಮ್ಮದಾಗಿಸಿಕೊಳ್ಳಲು ಯಾವುದಾದರೂ ಒಂದು ನಂಬಿರುವ ಶಕ್ತಿಯನ್ನು ಆಧಾರವಾಗಿಟ್ಟುಕೊಂಡು ಧ್ಯಾನ ಮಾಡಿದರೆ ಆತ್ಮದರ್ಶನ ಪ್ರಾಪ್ತಿ . ವೇದಾಂತದ ಪ್ರಕಾರ ಇದನ್ನ ಯಾರು ಬೇಕಾದರೂ ಅನುಭವಿಸಬಹುದು ಆದರೆ ನಿರಂತರ ಧ್ಯಾನದಿಂದ ಸಾಧ್ಯ .ಅದಕ್ಕೆಂದೇ ನಮ್ಮ ಹಿರಿಯರು ಸ್ವಲ್ಪ ಪೂಜೆ ಮಾಡು , ಧ್ಯಾನ ಮಾಡು , ಸಂಧ್ಯಾವಂದನೆ ಮಾಡಿ ೨೦ ನಿಮಿಷ ೧೦೮ ಗಾಯತ್ರಿ ಜಪ ಮಾಡು ಹೀಗೆಲ್ಲ ಹೇಳುತ್ತಿದ್ದರು . ಅವರು ಏನಿಕ್ಕೆ ಹೇಳುತ್ತಿದ್ದರು ಎಂದು ಅವರಿಗೆ ತಿಳಿಯದಿರಬಹುದು ಆದರೆ ಇದೆಲ್ಲವೂ ಒಂದು ಜಾಗದಲ್ಲಿ ಕೂತು ಕಣ್ಣು ಮುಚ್ಚಿ ಧ್ಯಾನ ಮಾಡುವ ಕಾರ್ಯ ಸ್ವಲ್ಪ ಅಭ್ಯಾಸ ಆಗಲಿ ಎಂದು . ಚಿಕ್ಕಂದಿನಿಂದ ಸ್ವಲ್ಪ ಸ್ವಲ್ಪ ಅಭ್ಯಾಸ ಮಾಡಿ ಬಂದರೆ ಏನೂ ಬೇಕಾದರೂ ಸಾಧಿಸಬಹುದು ಪರಬ್ರಹ್ಮನ ಇರುವಿಕೆಯೂ ಕೂಡ . ನಾವು ಒಬ್ಬರಿಗೊಬ್ಬರು ಕೈ ಮುಗಿದು ನಮಸ್ಕಾರ ಮಾಡುವ ಅರ್ಥವೂ ಕೂಡ ಇದೇ ಕಾರಣಕ್ಕೆ ನಿನ್ನೊಳಗಿರುವ ಆತ್ಮವನ್ನು ಬೆಳಗುತ್ತಿರುವವನು ನಾನು ನಾನೆಂಬ ಅಸ್ತಿತ್ವವನ್ನು ಬೆಳಗುವವನೂ ಒಬ್ಬನೇ ಆಗಿದ್ದಾನೆ , ಅದಕ್ಕೆ ನಿಮಗೆ ನಮಸ್ಕಾರ 

Friday, November 10, 2017

ರಾಜ್ಯೋತ್ಸವ

ಅನ್ನ ನೀಡಿ
ಹಸಿವು ನೀಗಿಸಿದೆ 
ಭಾಷೆ ನೀಡಿ 
ಜ್ಞಾನ ವೃದ್ಧಿಸಿದೆ 
ವಿದ್ಯೆ ಕಲಿಸಿ
ಜೀವನ ಕಲ್ಪಿಸಿದೆ
-ಸುಬ್ಬು ಪದ್ಮನಾಭ
Whom do we call God ? Concept/Principle called Brahman
------------------------------------------------------------------------
Basic question many would ask as to why there are many Gods in Hinduism or Santana Dharma ?
Do you have doubt/confusion too ?
If yes, please see the beautiful answer.
Brahman ( not the brahma , Its a principle which everyone of us are , we can meditate and realize the true self (Brahman) which is alone truth and existing ). Various Gods (turning the principle into personality ) we all worship are the names and forms to realize the brahman within us.