ಕಷ್ಟವು ಬೆಟ್ಟದಷ್ಟು ಎತ್ತರವಾದರೇನು
ಅದರೊಳಗಿಹ ಸತ್ವ ಬದುಕಿಗೆ ತತ್ವ
ನೀಲಾಕಾಶದಷ್ಟು ಮನ ವಿಶಾಲವಾಗಿರಲು
ನಿನ್ನೊಳಿಹ ಚೇತನ ನಲಿವುದು ಓ ನೋಡ
ಜ್ಞಾನದ ಹಸಿರಲಿ ಕರಗುವುದು ನೀ ಹಾಡ
-ಸುಬ್ಬು ಪದ್ಮನಾಭ
ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ