Sunday, November 19, 2017

ನಾಣಿ ಅಣ್ಣನ ಮನೆಯಲ್ಲಿ ಒಟ್ಟಿಗೆ ಊಟ


೨೫ ವರ್ಷದ ಹಿಂದಿನ ಮಾತು . ನಾನು ನಮ್ಮ ಬೆಂಗಳೂರಿನ ದೊಡ್ಡಪ್ಪನ ಮನೆಗೆ ತಂದೆಯೊಡನೆ ಹೋಗಿ ಬರುತ್ತಿದ್ದಾಗ ನಮ್ಮ ಅಣ್ಣ ನಾರಾಯಣ ಅಮೇರಿಕಾದಲ್ಲಿ ಬಂದು ನೆಲೆಸಾಗಿತ್ತು . ಆಗೆಲ್ಲ ತುಂಬಾ ಕಷ್ಟದ ದಿನಗಳು , ಓದು ಬರಹ ಒಂದೇ ನಮಗೆ. ಅಪ್ಪ ಹಾಕಿದ ಆಲದ ಮರ ಏನೂ ಇಲ್ಲ , ಸುಮಾರು ಜನರ ಮನೆಯಲ್ಲಿ ಹೀಗೆ ಇದ್ದ ಪರಿಸ್ಥಿತಿ. ನಮ್ಮ ಇಡೀ ಕುಟುಂಬದಲ್ಲಿ ಮೊದಲು ಅಮೆರಿಕಕ್ಕೆ ಬಂದು ತನಗೆ ಗೊತ್ತಿಲ್ಲದ ಹಾಗೆ ಬಹಳಷ್ಟು ಜನರಿಗೆ ಉದಾಹರಣೆಯಾಗಿದ್ದು ನಮ್ಮ ಅಣ್ಣ, ನನಗೂ ಕೂಡ. ನಾನು ಇಂಜಿನಿಯರಿಂಗ್ ಕಲಿಯುವಾಗ ನಮ್ಮ ದೊಡ್ಡಪ್ಪ ಮತ್ತು ತಂದೆಯವರು ನಾಣಿಯ ಬಗ್ಗೆ ಹೆಚ್ಚು ಒಳ್ಳೆಯ ವಿಷಯಗಳನ್ನು ತಿಳಿಸುತ್ತಿದ್ದರು , ಮುಖ್ಯವಾಗಿ ಅಣ್ಣನ ಗುಣಗಾನ ಮಾಡುತ್ತಿದ್ದರು , ಅವನಲ್ಲಿರುವ ಸಹಾಯ ಮಾಡುವ ಗುಣ , ಔಧಾರ್ಯದ ಬಗ್ಗೆ , ಮುಂದೆ ಬರುವ ಹುಡುಗರಿಗೆ ಉದಾಹರಣೆಯಾಗಿ ಇರುವ ಬಗ್ಗೆ ಮಾತನಾಡುತ್ತಿದ್ದರು. ನಾಣಿ ಅಣ್ಣ ವರ್ಷಕೊಮ್ಮೆ ಅಮೆರಿಕಾದಿಂದ ಬೆಂಗಳೂರಿಗೆ ಬರುವಾಗ ಒಂದೆರಡು ಬಾರಿ ನೋಡಬೇಕು ಮಾತಾಡಿಸಬೇಕು ಅಂತ ನಾನೂ ಕೂಡ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಇದೆಲ್ಲಾ ಕಳೆದು ಹೋದ ದಿನಗಳ ಸುದ್ದಿ. ಕಳೆದ ಐದು ವರ್ಷಗಳಿಂದ ನಾಣಿ ಅಣ್ಣನ ಮನೆಯ ಹತ್ತಿರವೇ ಇದ್ದೇನೆ. ಸಮಯ ಸಿಕ್ಕಾಗ ಭೇಟಿ ಮಾಡೋದು, ಹಬ್ಬ ಒಟ್ಟಿಗೆ ಆಚರಿಸೋದು , ಸ್ವಲ್ಪ ಸಮಯ ಒಟ್ಟಿಗೆ ಕಳೆಯೋದು ನನ್ನ ಪಾಲಿಗೆ ದೊರಕಿದೆ. ನಾವು ಒಟ್ಟಿಗೆ ವೇದ ಮಂತ್ರಗಳನ್ನು ಕಲಿಯುತ್ತಿದ್ದೇವೆ . ವಾರಕೊಮ್ಮೆಯಾದರು ಅಣ್ಣನನ್ನು ಭೇಟಿ ಮಾಡುವುದು ನನಗೆ ಸಂತೋಷ ತರುತ್ತದೆ .ಈ ವಿಷಯವನ್ನು ನಮ್ಮ ತಂದೆ ಬದುಕಿದ್ದಾಗ ಹೇಳುತ್ತಿದ್ದೆ, ತುಂಬಾ ಸಂತೋಷ ಪಡುತ್ತಾ ಇದ್ದರು. ನಮ್ಮ ತಂದೆ ದೇವರ ಫೋಟೋ ನೋಡಿ ಕೈ ಮುಗಿಯುತ್ತಿದ್ದರು ಮತ್ತು ದೇವರು ಕೊಟ್ಟಿರುವ ಈ ಬದುಕಿಗೆ ಯಾವಾಗಲೂ ಕೃತಾರ್ಥನಾಗಿರಬೇಕು ರಾಜ ಎಂದು ಹೇಳುತ್ತಿದ್ದರು. ಮೊನ್ನೆ ಬೆಂಗಳೂರಿಗೆ ಹೋಗಿದ್ದಾಗ ನಮ್ಮ ದೊಡ್ಡಪ್ಪನಿಗೂ ಇದೇ ವಿಷಯ ಹೇಳಿದೆ , ಸಂತೋಷ ಪಟ್ಟರು.
ಅವರ ಮನೆಯಲ್ಲೇ ಇವತ್ತಿನ ರಾತ್ರಿಯ ಊಟ, ಕೆಳಗೆ ಕೂತು ಊಟ ಮಾಡುವ ಸಂತೋಷವೇ ಬೇರೆ. ಶಾಂತಿ ಮಂತ್ರದಿಂದ ಊಟ ಶುರು.
ಓಂ ಸಹನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ | ಓಂ ಶಾಂತಿಃ ಶಾಂತಿಃ ಶಾಂತಿಃ | 
ಸಂತೋಷ ಪಟ್ಟೆ. ಅನ್ನದಾತೋ ಸುಖಿ ಭವ

No comments:

Post a Comment