Wednesday, December 12, 2018

Prof Prema Shekhara writes in Vijayavani paper - History

Prof Prema Shekhara writes in Vijayavani paper, three key things from our history, which we hardly read about..
1) India's Hindu Shahi royal family managed to keep Muslim invasions at bay for 300 years since Mohammed bin Qasim's Sindh attack in 711-12. Nowhere else in the world, the initial Muslim invasions were stopped for 3 centuries! Our history books hardly tell us about Shahi kings.
2) They also do not tell us that the Rashtrakuta empire from Karnataka, was so powerful and big, that it went all the way to Sindh in today's Pakistan, and defeated the remaining Arabs, and extracted monetary tribute from them. 
3) Lalitaditya was a Kashmiri King born in 699 CE. He defeated the Arab invaders. He also defeated Tibetan and Chinese invasions too. In his entire life, he NEVER lost a single battle! We read about Alexander who didn't lose any major battle, but not about Lalitaditya who not only defended India against the first wave of Arab Muslim attacks, but also from Chinese attacks from the east. He left his throne at age 60 and went to Himalayas.

Ramana Maharshi Ashrama in Tiruvannamalai 🙏


Ramana Maharshi Ashrama in Tiruvannamalai 🙏
---------------------------------
This picture is taken in front of Ramana Maharshi Ashrama in Thiruvannamalai. There is a true story which happened in the previous century.
His name was Venkataramana. He was 16 year old boy living in his uncle's place in Madhurai, Tamil Nadu. One day when he was 16 year old youth he had very unique experience. He felt that he is going to die. But when he was in that state he experienced his conciousness was all over the place not restricted to his body. He was able to see his own body lying on the ground in sleep state. This is explained as turiya in Vedanta . No one was around him to tell what that state is, Its maha samadhi state which he came to know only later. After about an hour he came back to the body and came down to talk to his mother. His mother could not understand about his experience at all. She served him dinner. He had developed tremendous urge to go to Arunachala Shiva's adobe in Thiruvannamalai and left home and settled in Tiruvannamalai for the rest of his life. For many years he was not speaking to many when he was there in Tiruvannamalai. He simply used to sit in Skanda cave , Viroopaksha cave in Arunachala's adobe doing dhyaana and he was writing quite a lot in Tamil. Ramana Maharshi has written Ramana Geeta, Upadesha saara, and ultimate upanishad in Tamil name " Ulladu naarpadu -40 Verses on reality ". Many years later scholor and Vidwan Ganapathi Vasista Muni met him and called him Ramana Maharshi. Translated all his Upanishad work to Sanskrit and for all Vedantis , its the ultimate Upanishads called Saddarshana. People who have completed all 18 chapters of Bhagavadgeete and 8-9 upanishad, one has to read Saddarshana to understand it better. Thats where he has written to inquire " Who am I " ?. News spread all over the world and visitors started coming to see him, take blessings and ask him many questions. When someone goes to guru like him our only quest should be knowing about the self and how to do self inquiry but not to seek material possession or families better health and so on. When those questions used to come he never used to answer because even if Bhagvan Ramana Maharshi grants those, he felt that those needs are temporary only until death. He used to ask many to learn about true self which always exists even after our mortal body goes away. After many years ,one day young boy went to him in the morning and he requested to help answer his question. His question was who is he and how to know who the person within him is . Ramana maharshi replied let everyone go away then he would help him. By afternoon everyone left, that boy went to maharshi telling him that everyone has gone for lunch and now he is all alone . Can he help. Ramana Maharshi said let that "I" also go . Boy did not understand at first. Maharshi said let that "I" also go away then you will know who you are. When you are able to completely remove that "I" within yourself that alone shines and that alone exists, that is nothing but your true self. That is (body - (mind + Ahankara )) When you are able to come to this level, you will realize for that you need to do sadhana. You think you exist because of that "I" within you. Little boy sort of understood what maharshi meant. Little boy decided to seek further, did relentless sadhana and continued his quest for realization. World came to know about him later as Chinmayananda Saraswathi who inspired the formation of Chinmaya Mission, a worldwide nonprofit organisation, to spread the knowledge of Vedanta. Swamiji travelled all over the world when he was alive to teach Bhagavadgeethe . He has done thousands of Satsangh's to teach Bhagavadgeete to the world and this includes muslim countries as well. Dec 18th 2018 is Geeta Jayanthi and from the past 3 yrs we are chanting Bhagavadgeete on Geeta Jayanthi day after learning about Swamy Chinmayananda Swamiji of Chinmaya Mission.

Tuesday, December 11, 2018

ಗುರು - ಗುರಿ

ಗುರು - ಗುರಿ
-------
ಅರ್ಜುನನಿಗೆ ಸಿಕ್ಕಿತು ಗುರುಕೃಪ
ಕರ್ಣನಿಗೆ ದಕ್ಕಿತು ಗುರುಶಾಪ
ಆಶೀರ್ವಾದ ಒಂದೇ ಬಯಸಿದೆ
ಗುರು ಪಾದಗಳನ್ನೇ ಸ್ಮರಿಸಿದೆ
ಗುರಿ ಮೊದಲು ಕೃತಾರ್ಥನಾದೆ
-ಸುಬ್ಬು ಪದ್ಮನಾಭ

ಮಾತೇಕೆ ಬೇಕು ?

ಮಾತೇಕೆ ಬೇಕು ?
---------------
ಮನುಷ್ಯನ ದೊಡ್ಡ ಕಲೆಯೇ ಮಾತು 
ವಿಷಯ ಹಂಚಿಕೊಳ್ಳಲು ಮಾತು

ಸಂತೋಷ ವ್ಯಕ್ತಪಡಿಸಲು ಮಾತು
ದುಃಖ ತೋಡಿಕೊಳ್ಳಲು ಮಾತು

ಜ್ಞಾನ ಹಂಚುವುದಕೆ ಮಾತು
ಅಜ್ಞಾನ ಅಳಿಸಲು ಮಾತು

ಸತ್ವಯುತವಾದ ಮಾತು
ತತ್ವ ತಿಳುವಳಿಕೆಯ ಮಾತು

ಮನುಷ್ಯನ ದೊಡ್ಡ ಕಲೆಯೇ ಮಾತು
ವಿಷಯ ಹಂಚಿಕೊಳ್ಳಲು ಮಾತು

-ಸುಬ್ಬು ಪದ್ಮನಾಭ



Monday, December 10, 2018

ಕನ್ನಡ ಮತ್ತು ಕನ್ನಡ ಕಾರ್ಯಕ್ರಮಗಳು ಯಾಕೆ ಬೇಕು ?

ಕನ್ನಡ ಮತ್ತು ಕನ್ನಡ ಕಾರ್ಯಕ್ರಮಗಳು ಯಾಕೆ ಬೇಕು ?
-------------------------------------
ಮೊಟ್ಟಮೊದಲಿಗೆ ೨೦೦ ವಾರಗಳು ಸತತವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಬೆಂಗಳೂರು ವಾಯ್ಸ್ ಕಾರ್ಯಕ್ರಮದ ಪದಾಧಿಕಾರಿಗಳಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಮತ್ತು ಅಭಿವಂದನೆಗಳು .
ಕಾರ್ಯಕ್ರಮಕ್ಕೆ ಕರೆ ಮಾಡಿ ಅಭಿನಂದಿಸಿದೆ. ಬೆಂಗಳೂರು ವಾಯ್ಸ್ ಅಂದ್ರೆ ನಿಮಗೆ ಏನನ್ನಿಸುತ್ತದೆ ಎಂದು ರಘು ಕೇಳಿದರು . ನನ್ನ ಹೃದಯದ ಮಿಡಿತ ಎಂದು ಉತ್ತರಿಸಿದೆ . ಬೆಳಗ್ಗೆ ಹಾಸಿಗೆಯಿಂದ ಮೇಲೇಳುತ್ತಿದ್ದ ಹಾಗೆಯೇ ಉಸಿರಿನಲ್ಲಿ ಬೆಸೆದುಹೋಗಿರುವ ನಮ್ಮ ಮಾತೃ ಭಾಷೆಯಿಂದಲ್ಲವೇ ಒಹ್ ಬೆಳಗಾಗಿದೆ ಎಂದು ಭಾವನೆಗೆ ಬರುವುದು. ಸಂಸ್ಕೃತ ಭಾಷೆಯಲ್ಲಿ ಕರಾಗ್ರೇ ವಸತೇ ಲಕ್ಷ್ಮಿ ...ಶ್ಲೋಕವನ್ನು ಹೇಳಿ ಜಗನ್ಮಾತೆಯನ್ನು ನೆನೆಸಿ ನಮ್ಮ ಕರ ದರ್ಶನ ಮಾಡುತ್ತೇವೆ. ಅ ಶ್ಲೋಕದರ್ಥವನ್ನು ಮತ್ತೆ ಭಾವನೆಗಳನ್ನು ಕನ್ನಡದಲ್ಲಿ ಮನನ ಮಾಡುತ್ತೇವೆ. ಅಲ್ಲಿಂದ ಶುರುವಾಗಿ ರಾತ್ರಿ ಮಲಗುವುದಕ್ಕೆ ಮುಂಚೆ ನಮ: ಶಿವಾಯ, ನಮೋ ನಾರಾಯಣಾಯ ಎಂದು ಕಡೆಯ ಮಾತು ಹೇಳಿಕೊಂಡು ಮಲಗುವವರೆಗೆ ಸಹಸ್ರಾರು ಚಿಂತನೆಗಳು ಮಾತೃ ಭಾಷೆಯಲ್ಲಿಯೇ ತಾನೇ ಉಕ್ಕುವುದು. ವ್ಯವಹಾರಕ್ಕೆ ಆಂಗ್ಲ ಬಳಸಿದರೂ ಕೂಡ ಅದರ ತರ್ಜುಮೆ ಕೆಲಸ ಮೆದುಳಿನಲ್ಲಿ ಕನ್ನಡದಲ್ಲಿ ತಾನೇ.

ಬೆಂಗಳೂರು ವಾಯ್ಸ್ ನವರು ನನ್ನನು ೨-೩ ಅವಕಾಶ ಕೊಟ್ಟು ರೇಡಿಯೋ ಜಾಕಿ ಕೆಲ್ಸಕ್ಕೆ ಕರ್ದಿದ್ರು . ಹೋಗಿ ಮಾಡಿಕೊಟ್ಟೆ . ತುಂಬಾ ಸಂತೋಷವಾಗಿತ್ತು ಕೂಡ .ಸ್ಟುಡಿಯೋದಲ್ಲಿ ಕುಳಿತು ಲೈವ್ ನೇರ ಕನ್ನಡ ಕಾರ್ಯಕ್ರಮ ಕನ್ನಡದಲ್ಲಿ ಮಾತನಾಡುವ ಖುಷಿಯೇ ಬೇರೆ. ಆ ಅನುಭವ ಮತ್ತೆ ಮತ್ತೆ ಬೇಕು ಎಂದು ಕೂಡ ಅನಿಸುತ್ತದೆ . 

ಸತೀಶ್ ಎಂದು ಒಬ್ಬರು ಕರೆ ಮಾಡಿದ್ದರು . ಆಮೇರಿಕದಲ್ಲಾದರೂ ಸರಿ ಅಥವಾ ಬೆಂಗಳೂರಿನಲ್ಲಾದರೂ ಸರಿ ಕನ್ನಡ ಉಳಿವು ಅಳಿವಿನವರಗೆ ಇವತ್ತು ನಾವು ಬಂದು ಕುಳಿತಿದ್ದೇವೆ. ಅಳಿವು ಉಳಿವಿನ ಪ್ರಶ್ನೆಗೆ ರಘು ಅವರು ಉತ್ತರ ನೀಡಿದರು . ಸಿಕ್ಕ ಸಮಯದಲ್ಲಿ ಅವರು ಬೆಂಗಳೂರು ವಾಯ್ಸ್ ನ ಉದ್ದೇಶ ಏನು , ಯಾವ ಕಾರಣಕ್ಕಾಗಿ ಅಸ್ತಿತ್ವಕ್ಕೆ ಬಂತು ಎನ್ನುವ ವಿಷಯಕ್ಕೆ ಉತ್ತರಿಸಿದರು.

ಬಹಳಷ್ಟು ವಿಷಯವಿದೆ . ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಅಂತ ನಮ್ಮಲ್ಲಿ ಮಾತಿದೆ . ತಾಯಿ ತಂದೆಯಾಗಿ ನಾವು ನಮ್ಮ ಮಕ್ಕಳ ಜೊತೆ ಕನ್ನಡದಲ್ಲೇ ಕಡ್ಡಾಯವಾಗಿ ವ್ಯವಹರಿಸಬೇಕು ಆಮೇರಿಕದಲ್ಲಾದರೂ ಸರಿಯೇ ಬೆಂಗಳೂರಿನಲ್ಲಾದರೂ ಸರಿಯೇ ಮಕ್ಕಳಿಗೆ ಬೆಂಗಳೂರು ವಾಯ್ಸ್ ನಂತ ಕನ್ನಡ ಕಾರ್ಯಕ್ರಮಗಳನ್ನು ಕೇಳಿಸಬೇಕು , ಏನ್ ಅರ್ಥ ಆಯಿತು ಸಾಧಕರು ಯಾರು ಬಂದಿದ್ರು ಹೀಗೆ ಎಲ್ಲಾ ವಿಷಯಗಳನ್ನು ಮಕ್ಕಳ ಹತ್ರ ಕನ್ನಡದಲ್ಲೇ ಕಾರ್ಯಕ್ರಮವಾದ ಮೇಲೆ ಮಾತನಾಡಬೇಕು .

ಕನ್ನಡ ಕಲಿಗೆ ಹೋಗಿ ಕನ್ನಡ ಕಲಿಯುವುದರ ಜೊತೆಗೆ ಶನಿವಾರ ದಿವಸ ಈ ಕೆಲಸ ಆಗಬೇಕು. ಕನ್ನಡದ ಹೆಸರಾಂತ ಕವಿಗಳನ್ನು ಮತ್ತವರ ನುಡಿಮುತ್ತುಗಳನ್ನು ತಂದೆತಾಯಂದಿರು ತಿಳಿಸಿಕೊಡಬೇಕು. ಅವರು ಸಾಹಿತ್ಯ ಲೋಕದಲ್ಲಿ ಮಾಡಿದ ಸಾಧನೆಗಳನ್ನು ಪರಿಚಯಿಸುವುದರ ಮೂಲಕ ಕನ್ನಡದ ಸಾಹಿತ್ಯದ ಮೇಲೆ ಒಂದಿಷ್ಟು ಪ್ರೀತಿ ಬೆಳೆಸಿಕೊಳ್ಳಲು ನಮ್ಮೆಲ್ಲರನ್ನೂ ಆಕರ್ಷಿಸುವ ಕೆಲಸ ಕಾರ್ಯಗಳಾಗಬೇಕು. ಎಲ್ಲಾ ಕಲಿಕೆ ಶಾಲೆಯಲ್ಲಿ ಸಿಗುವುದಿಲ್ಲ . ಆದರೆ ಕಲಿಯುವುದಕ್ಕೆ ಉತ್ಸಾಹ ಪ್ರೀತಿ ಮತ್ತು ಪೂರಕವಾದ ವಾತಾವರಣ ಶಾಲೆಯಲ್ಲಿ ಸಿಗುತ್ತದೆ . ಕನ್ನಡ ಕಲಿಯುವಿಕೆಯಲ್ಲಿ ಮನೆಯಲ್ಲಿ ಹೆಚ್ಚಿನ ಕೆಲಸವಾಗಬೇಕು. ಕನ್ನಡ ಪತ್ರಿಕೆಗಳನ್ನು ಇಂಟರ್ನೆಟ್ ಅಲ್ಲಿ ದಿನಕ್ಕೆ ೪ ಸಾಲುಗಳಾದರು ಓದಿದರೆ ಒಳ್ಳೆಯದಲ್ಲವೇ . ಇನ್ನೊಬ್ಬರಿಗೆ ಹೇಳುವ ಮುಂಚೆ ತಂದೆ ತಾಯಂದು ನಾವು ಓದುವುದು ತುಂಬಾ ಸೂಕ್ತ . ಅಪ್ಪ ಅಮ್ಮ ಕನ್ನಡವನ್ನು ಓದಿ ನಮ್ಮ ಮಾತಿನಲ್ಲಿ ಪದಬಳಕೆಯನ್ನು ಉಳಿಸಿಕೊಂಡರೆ ಇನ್ನೂ ಸಂತೋಷ. ಮಕ್ಕಳು ಇದನ್ನೆಲ್ಲಾ ಗಮನಿಸುತ್ತಿರುತ್ತಾರೆ.

ವಿಜ್ನಾರ್ಥ್ ಎಂಬುವರು ಅಮೇರಿಕಾದಲ್ಲಿ ಹುಟ್ಟಿ ಬೆಳೆದು ರೇಡಿಯೋ ಕಾರ್ಯಕ್ರಮಕ್ಕೆ ಕರೆ ಮಾಡಿ ಕನ್ನಡದಲ್ಲಿ ಮಾತನಾಡಿದರು . ಈ ರೀತಿ ಬೇರೆ ಮಕ್ಕಳು ಕನ್ನಡದಲ್ಲಿ ಮಾತನಾಡುವ ಕಲೆ ಬೆಳೆಸಿಕೊಳ್ಳಬೇಕು. ತಂದೆತಾಯಂದಿರು ಕನ್ನಡ ಪುಸ್ತಕಗಳನ್ನು ಮನೆಯಲ್ಲಿ ತಂದಿಡಬೇಕು , ಓದಬೇಕು ಬರೆಯಬೇಕು .. ಕನ್ನಡವನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಾದರೆ ಕನಿಷ್ಠ ಇಷ್ಟು ಕೆಲಸ ಆಗಬೇಕಾಗಿದೆ. ತದನಂತರವೇ ನಮ್ಮ ಭಾಷೆ ನೆಲ ಜಲ ನಮ್ಮವರೆಂಬ ಅಭಿಮಾನ ಆಗ ಅಪಾರವಾಗಿ ಉಕ್ಕಿಬರುವುದು ಕನ್ನಡ ಸಂಕೃತಿಯ ಪರಿಚಯವಾಗುವುದು ಮತ್ತು ಭಾರತವನ್ನಿರುವುದಕ್ಕೆ ಸಹಾಯಮಾಡುವುದು . ಮಾತೃಭಾಷೆಯನ್ನು ಬಳಸದೆ ಹೋದರೆ ನಿಧಾನಗತಿಯಲ್ಲಿ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯವಿದೆ .
-ಸುಬ್ಬು ಪದ್ಮನಾಭ
https://www.facebook.com/photo.php?fbid=10218150391369669&set=a.4010351735588&type=3&theater&notif_t=feedback_reaction_generic&notif_id=1544295003325706

ನನ್ನ ತಂದೆಯ ಬದುಕು ನನಗೆ ಕಲಿಸಿಕೊಟ್ಟ ಪಾಠಗಳು

ನನ್ನ ತಂದೆಯ ಬದುಕು ನನಗೆ ಕಲಿಸಿಕೊಟ್ಟ ಪಾಠಗಳು 
---------------------------------------
ನಮ್ಮ ಮನೆಯಲ್ಲಿ ನನ್ನ ತಂದೆಯವರ ಒಂದು ಹೆರ್ಕ್ಯುಲಸ್ ಸೈಕಲ್ಲು. ನಾನು ಹುಟ್ಟುವ ವೇಳೆಗೆ ಅದಕ್ಕೆ ೨೦ ವರ್ಷ ಆಗಿತ್ತು. ಅದರಲ್ಲೇ ಅವರು ಪೂರ್ತಿ ಜೀವನ ಕಳೆದರು. ನನಗೆ ನಮ್ಮ ಚಿಕ್ಕಪ್ಪ ಹೈ ಸ್ಕೂಲ್ ಗೆ ಬಂದಾಗ ಅಟ್ಲಾಸ್ ಸೈಕಲ್ ಕೊಟ್ಟರು. ಒಟ್ಟು ಮನೆಯಲ್ಲಿ ಎರಡು ಸೈಕಲ್ಲುಗಳೇ ಕಲಿಸಿಕೊಟ್ಟಂತ ಪಾಠ , ಅದರಿಂದ ಸಿಕ್ಕಂತಾ ಸಂತೋಷ ಇವತ್ತು ಬಂಗಲೆಯಂತ ಮನೆಯಲ್ಲಿ ವಾಸವಾಗಿದ್ದು ಕಣ್ಣಿಗೆ ಕಾಣುವುದೆಲ್ಲವನ್ನೂ ಅನುಭವಿಸಿ ಏ ಸಿ ಕಾರಿನಲ್ಲೇ ಓಡಾಡಿದರು ಸಿಗದಿರುವುದು ನನ್ನ ಸ್ವಂತ ಅನುಭವ. ನಮ್ಮೊಳಗೇ ಸಕಲ ಸಂತೋಷವೂ ಅಡಗಿದೆ ಹೊರಗಲ್ಲ ಅನ್ನೋ ವಿಷ್ಯ ತಿಳ್ಸೋಕ್ಕೆ ಈ ಮಾತು ಹೇಳಿದೆ. 

ಆ ಸೈಕಲ್ಲುಗಳನ್ನು ದಿನಾ ಒರೆಸಿಕೊಂಡು ಆಗಾಗ ಸ್ನಾನ ಮಾಡ್ಸಿ , ಆಯುಧ ಪೂಜೆಯ ದಿನ ಪೂಜೆ ಮಾಡಿ ಬಲೂನ್ ಸಿಕ್ಸಿ , ಗಂಧದ ಕಡ್ಡಿ ಸಿಕ್ಸಿ ಒಂದು ದೊಡ್ಡ ರೌಂಡ್ ಹೋಗಿ ಬರುತ್ತಿದ್ದೆ . ಎಂಟನೇ ತರಗತಿಯಿಂದ ಇಂಜಿನಿಯರಿಂಗ್ ೫ ನೇ ಸೆಮಿಸ್ಟರ್ ತನಕ ನನ್ನ ಅಚ್ಚುಮೆಚ್ಚಿನ ಸ್ನೇಹಿತನಾಗಿ ನನ್ನ ಜೊತೆಯೇ ಇತ್ತು . ಪ್ರತಿನಿತ್ಯ ಶಾರದಾ ವಿಲಾಸ್ ಶಾಲೆ ಮತ್ತು ಕಾಲೇಜಿಗೆ ಹೋಗಿ ಬರುತ್ತಿದ್ದೆ . ಇಂಜಿನಿಯರಿಂಗ್ ಕಲಿಯುವ ದಿನಗಳಲ್ಲಿ ಮೈಸೂರು ಬಸ್ ಸ್ಟಾಂಡ್ ಎದುರು ಇದ್ದ ವೆಲ್ಲಿಂಗ್ಟನ್ ಸೈಕಲ್ ಸ್ಟ್ಯಾಂಡ್ನಲ್ಲಿ ಸೈಕಲ್ಲನ್ನು ಇಟ್ಟು ಬಸ್ ಹಿಡಿದು ಮಂಡ್ಯಕ್ಕೆ ಇಂಜಿನಿಯರಿಂಗ್ ಕಲಿಯಲು ಹೋಗುತ್ತಿದ್ದೆ. ಇಂಜಿನಿಯರಿಂಗ್ ಕಲಿಯುವ ದಿನಗಳಲ್ಲಿ ೨:೨೦ ಕ್ಕೆ ವಾಪಸ್ ಬಂದು ಮಂದಿರಾ ಬೇಡಿ ನಟಿಸಿದ್ದ 'ಶಾಂತಿ' ಧಾರಾವಾಹಿ ನೋಡುವ ಹಂಬಲ, ಅದಕ್ಕೆಂದೇ ಸೀದಾ ಮನೆಗೆ ಬಂದು ನಮ್ಮ ಕೇಶುಭಾವನ ಮನೆಯಲ್ಲಿ ಟೀವಿ ಮುಂದೆ ಹಾಜರು .

ಈ ಸಿನೆಮಾ ಗೀಳು ಹೇಗೆ ಬಂತು ಕೆಲವರು ಕೇಳ್ತಾ ಇರ್ತರೆ. ಬೆಳೆಯುವ ವಯೋಮಾನದಲ್ಲಿ ಮೈಸೂರಿನ ಹಲವಾರು ಚಿತ್ರಮಂದಿರಕ್ಕೆ ( ಗಣೇಶ , ವಿದ್ಯಾರಣ್ಯ , ಸರಸ್ವತಿ , ಪದ್ಮ , ಶಾಂತಲಾ , ವುಡ್ಲ್ಯಾಂಡ್ಸ್ , ಸಂಗಮ್ , ರಣಜಿತ್ , ರತ್ನ, ಸ್ಟರ್ಲಿಂಗ್ , ಸ್ಕೈಲೈನ್, ಲಿಡೋ ) ನಾನು ಮತ್ತು ನನ್ನ ಸ್ನೇಹಿತರು ನನ್ನ ಸೈಕಲ್ ಹತ್ತಿ ಡಬಲ್ಸ್ ಕೆಲವು ಸರಿ ಟ್ರಿಪ್ಪಲ್ ರೈಡ್ ಮಾಡಿಕೊಂಡು ಸಿನೆಮಾ ನೋಡಲು ಹೋಗುತ್ತಿದ್ದೆವು.

ದೇವಸ್ಥಾನದ ಕೆಲಸಗಳಲ್ಲಿ ಹೇಗೆ ಅಷ್ಟೊಂದು ಬರಕ್ಕೆ ಸಮಯ ಆಗುತ್ತೆ ಅಂತ ಕೆಲ ಸ್ನೇಹಿತರು ಕೇಳ್ತಾ ಇರ್ತಾರೆ. ನಾನು ಮತ್ತು ನನ್ನ ಪೂಜ್ಯ ತಂದೆಯವರು ಪ್ರತಿ ಗುರುವಾರ ನಮ್ಮ ತಂದೆಯ ಸೈಕಲ್ಲಲ್ಲೇ ಕೃಷ್ಣಮೂರ್ತಿಪುರಂ ರಾಯರ ಮಠಕ್ಕೆ ಡಬಲ್ಸ್ ಹೋಗುತ್ತಿದ್ದವು ರಾಯರ ದರ್ಶನ ಮಾಡುತ್ತಿದ್ದೆವು.
ಚಾಮುಂಡಿಪುರಂ ತುಂಬಾ ಅಪ್ ಇದೆ ಮತ್ತು ಶಾರದಾ ವಿಲಾಸ್ ಕಾಲೇಜು ಹತ್ರ ಅಪ್ ಇದೆ ನನ್ನ ತಂದೆ ಪೆಡಲ್ ಹೊಡೆಯುವಾಗ ಅವರು ಕಷ್ಟ ಪಡುತ್ತಾ ಇದ್ದಿದ್ದು ನೋಡಿ ಅದೇ ಪೆಡಲ್ ಮೇಲೆ ಅರ್ಧ ಕಾಲು ಹಾಕಿ ಪೆಡಲ್ ಮಾಡ್ತಿದ್ದೆ. ರಾಯರ ಪಂಚಾಮೃತ ಅಭಿಷೇಕ ಸೇವಿಸಲು ಮಹಾ ಇಷ್ಟ , ಕಾತುರತೆ. ವಠಾರದಲ್ಲಿ ಎಲ್ಲರ ಮನೆಗೆ ಕೊಟ್ಟು ಬಾ ಅಂತ ಅಜ್ಜಿ ಕಳುಹಿಸುತ್ತಿದ್ದರು. ವಾಪಸ್ ಬಂದ ಮೇಲೆ ಶಾಲೆಗೆ ಹೋಗುವುದು. ಅವರು ಕೆಲ್ಸಕ್ಕೆ ಹೋಗುವುದು.ಇವೆಲ್ಲವೂ ಚಿಕ್ಕಂದಿನಿಂದ ರೂಡಿ. 

ಇಬ್ಬರಿಗೂ ಎರಡು ಸೈಕಲ್ ಅಷ್ಟೇ , ತಂದೆಯ ರೈಲ್ವೆ ಕೆಲ್ಸದಿಂದ ವಸ್ತು ವಾಹನ ಮನೆ ಕಟ್ಟಿಕೊಳ್ಳುವಷ್ಟು ದುಡ್ಡು ನಮ್ಮ ತಂದೆಗೆ ಇರಲಿಲ್ಲ . ಸಂಸಾರ ದೊಡ್ಡದು ..೫ ಜನರಿಗೆ ವಿದ್ಯೆ ಕೊಡಿಸಿ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದೇ ಆಗಿನ ಕಾಲಕ್ಕೆ ದೊಡ್ಡ ವಿಷಯ , ಸಾಲ ಸೌಲ ಮಾಡಿ ಮನೆ ಕಟ್ಕೋಬೇಕು ಅನ್ನೋದು ಅವರಿಗೆ ಬೇಕಿರಲಿಲ್ಲ. ಸಾಲ ಮಾತ್ರ ಯಾವತ್ತೂ ಮಾಡಬಾರದು ಅನ್ನೋ ಮನೋಭಾವ . ವಸ್ತು ವಾಹನಗಳು ಬೇಕು ಬೇಕು ಅನ್ನುವ ಆಸೆ ಆಗ ನನ್ನಲ್ಲಿ ಇರಲಿಲ್ಲ, ನನ್ನ ತಂದೆ ಒಂದೇ ಮಾತು ಹೇಳುತ್ತಿದ್ದರು ಚೆನ್ನಾಗಿ ಓದು ಬರಿ. ಎರಡನೇ ಪೀ ಯು ಇಂದ ಇಂಜಿನಿಯರಿಂಗ್ ಮುಗಿಯುವ ತನಕ ಬರೀ ಟೀವಿ , ಸ್ನೇಹಿತರು ಅಂತ ಕಾಲ ಹರಣ ಮಾಡುತ್ತಿದ್ದೆ . ಕಾಲೇಜು ಪುಸ್ತಕಗಳನ್ನು ತುಂಬಾ ಏನೂ ಓದಿ ಓದಿ ದಬ್ಬಾಕಿಲ್ಲ , ಎಷ್ಟು ಬೇಕೋ ಅಷ್ಟು . ಜೀವನ ಪುಸ್ತಕಗಳನ್ನು ಚೆನ್ನಾಗಿ ಓದಿಕೊಂಡೆ ಅನ್ನಬಹುದು. ಅವರ ಮಾತುಗಳನ್ನು ಚಾಚೂತಪ್ಪದೆ ಅಕ್ಷರಸಹ ಇವತ್ತಿಗೂ ನೆನಪಿಟ್ಟುಕೊಂಡು ಪರಿಪಾಲಿಸಕೊಂಡು ಬರ್ತಾ ಇದ್ದೀನಿ. ನನ್ನ ಕೈಲಿ ಆಗುವುದು ನಾನು ಮಾಡ್ತೀನಿ ಅನ್ನುತ್ತಿದ್ದರು. ಅವರು ತುಂಬಾ ಕಷ್ಟ ಜೀವಿ ಅದಕ್ಕೆ ನನಗೆ ಏನೂ ಕೇಳಬಾರದು ದುಡ್ಡು ಕೇಳಬಾರದು ಶೋಕಿ ಮಾಡುವುದಕ್ಕೆ ದುಡ್ಡು ಸುರಿಯಬಾರದು ಅನ್ನುವುದು ಆಗಲೇ ಮನದಟ್ಟಾಗಿತ್ತು . ಯಾರಾದ್ರೂ ತುಂಬಾ ಕಷ್ಟ ಇವರಿಗೆ ಅಂತ ಅಂದ್ರೆ ನನಗೆ ಮಲ್ಕೋಳೊ ಸಮಯದಲ್ಲಿ ಹೇಳ್ತಾ ಇದ್ದ ಮಾತುಗಳು "ಕಷ್ಟ ಕಾರ್ಪಣ್ಯದಿಂದ ಮಾತ್ರ ಮನುಷ್ಯ ಕಲಿಯೋಕ್ಕೆ ಸಾಧ್ಯ ರಾಜ . ಸುಖದ ಸುಪ್ಪತಿಗೆ ಇದ್ರೆ ಏನೂ ಕಲ್ಯಲ್ಲ "-- ಎಷ್ಟು ಸತ್ಯ ಅಲ್ವಾ ? ನನಗೆ ಎರಡುವರೆ ವರ್ಷ ಇರುವಾಗಲೇ ನನ್ನ ಅಮ್ಮನನ್ನು ಕಳೆದುಕೊಂಡು ಬಹಳ ದುಃಖದಲ್ಲಿ ಮುಳುಗಿಹೋಗಿದ್ದರು. ಅವರಿಗೆ ಒಂದಿಬ್ಬರು ಪುನಃ ಮದುವೆ ಮಾಡಿಕೊಳ್ಳಲು ಒತ್ತಾಯಿಸಿದ್ದರಂತೆ , ಅವರ ಮಾತನ್ನು ನಿರಾಕರಿಸಿದ್ದರು. ನನ್ನ ತಾಯಿಯ ಸಾವಿನ ದುಃಖದಿಂದ ಬಹಳ ಬೇಗ ಹೊರಬಂದು ಮಕ್ಕಳ ಸಲುವಾಗಿ ಎರಡೆರಡು ಶಿಫ್ಟ್ ಕೆಲಸ ಮಾಡಿ ನನ್ನ ೪ ಜನ ಅಕ್ಕಂದಿರ ಮದುವೆ ಮಾಡಿಸಿ, ನನಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದರು.

ತನ್ನ ಕೊನೆಯ ಉಸಿರಿರುವವರೆಗೂ ಸ್ವಂತ ಮಗನಾದ ನನ್ನನ್ನೂ ಸೇರಿಸಿ ಒಬ್ಬರನ್ನೂ ಒಂದು ರೂಪಾಯಿ ಸಹ ಕೇಳದೆ ಆದರ್ಶ ಬದುಕು ಬದುಕಿದವರು. ಆದಷ್ಟು ದೇವರ ಪೂಜೆ ಪುನಸ್ಕಾರ ಅವನ ನಾಮಸ್ಮರಣೆಯಲ್ಲೇ ತಮ್ಮ ಜೀವನ ನಡೆಸಿದವರು. ನೆಂಟರಿಷ್ಠರ ಮದುವೆ ಸಮಾರಂಭಗಳಲ್ಲಿ ಹೋಗಿ ತಮಗೆ ಯಾರು ಹೇಳದಿದ್ದರೂ ಮುನ್ನುಗ್ಗಿ ತಾವೇ ಕೆಲಸ ಮಾಡಿಕೊಡುತ್ತಿದ್ದರು. ಅವರ ಔಧಾರ್ಯವನ್ನು ದುರುಪಯೋಗ ಪಡೆಸಿಕೊಂಡವರ ನೆಂಟರನ್ನೂ ನಾನು ಹಲವು ಬಾರಿ ನೋಡಿದ್ದೇನೆ. ಕೆಲವು ಬಾರಿ ಈ ಕುರಿತು ಪ್ರಶ್ನಿಸಿದಾಗ ಅವರು ಹೇಳುತ್ತಿದ್ದ್ದ ಮಾತು - " ರಾಜ , ನಾವು ಮಾಡಿದ್ದು ನಮಗೆ ಅವರು ಮಾಡೋದು ಅವರಿಗೆ " .
ಆ ಮಾತಿನ ಅರ್ಥ ಮಾತಿನ ಸಿದ್ದಾಂತ ಮತ್ತವರ ಆಂತರ್ಯ ಎಲ್ಲವೂ ನನಗೆ ಇವತ್ತಿಗೆ ತಿಳಿಯುತ್ತದೆ .

ಸ್ವಂತ ಮಕ್ಕಳಾದ ನಾವೇ ಎಷ್ಟೊಂದು ಸಾರಿ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದೆವು , ಹಾಗೆ ಮಾತನಾಡಬಾರದು ಅನ್ನುವ ತಿಳುವಳಿಕೆ ನಮಗೆ ಇರಲಿಲ್ಲ. ಈಗ ನನ್ನ ಜೀವನವೇ ನನಗೆ ಚೆನ್ನಾಗಿ ಪಾಠ ಕಲಿಸಿದೆ , ಈಗ ವಾಸಿ , ನಾನು ಚುಚ್ಚಿ ಮಾತಾಡಲ್ಲ . . ನನ್ನ ತಂದೆ ನಿಜವಾಗಿ ಸಿಟ್ಟು ಮಾಡಿಕೊಂಡು ಒಂದಕ್ಕೂ ಪ್ರತಿಕ್ರಿಯಿಸಿದ್ದು ನನ್ನ ಜನ್ಮದಲ್ಲಿ ನಾನು ನೋಡೇ ಇಲ್ಲ. ಬಹಳ ಮೃದು ಸ್ವಭಾವದ ಏಕಾಂಗಿ ವ್ಯಕ್ತಿತ್ವ ಮತ್ತು ಸರ್ವಶಕ್ತ ಆಧ್ಯಾತ್ಮ ಚಿಂತಕರು. ಉತ್ತುಂಗತ ಮಟ್ಟದಲ್ಲಿ ಬದುಕನ್ನು ಅರ್ಥ ಮಾಡಿಕೊಂಡು ಅವರ ಅತ್ಯುತ್ತಮ ಚಿಂತನೆಗಳೊಂದಿಗೆ ನಡೆದುಕೊಂಡವರು. ತುಂಬಾ ಸರಳವಾದ ಜೀವನ ಶೈಲಿ ನಡೆಸಿದವರು. ಈ ಮಾತುಗಳನ್ನು ಒಪ್ಪುವುದಕ್ಕೆ ಇವತ್ತಿಗೆ ಕನಿಷ್ಠ ಅಂದ್ರು ೫೦೦ ಜನರಾದ್ರು ಸಿಗುತ್ತಾರೆ .

ಇನ್ನು ನಮ್ಮ ಮನೆ ಬಗ್ಗೆ ಏನು ಹೇಳಲಿ ...ಅವರ ಪಾಲಿಗೆ ಬಂದಿದ್ದು ಒಂದು ಚಿಕ್ಕ ಹಂಚಿನ ಮನೆ(300 sq feet) ,ಅದರ ಪಕ್ಕದಲ್ಲಿ ಇನ್ನೊಂದು ಚಿಕ್ಕ ಮನೆ (300 Sq feet ,ತಿಂಗಳಿಗೆ ೨೦೦ ರೂಪಾಯಿ ಬಾಡಿಗೆ ಅದು ನನ್ನ ವಿದ್ಯಾಭ್ಯಾಸಕ್ಕೆ ಅಪ್ಪ ಕೊಡುತ್ತಿದ್ದರು , ಅದರಲ್ಲಿ ನನ್ನ ಓದು ಬರಹ, ಪುಸ್ತಕ ,ಪೆನ್ನು, ಪೆನ್ಸಿಲ್ಲು ಬಟ್ಟೆ ,ಶಾಲೆ ಬ್ಯಾಗು ಮತ್ತು ಸಿನಿಮಾ ಶೋಕಿ ಇಷ್ಟು ನಡೆಯುತ್ತಿತ್ತು ) ನಮ್ಮ ಮನೆಯ ಹಂಚು ೩-೪ ಜಾಗದಲ್ಲಿ ಮುರಿದ ಕಾರಣ ಮಳೆಗಾಲದಲ್ಲಿ ತುಂಬಾ ದಿನಗಳು ಪೂರ್ತಿಯಾಗಿ ನಿದ್ದೆ ಮಾಡಿದ್ದೇ ಇಲ್ಲ. ಅಲ್ಲಲ್ಲಿ ಬಕೀಟು ಇಟ್ಟು ನೀರು ಬೀಳದೆ ಇರುವ ಜಾಗದಲ್ಲಿ ಕೂತು ಕಳೆದ ಹಲಾವಾರು ರಾತ್ರಿಗಳು ಲೆಕ್ಕವೇ ಇಲ್ಲ. ಆ ಚಿಕ್ಕ ಚಿಕ್ಕ ಮನೆಯನ್ನು ಜೋಡಿಸಿ ಈಗ ಶೀಟ್ ಮನೆ ಅಂತ ಇದೆ , ಅಲ್ಲಿ ನನ್ನ ಅಕ್ಕ ತನ್ನ ಮಗನೊಂದಿಗೆ ವಾಸಿಸುತ್ತಿದ್ದಾಳೆ. ನಮ್ಮ ಅಜ್ಜಿ ನಮ್ಮ ಮನೆಯ ಕಷ್ಟ ಕಾರ್ಪಣ್ಯಗಳನ್ನು ನೋಡಿ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಮುದ್ದೆ ಸಾರು ತಿಳಿ ಮಜ್ಜಿಗೆ ನಮ್ಮ ಅಪ್ಪನ ಪ್ರೀತಿಯ ಊಟ . ಅದನ್ನೇ ನಮ್ಮ ಅಜ್ಜಿ ಹೆಚ್ಚು ಮಾಡುತ್ತಿದ್ದರು , ಆಗಲೇ ನನಗೆ ಮುದ್ದೆ ತಿನ್ನುವ ಅಭ್ಯಾಸವಾಯಿತು. ನನ್ನ ಹಲವಾರು ಪ್ರಶ್ನೆಗಳಿಗೆ ತುಂಬಾ ಆಧ್ಯಾತ್ಮ ವಿಚಾರಗಳು ಅಡಕವಾಗಿರುವ ಉತ್ತರ ಕೊಡುತ್ತಿದ್ದರು , ಇದು ಅವರ ತುಂಬಾ ಸ್ವಂತ ವಿಚಾರ ಆಚೆಯವರಿಗೆ ಒಂದು ತುಣುಕು ಗೊತ್ತಾಗುತ್ತಿರಲಿಲ್ಲ.

Sep 8, 2016 ಇದೇ ದಿನ ಮೊದಲು ಅವರು ಹೊಟ್ಟೆಯಲ್ಲಿ ನೋವು ತಡೆಯಕ್ಕೆ ಕಷ್ಟ ಆಗ್ತಾ ಇದೆ ಎಂದು ಹೇಳಿಕೊಂಡಿದ್ದು. ವಿಷಯ ಹೀಗೆ ಅಂತ ತಿಳಿದ ಮೇಲೆ ಒಂದು ಕ್ಷಣವೂ ಅಮೇರಿಕಾದಲ್ಲಿ ಉಳಿಯುದಕ್ಕೆ ಮನಸ್ಸಿರಲಿಲ್ಲ . ಮ್ಯಾನೇಜರ್ ಹತ್ರ ಹೋದೆ , ಎಷ್ಟು ಕಾಲ ಆಗುತ್ತೋ ಗೊತ್ತಿಲ್ಲ ನನ್ನ ಕೆಲ್ಸಕ್ಕೆ ರಾಜೀನಾಮೆ ಅಂತ ಲೆಕ್ಕ ಅಂದೆ... ಸೀದಾ ಭಾರತಕ್ಕೆ ಮರಳಿದೆ . ೧೦ ವರ್ಷಗಳಿಂದ ಅಮೇರಿಕಾದಲ್ಲಿ ವಾಸವಾಗಿದ್ದ ನನಗೆ ನನ್ನನ್ನು ತುಂಬಾ ಕಾಡುವ ವಿಷಯ ಅಂತ ಇದ್ದಿದ್ದು ನನ್ನ ತಂದೆಯ ಕಡೆಯ ದಿನಗಳ ಬಗ್ಗೆ ಮಾತ್ರ . ನಾನು ಅವರ ಕಡೆಯ ದಿನಗಳಲ್ಲಿ ಹೇಗಾದರೂ ಉಪಯೋಗವಾಗಬೇಕು ಅನ್ನುವುದೊಂದೇ , ಮತ್ತೇನೂ ಇಲ್ಲ . ಸ್ಕ್ಯಾನ್ ಮಾಡಿಸಿಕೊಂಡು ಮೈಸೂರಿನಲ್ಲಿ ಆಸ್ಪತ್ರೆ ಸೇರಿಕೊಂಡವರು (ಅಲ್ಲಿಂದ ಬೆಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು ).ಇನ್ನು ನಾನು ಅಮೇರಿಕಾದಿಂದ ಹೋಗಿ ಬೆಂಗಳೂರಿನ ಆಸ್ಪತ್ರೆಯಿಂದ ನಮ್ಮ ಬೆಂಗಳೂರಿನ ಮನೆಗೆ ಕರೆದುಕೊಂಡು ಬರುವವರೆಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳುತ್ತಾ ಇದ್ದರು. 84 ವರ್ಷ ಮತ್ತು ನಾಲ್ಕನೇ ಹಂತದ Esophageal cancer. ಏನು ನಿರೀಕ್ಷಿಸಬಹುದು ಎಂಬುದು ನಮಗೆ ತಿಳಿದರೆ ಸಾಕು.

ಬೆಂಗಳೂರಿನ ಆಸ್ಪತ್ರೆಗೆ ಹೋಗಿ ನಮ್ಮಪ್ಪನನ್ನು ತಬ್ಬಿಕೊಂಡು ಗಳಗಳ ಅತ್ತುಬಿಟ್ಟೆ . ನನ್ನಪ್ಪ ನನಗೆ ಕಣ್ಣು ಒರೆಸಿ ಅಳಬೇಡಪ್ಪ ಅಂತ ಸಮಾಧಾನ ಮಾಡಿದ್ದರು . ಎಷ್ಟೇ ಸಮಾಧಾನ ಮಾಡಿದ್ರು ಮನಸ್ಸು ಸುಮ್ನೆ ಇರ್ಬೇಕಲ್ಲ , ದುಃಖ ಆವರಿಸಿಕೊಂಡು ಬಂದೇ ಬರುತ್ತೆ. ದೇವರ ಸತ್ಯ ಮತ್ತು ಜಗದ ನಿಯಮ ಅಂತ ಒಂದು ಇರುತ್ತೆ ಅದರ ಪ್ರಕಾರ ಎಲ್ಲವೂ ನಡಿಯುತ್ತೆ ಅಂತ ನನ್ನನ್ನು ಮತ್ತೆ ಮತ್ತೆ ಸಮಾಧಾನ ಮಾಡಿದ್ರು. ಅವರಲ್ಲಿ ಆ ಮಟ್ಟಕ್ಕೆ ಚಿಂತನೆಗಳು ಇದೆ ಎಂದು ಮಗನಾದ ನನ್ನ ಬಿಟ್ಟರೆ ಬೇರೆ ಯಾರಿಗೂ ತಿಳಿದಿರುವುದಕ್ಕೆ ಸಾಧ್ಯವೇ ಇಲ್ಲ. ಅಷ್ಟು ಸ್ವಂತ ವಿಷಯಗಳು ಅವರದಾಗಿತ್ತು . ಅವರ ಕೊನೆಯ ಹತ್ತು ವರ್ಷಗಳಲ್ಲಿ ಅವರು ತುಂಬಾ ಇಷ್ಟ ಪಟ್ಟು ಹೋಗುತ್ತಿದ್ದ ಜಾಗ ಮೈಸೂರಿನ ಮನೆ ಹತ್ತಿರದ ಸಂಗೀತ ಸಭೆ-ನಾದಬ್ರಹ್ಮ ಸಂಗೀತ ಸಭಾ , ಮೈಸೂರು ಅವರ ತುಂಬಾ ಇಷ್ಟವಾದ ಸ್ಥಳ. ದೊಡ್ಡ ದೊಡ್ಡ ವಿದ್ವಾಂಸರು ಬಂದು ಗೀತಾಜ್ಞಾನ ಯಜ್ಞ , ಮಂಕುತಿಮ್ಮನ ಕಗ್ಗ ಎಲ್ಲದರ ಬಗ್ಗೆ ಮಾತನಾಡುವುದನ್ನು ತಿಳಿದುಕೊಂಡು ಬರುತ್ತಿದ್ದರು. ನಾವಿಬ್ಬರು ಸ್ನೇಹಿತರ ಹಾಗೆ ಗಂಟೆ ಗಟ್ಟಲೆ ಅದರ ಬಗ್ಗೆ ಅಕ್ಟೋಬರ್ 2016 ರ ತನಕವೂ ಮಾತನಾಡುತ್ತಿದ್ದೆವು.

ಸೆಪ್ಟೆಂಬರ್ ತಿಂಗಳ ಕೊನೆಯ 27 ನೇ ತಾರೀಕು ಆಸ್ಪತ್ರೆಯಲ್ಲಿ ಅವರಿದ್ದಾಗ ನಾನು ಕ್ಯಾಂಟೀನ್ ಇಂದ ಸ್ವಲ್ಪ ತಿಂಡಿ ಕಾಫಿ ತಂದು ಒಳಗೆ ಬರುವಾಗ ಅವರ ಕ್ಯಾನ್ಸರ್ ರಿಪೋರ್ಟ್ ಓದುತ್ತಾ ಇದ್ರು ತಮಗೆ ಕ್ಯಾನ್ಸರ ಆಗಿರುವುದು ತಿಳಿದುಕೊಂಡು ದೇವರ ಫೋಟೋ ನೋಡಿ ದೇವರಿಗೆ ಕೈ ಮುಗಿದರು. ಒಹ್ ನನಗೆ ಕ್ಯಾನ್ಸರ ಆಗಿರೋದು ಅದಕ್ಕೆ ಇಷ್ಟು ಸಂಕಟ ನೋವು ಎಂದು ಬಾಯಿ ಬಿಟ್ಟು ಹೇಳುದ್ರು . ಅದೆಲ್ಲ ಅಷ್ಟು ಯೋಚ್ನೆ ಮಾಡ್ಬೇಡಪ್ಪಾ , ನಾಳೆ ಡಿಸ್ಚಾರ್ಜ್ ಮಾಡ್ತಾರೆ Morphin ಕೊಟ್ಟಿದಾರೆ ನೋವೆಲ್ಲಾ ಕಡಿಮೆ ಆಗ್ತಾ ಹೋಗುತ್ತೆ ಅಂತ ಸುಳ್ಳು ಹೇಳ್ದೆ , ಆಚೆ ಬಂದು ವಿಪರೀತ ಅತ್ತೆ . ಅವರಿಗೆ ತಿಳಿದಿತ್ತು ಇನ್ನು ಹೆಚ್ಚು ಕಾಲ ಇಲ್ಲ ಅಂತ. ಆದರೂ ದುಃಖ ಪಟ್ಟವರಲ್ಲ. ಸುಮ್ಮನೆ ಕುಳಿತು ಮುಂದೆ ಮಾಡುವ ಕೆಲ್ಸಗಳ ಬಗ್ಗೆ ವಿಚಾರ ಮಾಡುತ್ತಾ ಸ್ವಲ್ಪ ನಮ್ಮೆಲ್ಲರ ಯೋಗಕ್ಷೇಮ ವಿಚಾರಗಳನ್ನು ಮಾತನಾಡಿದರು. ಆ ಮಟ್ಟಕ್ಕೆ ಜೀವನ ತೃಪ್ತಿ ಅನುಭವಿಸಿ ಮುಂದಿನ ಪ್ರಯಾಣಕ್ಕೆ ಒಪ್ಪಿಕೊಂಡು ತಯಾರಿದ್ದರು. ದೇವರ ಧ್ಯಾನವೊಂದೇ ಧ್ಯೇಯ. ನನಗೆ ಯಾಕಪ್ಪ ಹೀಗೆ ಮಾಡಿದೆ ಅಂತ ಒಂದು ದಿನವೂ ಅವರ ಬಾಯಲ್ಲಿ ಬರ್ಲೇ ಇಲ್ಲ. 50-60 ಜನ ನೆಂಟರು ಇಷ್ಟರು ಆಸ್ಪತ್ರೆಗೆ ಮತ್ತು ಮನೆಗೆ ಅವರು ಬದುಕಿದ್ದಾಗ ಬಂದು ನಾನು ಅಮೇರಿಕಾದಿಂದ ಕಡೆಗಾಲದಲ್ಲಿ ಬಂದೆ ಅಂತ ಬೆನ್ನು ತಟ್ಟಿ ಪ್ರೋತ್ಸಾಹ ಕೊಟ್ಟು ಅಪ್ಪನನ್ನು ಚೆನ್ನಾಗಿ ನೋಡಿಕೊಪ್ಪ ಅಂದು ಹೋದರು . 

ಮನೆಗೆ ಕರೆದುಕೊಂಡು ಬಂದು ನಾವಿಬ್ಬರು ಬೇಕಾದಷ್ಟು ವಿಷಯಗಳನ್ನು ಮಾತನಾಡಿದ್ದೇ ನನ್ನಲ್ಲಿ ಉಳಿದ ಎಂದೂ ಅಳಿಯದ ಅತ್ಯುತ್ತಮವಾದ ಆಸ್ತಿ. 10 ವರ್ಷ ಅವರಿಂದ ದೂರವಿದ್ದಿದ್ದೂ ಕೂಡ ನನಗೆ ಅಸಮಾಧಾನ ತಂದಿಟ್ಟ ದಿನಗಳೂ ಕೂಡ ಹೌದು . ವರ್ಷಕೊಮ್ಮೆ 20 ದಿನ ನೋಡಿ ಮಾತಾಡಿದ್ದು ಅಷ್ಟೇ ಆಯ್ತಲ್ಲ ಅಂತ ಅವರು ಹೋದಮೇಲೆ ತುಂಬಾ ಕಾಡುತಿದೆ .
ಅವರ ಕಡೆಯ ಒಂದು ತಿಂಗಳು ಅವರ ಜೊತೆಯಲ್ಲಿ ಇದ್ದು ನನಗೆ ಏನೆಲ್ಲಾ ವಿಷಯಗಳನ್ನು ತಿಳಿಸಬೇಕೋ ಎಲ್ಲವನ್ನು ತಿಳಿಸಿದರು, ವೇದ ಮಂತ್ರಗಳನ್ನು ಪಕ್ಕದಲ್ಲೇ ಕೂತು ಓದುತ್ತಿದ್ದೆ , ಕೇಳಿ ಸಂತೋಷ ಪಟ್ಟು ನನ್ನ ಕೈಯನ್ನು ಗಟ್ಟಿಯಾಗಿ ಒತ್ತಿ ತಮ್ಮ ಹಣೆಯ ಮೇಲೆ ಇಟ್ಟಿಕೊಳ್ಳುತ್ತಿದ್ದರು. ನನಗೆ ಅಂತರಾಳದಲ್ಲಿ ತುಂಬಾ ಕಾಡುತ್ತಾ ಇದ್ದಿದ್ದು ಅದೇ , ನನ್ನ ತಂದೆಯವರಿಗೆ ಕಡೆಗಾಲದಲ್ಲಿ ನೆರವಾಗಬೇಕು ಅನ್ನುವುದೊಂದೇ. 
ನನ್ನ ಪಾಲಿಗೆ ತುಂಬಾ ಖುಷಿ ತಂದಿದೆ, ಅಷ್ಟೊಂದು ದಿನಗಳು ಅವರೊಂದಿಗೆ ಒಟ್ಟಿಗೆ ಕಾಲ ಕಳೆದಿರುವುದು ಎಂದೆಂದಿಗೂ ಮರೆಯಲಾರೆ. ಅದನ್ನು ದೇವರು ಈ ರೀತಿಯಾಗಿ ನನಗೆ ಕರುಣಿಸಿದ ಎಂದು ಭಾವಿಸಿದೆ . ಇದೆಲ್ಲವೂ ನನ್ನ ತಂದೆಯ ಮೂಲಕ ದೇವರು ತನ್ನ ಇರುವಿಕೆಯನ್ನು ನನ್ನ ಅನುಭವಕ್ಕೆ ತಂದುಕೊಟ್ಟ ರೀತಿ.
ಅವರು ಹೇಳಿಕೊಟ್ಟಿರುವ ಮಾತುಗಳು ನಡೆದುಕೊಂಡು ಬಂದ ಆದರ್ಶಗಳನ್ನೇ ಅನುಸರಿಸಿ ನಾನು ಅವರಂತೆಯೇ ನಡೆದುಕೊಳ್ಳಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದೇನೆ.


Friday, December 7, 2018

ಬೃಹತ್ತಾಗಿ ಬೆಳೆದಿರುವ ಬೆಂಗಳೂರು


ಬೆಂಗಳೂರಿನಲ್ಲಿ ಈಗ ಎಲ್ಲಿಂದ ಎಲ್ಲಿಗೆ ಹೋಗುವುದಕ್ಕೂ ಅನುಕೂಲ ಜಾಸ್ತಿಯಾಗಿದೆ . ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ನನ್ನ ಫ್ಲೈಟ್ ರಾತ್ರಿ ೧೨:೪೦ ಕ್ಕೆ ಬಂದಿಳಿಯಿತು , ೧:೦೧ ಕ್ಕೆ ಆಚೆ ಬಂದೆ. ನನಗೆ ಮುಂಚೆಯಿಂದಲೂ ಬೆಂಗಳೂರಿನಲ್ಲಿ ಪಬ್ಲಿಕ್ ಟ್ರಾನ್ಸ್ಪೋರ್ಟ್ ಇಷ್ಟ . ರಾತ್ರಿ ೧:೦೧ ಕ್ಕೆ ಬಸ್ ತುಂಬಾ ಜನ ಅದರಲ್ಲೂ ನಿಂತು ಪ್ರಯಾಣಿಸುತ್ತಿದ್ದರು .ಅಷ್ಟು ರಾತ್ರಿಯಲ್ಲಿ ೧೫ ರಿಂದ ೨೦ ಬಸ್ ಗಳು ನಿಂತಿತ್ತು .ಬಿ ಎಂ ಟಿ ಸಿ ಬಸ್ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿದೆ . ಎಲ್ಲಾ ಬಸ್ ಗಳು ತುಂಬಿತ್ತು . ಏರ್ಪೋರ್ಟ್ ಆಚೆ ಎಲ್ಲಾ ಕಡೆ ಕಣ್ಣು ಹಾಯಿಸಿದೆ . ಕೃಷ್ಣರಾಜ ಮಾರುಕಟ್ಟೆಯಲ್ಲಿ ಎಷ್ಟು ಜನರಿರುತ್ತಾರೋ ಅಷ್ಟೇ ಜನರು ಇವತ್ತು ಏರ್ಪೋರ್ಟ್ ನಲ್ಲಿ ಸಿಕ್ತಾರೆ , ಎರಡರಲ್ಲೂ ಅಷ್ಟು ಜನರು . ಒಂದು ಕಾಲ ಇತ್ತು , ಆಕಾಶದಲ್ಲಿ ಪ್ರಯಾಣ ಮಾಡುವವರ ಭಾರತೀಯರ ಸಂಖ್ಯೆ ತುಂಬಾ ಕಡಿಮೆ ಇತ್ತು . ಆದರೆ ಇವತ್ತಿನ ಭಾರತ ಸಂಪೂರ್ಣ ಬದಲಾಗಿದೆ , ಮಧ್ಯಮ ವರ್ಗದ ಜನರೂ ಕೂಡ ಫ್ಲೈಟ್ ಹತ್ತಿ ಪ್ರಪಂಚದ ಮೂಲೆ ಮೂಲೆಗಳಿಗೆ ಹೋಗುತ್ತಿದ್ದಾರೆ . ದೇಶದೊಳಗಂತೂ ಪ್ರತಿ ಫ್ಲೈಟ್ ತುಂಬಿರುತ್ತೆ . ಡೊಮೆಸ್ಟಿಕ್ ಚೆಕ್ ಇನ್ ನೋಡಿದರೆ ತಿಳಿಯುತ್ತೆ , ಅಮೇರಿಕಾ ದೇಶದಲ್ಲೂ ಹೀಗೆಯೇ. ಯಾವಾಗ ದೇಶದ ಮಧ್ಯಮವರ್ಗದ ಜನರಿಗೆ ಮನೆ ಕಾರ್ ಮತ್ತು ಫ್ಲೈಟ್ ಎಟುಕಿಸುತ್ತೋ , ದೇಶದ ಪ್ರಗತಿ ಖಂಡಿತಾ ಸಾಧ್ಯ. ಇದಂತೂ ತುಂಬಾ ಒಳ್ಳೆಯ ವಿಷಯ. ಇಷ್ಟೊಂದು ಜನಸಂಖ್ಯೆ ಇರುವ ರಾಷ್ಟ್ರ ಈ ರೀತಿ ಬೆಳೆದರೆ ಮಾತ್ರ ಪ್ರಪಂಚದ ಎಲ್ಲಾ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಭಾರತ ಗಟ್ಟಿಯಾಗಿ ನಿಲ್ಲಲು ಸಾಧ್ಯ. ಬಸ್ ಏರುವಾಗ ಈ ರೀತಿ ಭಾವನೆಗಳು ವಿಷಯಗಳೆಲ್ಲವೂ ನನ್ನಲ್ಲಿ ಹರಿಯುತ್ತಿತ್ತು . ಈ ಆಲೋಚನೆಗಳೊಂದಿಗೆ ಸೀದಾ ಬನಶಂಕರಿಗೆ ಹತ್ತಿದೆ , ಬಸ್ ಅಲ್ಲಿ ನನ್ನ ಪಕ್ಕ ಇದ್ದವರನ್ನು ಪರಿಚಯ ಮಾಡ್ಕೊಂಡೆ , ಮಾತನಾಡತೊಡಗಿದೆ ಅವರು ಕೂಡ ಪುಣೆ ಇಂದ ಬಂದಿಳಿದ ಕನ್ನಡಿಗರು . ಯಾವಾಗ ಅಮೆರಿಕಕ್ಕೆ ಹೋದ್ರಿ ಅಲ್ಲಿಂದ ವಿಷಯ ಶುರು ಆಯಿತು. 
ಈಗ ಕಳೆದ ೧೨ ವರ್ಷದಿಂದ ಅಮೇರಿಕಕ್ಕೆ ಹೋಗಿದ್ದು . ಓದು ಮುಗಿದ ಮೇಲೆ ೧೦ ವರ್ಷಗಳ ಕಾಲ ನಮ್ಮ ಬೆಂಗಳೂರಿನಲ್ಲಿ ಇದ್ದೆ. ಆ ಕಾಲಕ್ಕೂ ಈ ಕಾಲಕ್ಕೂ ಜನರು ೪೦ ಲಕ್ಷದಿಂದ ೧.೨ ಕೋಟಿಯಷ್ಟು ಬೆಂಗಳೂರಿನಲ್ಲಿ ಏರಿದೆ . ಅಷ್ಟೊಂದು ಜನರು ರಸ್ತೆಯಲ್ಲಿ ಓಡಾಡಬೇಕು ಎಂದರೆ ಟ್ರಾಫಿಕ್ ಇದ್ದೆ ಇರುತ್ತೆ . ಸ್ಯಾನ್ ಫ್ರಾನ್ಸಿಸ್ಕೋ ಕ್ಯಾಲಿಫೋರ್ನಿಯಾದಲ್ಲಿ ಕೂಡ ಇರುವ ಜನರಿಗೆ ರಸ್ತೆಯಲ್ಲಿ ಟ್ರಾಫಿಕ್ ತುಂಬಾ ಇರುತ್ತದೆ . ವ್ಯತ್ಯಾಸ ಏನೆಂದರೆ ಅಲ್ಲಿ ಒಬ್ಬರ ಹಿಂದೆ ಇನ್ನೊಬ್ಬರು ನಿಂತಿರುತ್ತಾರೆ , ಲೇನ್ ಸಿಸ್ಟಮ್ ಪಾಲನೆ ಮಾಡುತ್ತಾರೆ , ಇಲ್ಲಿ ಅಷ್ಟಿಲ್ಲ ಅನ್ನೋದು ಬಿಟ್ರೆ ನನಗೆ ಅಷ್ಟೊಂದು ವ್ಯತ್ಯಾಸ ಬೇರೆ ಕಾಣುವುದಿಲ್ಲ . ನನಗೆ ೮ ಮೈಲಿ ಪ್ರಯಾಣ ಮಾಡಕ್ಕೆ ಅಲ್ಲಿ ಕೂಡ ೪೫ ನಿಮಷ ತೆಕೊಳುತ್ತೆ . ಅವರ ಹತ್ತಿರ ದಾರಿಯುದ್ದಕ್ಕೊ ಅವರ ಹತ್ತಿರ ಈ ವಿಷಯಗಳೆಲ್ಲವನ್ನೂ ಮಾತಾಡ್ಕೊಂಡು ಬನಶಂಕರಿ ಬಂದಿದ್ದೆ ಗೊತ್ತಾಗ್ಲಿಲ್ಲ ಬಂದಿಳಿದಾಗ ೨:೪೫ ಬೆಳಗಿನ ಜಾವ . ಆಟೋದವರು ಅಂದ್ರೆ ನನಗೆ ತುಂಬಾ ಅಭಿಮಾನ ಕಾರಣ ಹಿಂದೊಮ್ಮೆ ಸಿಲ್ಕ್ ಬೋರ್ಡ್ ಜಂಕ್ಷನ್ ಅಲ್ಲಿ ಆಕ್ಸಿಡೆಂಟ್ ಬೈಕ್ ಹಿಂದಿನ ಚಕ್ರಕ್ಕೆ ಕಾಲು ಇಕ್ಕಿಹಾಕೊಂಡು ಕಾಲು ಮೂಳೆ ಮುರಿದಿತ್ತು . ಆ ಘಟನೆಯಾದ ಸ್ಥಳಕ್ಕೆ ಆಟೋದವರು ನಿಲ್ಲಿಸಿ ನನ್ನನ್ನು ಬಿ ಟಿ ಎಂ ನ ಆಸ್ಪತ್ರೆಗೆ ಸೇರಿಸಿದ್ದರು. ಮನೆಗೆ ಆಟೋ ಹತ್ಕೊಂಡೆ , ಆಟೋದವರ ಹತ್ರ ಮಾತಾಡ್ಕೊಂಡು ಮನೆಗೆ ಬಂದೆ . 
ಇವತ್ತಿನ ದಿವಸ ಬೃಹತ್ತಾಗಿ ಬೆಳೆದು ನಿಂತಿರುವ ಬೆಂಗಳೂರಿನಲ್ಲಿ ನಮ್ಮ ಕಂಪೋರ್ಟ್ಗಿಂತ ಹೆಚ್ಚು ಸಮಯ ಉಳಿಸುವುದು ಮುಖ್ಯ. ಅದಕ್ಕೆ ಸ್ವಲ್ಪ ನಾವು ನಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವುದು ಮುಖ್ಯ ಅನ್ನಿಸುತ್ತದೆ .ಸಮಯ ಉಳಿಸುವುದಕ್ಕೆ ಮೆಟ್ರೋ ರೈಲ್ ಪ್ರಯಾಣವಂತೂ ತುಂಬಾ ಒಳ್ಳೆಯದು. ಮೊನ್ನೆ ಹೀಗೆ ನನ್ನ ಹೆಂಡತಿಯ ನೃತ್ಯ ಪ್ರದರ್ಶನ ದೂರದರ್ಶನ ಚಂದನ ವಾಹಿನಿಯವರ ಕಾರ್ಯಕ್ರಮ ರಾತ್ರಿ ೯:೩೦ ಗೆ ಮುಗಿಯಿತು . ಅರ್ಧ ಕಿಲೋಮೀಟರ್ ನಡೆದರೆ ಸಾಕು ಸೆಂಟ್ರಲ್ ಕಾಲೇಜು ಟ್ರೈನ್ ನಿಲ್ದಾಣ ಇದೆ . ಅಲ್ಲಿ ಹತ್ತಿಕೊಂಡು ಬೆಂಗಳೂರು ದಕ್ಷಿಣ ಭಾಗಕ್ಕೆ ಮೆಟ್ರೋ ಏರಿ ಬಂದೆವು . ರಾತ್ರಿ ೧೦:೨೦ ಕ್ಕೆ ಎಲಚೇನಹಳ್ಳಿ ತಲುಪಿದರೆ ಆಟೋ ರಿಕ್ಷಾಗಳು ತುಂಬಾ ಸಿಗುತ್ತದೆ ಮತ್ತು ಬಸ್ ಕೂಡ ಅಷ್ಟು ರಾತ್ರಿಯಲ್ಲಿ ಸಿಗುತ್ತದೆ . ಒಂದಂತೂ ನಿಜ ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೂ ಹೋಗಲಿಕ್ಕೆ ಮೆಟ್ರೋ , ಬಸ್ , ಆಟೋ ರಿಕ್ಷಾ ಮತ್ತು ಕ್ಯಾಬ್ ( ಉಬರ್ ಅಥವಾ ಓಲಾ ) ವ್ಯವಸ್ಥೆ ಹೆಚ್ಚು ಹೆಚ್ಚು ಆಗಿದೆ . ಜನ ಜಂಗುಳಿ ವಿಪರೀತ ಯಾಕೆಂದರೆ ತುಂಬಾ ಅವಕಾಶ ಹಿಂದೆಂಗಿಂತಲೂ ಬೆಂಗಳೂರಿನಲ್ಲಿ ಈಗ ಅತಿ ಹೆಚ್ಚು . ನಾನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಲವಾರು ರಾಜ್ಯದ ಜನರನ್ನು ಬೆಂಗಳೂರಿನಲ್ಲಿ ಮಾತನಾಡಿಸಿದ್ದೇನೆ . 
ಇಷ್ಟೊಂದು ರಾಜ್ಯದ ಜನರು ಬೆಂಗಳೂರಿಗೆ ಬರುತ್ತಾರೆ ಎಂದು ನನಗಂತೂ ೮೦ ರ ದಶಕದಲ್ಲಿ ತಿಳಿದಿರಲಿಲ್ಲ . ಅವರೆಲ್ಲರಿಗೂ ಬೆಂಗಳೂರು ತುಂಬಾ ಇಷ್ಟ ಅನ್ನೋ ಮಾಹಿತಿ ಅವರನ್ನು ಮಾತನಾಡಿಸಿದ ಮೇಲೆ ತಿಳಿಯಿತು . ಹವಾಮಾನ ಬೆಂಗಳೂರಿನದು ತುಂಬಾ ಚೆನ್ನಾಗಿದೆ . ನಮ್ಮ ಮೈಸೂರಿಗಿಂತಲೂ ಒಂದು ಪಟ್ಟು ಚೆನ್ನಾಗಿದೆ. ಜನ ತುಂಬಾ ಇರೋ ಕಡೆ ಕಸ ಮಾಲಿನ್ಯ ಇದ್ದಿದ್ದೇ ಆದ್ದರಿಂದ ನಮ್ಮ ಬೆಂಗಳೂರನ್ನು ಇನ್ನೂ ಸುಂದರವಾಗಿ ಕಾಪಾಡಿಕೊಳ್ಳಲು ಸರ್ಕಾರದ ಎಲ್ಲಾ ಕೆಲ್ಸಗಳ ಜೊತೆಗೆ ಜನಸಾಮಾನ್ಯರು ಕೈ ಜೋಡಿಸುವ ಅಗತ್ಯ ಇದೆ . ಜನರು ಸ್ವತ್ಛತೆಯ ಕಡೆಗೆ ಹೆಚ್ಚಿನ ಗಮನ ಹರಿಸಲು ಸ್ವತ್ಛ ಭಾರತ ಅಭಿಯಾನ ಇನ್ನಿಪ್ಪತ್ತು ವರ್ಷದಲ್ಲಿ ಒಳ್ಳೆಯ ಕೆಲ್ಸಗಳೊಂದಿಗೆ ಹೆಚ್ಚಿನ ಪುಷ್ಟಿ ಪಡೆದುಕೊಳ್ಳುವುದರ ಮೂಲಕ ಸರ್ಕಾರದ ಅತ್ಯುತ್ತಮ ಅಭಿಯಾನ ಅನ್ನಿಸಿತು . ನಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಿದರೆ ಬದಲಾವಣೆ ನಿಧಾನ ಗತಿಯಲ್ಲಾದರೂ ಸರಿ ಆಗೇ ಆಗುತ್ತದೆ ಅನ್ನಿಸುವುದಕ್ಕೆ ಶುರುವಾಗಿದೆ .
ಒಂದು ಕೋಟಿ ಜನರು ವಾಸಿಸುವ ಈ ಮಹಾನ್ ನಗರದಲ್ಲಿ ಮೆಟ್ರೋ ಸೌಲಭ್ಯವಂತು ಜನರಿಗೆ ವಿಪರೀತ ಸುಲಭ ಮಾಡಿಕೊಟ್ಟಿದೆ . ನನ್ನ ಮಗನಿಗೆ ಮೆಟ್ರೋ ಪ್ರಯಾಣ , ಬಸ್ ನಲ್ಲಿ ಹತ್ತಿ ಪ್ರಯಾಣ ಮಾಡೋದು ದೊಡ್ಡ ಮಗನಿಗೆ ೧ ತಿಂಗಳು ಜೊತೆ ಜೊತೆ ಹೋಗಿ ಹೇಳಿಕೊಟ್ಟೆ . ಇವತ್ತಿಗೆ ಅವನು ಒಗ್ಗಿ ಕೊಳ್ಳುತ್ತಿದ್ದಾನೆ . ಒಬ್ಬನೇ ಮೆಟ್ರೋ ಹತ್ತಿಕೊಂಡು ಬಸ್ ಹತ್ತಿಕೊಂಡು ಹೋಗುತ್ತಾನೆ . ಲೋಕಲ್ ಜನರ ಆಡು ಭಾಷೆಗಳು ಎಲ್ಲಾ ಅರ್ಥವಾಗುತ್ತೆ , ಅವರ ಜೊತೆ ಬೆರೆತು ಮಾತನಾಡುತ್ತಾನೆ . ಎರಡನೇಯವನಿಗಂತೂ ಕಾಲೋನಿ ಜನರೆಲ್ಲರೂ ಪರಿಚಯ . ಮಕ್ಕಳಿರುವ ಮನೆಗೆಲ್ಲ ಬೆಲ್ ಮಾಡಿ ಹೋಗುತ್ತಾನೆ .
ಎಲ್ಲಾ ರೀತಿಯ ಜನರು ಮೆಟ್ರೋ ಪ್ರಯಾಣ ಮಾಡುತ್ತಾರೆ , ಅವರನ್ನೆಲ್ಲ ನೋಡಿ ಅವರ ಜೀವನ ಶೈಲಿ ಎಲ್ಲವನ್ನು ನೋಡಿ ನಮ್ಮ ಜೀವನ ಎಷ್ಟು ಚೆನ್ನಾಗಿ ನಡೀತಿದೆ ಅನ್ನೋ ಮನೋಭಾವನೆ ಕೂಡ ಬಂದೇ ಬರುತ್ತದೆ . ಒಂದು ಕೋಟಿ ಕೇವಲ ಬೆಂಗಳೂರಿನಲ್ಲೇ , ಇಡೀ ಭಾರತದಲ್ಲಿ ೧೨೮ ಕೋಟಿ ಜನರಿಗೆ ಅವರ ಅವಶ್ಯಕತೆಗಳಿಗೆ ಸ್ಪಂದಿಸಿ ಭಾರತ ಇನ್ನೂ ಇಷ್ಟು ಚೆನ್ನಾಗಿ ನಡೆಯುತ್ತಿರುವುದೇ ಬಹಳ ದೊಡ್ಡ ಸೌಭಾಗ್ಯ ಅನ್ನಿಸುತ್ತದೆ . ಅದೂ ಅಲ್ಲದೆ ಜಗತ್ತಿನ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಬಹು ವೇಗದಲ್ಲಿ ಬೆಳೆಯುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಕೂಡ ಇದೆ . ಇದೆಲ್ಲವನ್ನು ಮಕ್ಕಳಿಗೆ ತಿಳಿಸಿಕೊಟ್ಟೆ . ಅವರು ದೇಶವನ್ನು ದೇಶದ ಜನರನ್ನು ನೋಡುವ ದೃಷ್ಟಿಕೋನ ಎರಡು ವರ್ಷಗಳ ಹಿಂದೆಗಿಂತಲೂ ಇವತ್ತಿಗೆ ತುಂಬಾ ಬದಲಾಗಿದೆ . ನಾವು ನಮ್ಮದು ಎನ್ನುವ ಭಾವ ಅವರಲ್ಲಿ ಬೆಳೆಯುತ್ತಿರುವುದು ನೋಡಿ ಅವರ ಮಾತಿನಿಂದ ತಿಳಿಯುತ್ತದೆ. ಭಾರತವನ್ನು ಅರಿಯಬೇಕಾದರೆ ಭಾರತದ ಹೊರಗಡೆ ಕುಳಿತು ಸಾಧ್ಯವಿಲ್ಲ . ಭಾರತದಲ್ಲಿ ಬದುಕಿದರೆ ಮಾತ್ರ ಸಾಧ್ಯ.

https://www.facebook.com/photo.php?fbid=10217986272066789&set=a.10208158870787899&type=3&theater

Monday, December 3, 2018

ಕನ್ನಡ ಸಿನಿಮಾ - ಪರಿಣಾಮ ಬೀರಿ ನಮ್ಮನ್ನಗಲಿದ ಮೇರು ನಟರು

ಕನ್ನಡ ಸಿನಿಮಾ - ಪರಿಣಾಮ ಬೀರಿ ನಮ್ಮನ್ನಗಲಿದ ಮೇರು ನಟರು 
------------------------------------------
ಆಗೊಂದು ಕಾಲ ಇತ್ತು ಮನೆಯವರೇ ಸಿನಿಮಾಕ್ಕೆ ಕರ್ಕೊಂಡು ಹೋಗುತ್ತಿದ್ರು . ಈಗ ಆ ರೀತಿ ಮಕ್ಕಳಿಗೆ ಕನ್ನಡ ಸಿನಿಮಾ ಅಂತ ಬಂದಿದ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ - ಕಾಸರಗೋಡು. ನಮ್ಮ ತಂದೆ ನಮ್ಮ ಅಜ್ಜಿಯವರನ್ನು ಮತ್ತು ನನ್ನನ್ನು ಭಕ್ತಿ ಪ್ರಧಾನ ಚಿತ್ರಗಳಾದ ಪೂಜಾಫಲ , ಭಕ್ತ ಸಿರಿಯಾಳ ಚಿತ್ರಕ್ಕೆ ಕರೆದುಕೊಂಡು ಹೋಗಿ ತೋರ್ಸಿದ್ದು ಜ್ಞಾಪಕ ಇದೆ . ಆಗ ೪-೫ ವರ್ಷ ಅನ್ಸುತ್ತೆ ,ಸಿನಿಮಾದಲ್ಲಿ ಈಶ್ವರನ ಮೇಲೆ ಹಾಡು ಬಿಟ್ಟರೆ ಬೇರೆ ಜ್ಞಾಪಕ ಇಲ್ಲ . ಇದಾದ ಮೇಲೆ ನಾನು ನೋಡಲು ಶುರು ಮಾಡಿದ್ದೇ ರಾಜಕುಮಾರ್ ಸಿನಿಮಾಗಳು. ನಾನು ದೊಡ್ಡ ಪರದೆ ಮೇಲೆ ನೋಡಿದ ಮೊಟ್ಟ ಮೊದಲ ರಾಜಕುಮಾರ್ ಚಿತ್ರ " ಹೊಸಬೆಳಕು ".

ಚಿಕ್ಕ ಹುಡುಗನಾಗಿದ್ದಾಗ ಭಕ್ತಿ ಪ್ರಧಾನ ಪೌರಾಣಿಕ ಚಿತ್ರಗಳಲ್ಲದೆ ಬೇರೆ ಸಿನಿಮಾ ನೋಡುವುದಕ್ಕೆ ಮನೆಯಲ್ಲಿ ಯಾರಿಗೂ ಅಷ್ಟು ಇಷ್ಟವಾಗುತ್ತಿರಲಿಲ್ಲ ಎಂದು ಗಮನಿಸುತ್ತಿದ್ದೆ . ಇನ್ನೆಲ್ಲಿ ನಾನು ಓದುವುದು ಬರೆಯುವುದನ್ನು ಬದಿಗೊತ್ತಿ ಸಿನಿಮಾ ಕಡೆ ಗಮನ ಹರಿಸ್ಬಿಡ್ತಾನೋ ಎಂದು ನಮ್ಮ ತಂದೆಗೆ ಅನ್ನಿಸ್ತಾ ಇತ್ತು. ಒಂದು ಸಾರಿ ಹೇಳಿದ್ರು ಕೂಡ . ಆದರೆ ನಾನು ಏಳೆಂಟು ವರ್ಷವಿರುವಾಗಲೇ ಭರವಸೆ ಕೊಟ್ಟಿದ್ದೆ ಹಾಗೆಲ್ಲ ಏನೂ ಆಗಲ್ಲ ಓದು ಬರಹ ನನ್ನ ಅಗ್ರ ಆದ್ಯತೆ ಅಣ್ಣ ಅಂದಿದ್ದೆ . ಟೀನ್ ವಯಸ್ಸಲ್ಲಿ ಹೀಗೆ ರಾಜಕುಮಾರ ಸಿನಿಮಾ ಮತ್ತು ವಿಷ್ಣುವರ್ಧನ್ ಚಿತ್ರ ಅಲ್ಲಲ್ಲಿ ಇಲ್ಲಿಲ್ಲಿ ನೋಡಲು ಮೆಲ್ಲ ಶುರುವಾಯ್ತು .

ಆರ್ ಕೆ ನಾರಾಯಣ್ ಆಧರಿತ ಕಥೆಗಳು ಟೀ ವಿ ಯಲ್ಲಿ ಮಾಲ್ಗುಡಿ ಡೇಸ್ ನೋಡುವುದಕ್ಕೆ ತುಂಬಾ ಇಷ್ಟವಾದ ದಿನಗಳವು. ಶಂಕರ್ ನಾಗ್ ಕಂಡರೆ ಬಲು ಇಷ್ಟವಾಗಿ ಹೋಗಿದ್ರು . ಅವರ ಮಾಲ್ಗುಡಿ ಡೇಸ್ ನೋಡಲು ಅದೆಷ್ಟು ಕಾತುರತೆ . ಎಲ್ಲಾ ಹೋಂ ವರ್ಕ್ ಮಾಡಿ ಊಟ ಮಾಡಿ ಪಕ್ಕದ ಮನೆಗೆ ಹೋಗಿ ಟೀ ವಿ ಹಾಕಿಸುತ್ತಿದ್ದೆ .ತಾ ನಾ ನ ನ ನ ನ ನ ನಾ ಎಂದು ಶುರುವಾದರೆ ಸಾಕು ಆ ಹಳ್ಳಿ ಬೀದಿಗಳು ಮಿಠಾಯಿ ಅಂಗಡಿ , ಅನಂತ್ ನಾಗ್ ಮತ್ತು ಮಂಜುನಾಥ್ ರವರ ಶ್ರೇಷ್ಠ ಅಭಿನಯ ಎಲ್ಲಾ ಕಣ್ಣಲ್ಲಿ ಕಟ್ಟಿದೆ . ಮೊನ್ನೆ ಮೊನ್ನೆ ಅನಂತ್ ಸರ್ ಅಮೆರಿಕಕ್ಕೆ ಬಂದಾಗಲೂ ಗಂಟೆ ಸುಮಾರು ಹೊತ್ತು ಮಾಲ್ಗುಡಿ ಡೇಸ್ ಮತ್ತು ಶಂಕರ್ ನಾಗ್ ವ್ಯಕ್ತಿತ್ವದ ಬಗ್ಗೆ ಮಾತುಗಳು ನಡೆಯಿತು ಶಂಕರ್ ಚೆನ್ನೈ ನಲ್ಲೇ ಎಲ್ಲಿಯ ತನಕ ಸಿನಿಮಾ ಕೆಲ್ಸಗಳಾಗಬೇಕು . ಬೆಂಗಳೂರಿಗೆ ಯಾಕೆ ಬರಬಾರದು ಎಂದು ಬೆಂಗಳೂರಿನಲ್ಲಿ ಸ್ಟುಡಿಯೋ ನಿರ್ಮಿಸಿದ ಮೊದಲ ಕಲಾವಿಧ ನಿರ್ದೇಶಕ . ಅಣ್ಣವ್ರನ್ನೇ ಆಗಿನ ಕಾಲದಲ್ಲಿ ನಿರ್ದೇಶನ ಮಾಡಿರುವ ಹೆಗ್ಗಳಿಕೆ ಶಂಕ್ರಣ್ಣರವರದು . ಬೆಂಗಳೂರು ಮುಂದುವರಿಬೇಕು ಎಂದು ಎಂಬತ್ತರ ದಶಕದಲ್ಲೇ ಕನಸುಗಳನ್ನು ಕಟ್ಟಿಕೊಂಡು ವಿದೇಶಗಳನ್ನು ಅಡ್ಡಾಡಿ ಮಾಸ್ ಟ್ರಾನ್ಸ್ಪೋರ್ಟ್ ಉತ್ತಮ ವಾಗಿರಬೇಕು ಎಂಬುದನ್ನು ಅರಿತು ಅಂಡರ್ಗ್ರೌಂಡ್ ಮೆಟ್ರೋ ಬಗ್ಗೆ ಅಂದಿನ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗ್ಗಡೆಯವರಿಗೆ ವರದಿ ಕೊಟ್ಟಿದ್ದ ವಿಷಯ ಕರ್ನಾಟಕಕ್ಕೇ ತಿಳಿದಿದೆ . ಶಂಕರ್ ನಾಗ್ ಕಾಲವಾದಾಗ ನನಗೆ ೧೫ ವರ್ಷ . ಇವತ್ತಿಗೂ ಸಾವಿರಾರು ಆಟೋಗಳ ಮೇಲೆ ಶಂಕ್ರಣ್ಣನ ಫೋಟೋ ನೋಡಿ ಸಂತೋಷವಾಗುತ್ತೆ. ಅಂತ ಆಟೋ ಮಾಲೀಕರ ಜೊತೆ ನಾನು ಅವರ ಬಗ್ಗೆ ಆಟೋ ಪ್ರಯಾಣ ಮಾಡುವಾಗ ಮಾತಾಡೋದು ಅಭ್ಯಾಸ.

ಇನ್ನು ಅಣ್ಣಾವ್ರು ಕಾಲವಾದ ವಿಷಯ ತಿಳ್ಸ್ತೀನಿ , ೨೦೦೬ ನೇ ಇಸವಿ . ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತಿದ್ದೆ . ವಿಷಯ ಹೀಗೆ ಅಂತ ತಿಳೀತು . ವಿಪರೀತ ದುಃಖ ಹಲವಾರು ದಿವಸಗಳು ನನ್ನೊಳಗೆ ಸೂತಕದ ಛಾಯೆ ಆವರಿಸಿಕೊಂಡಿತ್ತು. ಅವರ ಚಿತ್ರಗಳನ್ನು ಒಮ್ಮೆ ನೋಡಿದರೆ ಸಾಕು ನಮ್ಮವರೇ ಅನ್ನೋ ಅವನೀಯ ಸಂಭಂದ ಹುಟ್ಟಿಕೊಳ್ಳುತಿತ್ತು. ಬೆಂಗಳೂರಿನಲ್ಲಿ ಸ್ವಲ್ಪ ಗಲಾಟೆ ಕಲ್ಲು ತೂರಾಟ ನಡೆದುಹೋಯ್ತು. ಒಳ್ಳೆಯ ಕೆಲಸ ಮಾಡಿದ್ದು ಅಂದ್ರೆ ಶಾಲಾ ಕಾಲೇಜು ಸೇರಿದಂತೆ ಪ್ರೈವೇಟ್ ಕಂಪನೀಸ್ ಗೆ ರಜೆ ಘೋಷಿಸಿದ್ದರು. ಮನೆಯಲ್ಲೇ ಕುಳಿತು ರಾಜಣ್ಣನ ಪಾರ್ಥಿವ ಶರೀರ ನೋಡಿ ದುಃಖದಿಂದಲೇ ಆ ದಿನಗಳು ಕಳೆದಿದ್ದಾಯಿತು. ಪೌರಾಣಿಕ ಭಕ್ತಿ ಪ್ರಧಾನ ಚಿತ್ರಗಳನ್ನು ಭಾರತ ದೇಶದಲ್ಲೇ ರಾಜಕುಮಾರ ರೀತಿ ನಟಿಸುತ್ತಿದ್ದ ಇನ್ನೊಬ್ಬ ನಟ ಇಲ್ಲ .ಅಷ್ಟು ಮನಸ್ಸಿಗೆ ಛಾಪು ಒಪ್ಪಿದ ಹಾಗೆ ಉಳಿದಿರೋದೇ ಅಣ್ಣಾವ್ರ ಚಿತ್ರಗಳು.

ಪುಟ್ಟಣ್ಣರವರು ಹೆಕ್ಕಿ ತೆಗೆದ ಅತ್ಯುತ್ತಮ ಕಲಾವಿಧರು ವಿಷ್ಣುವರ್ಧನ್ ಮತ್ತು ಅಂಬರೀಷ್ರವರು. ಅಣ್ಣಾವ್ರ ಜೊತೆ ಜೊತೆಯಲ್ಲೇ ವಿಷ್ಣುವರ್ಧನ್ ಸಿನಿಮಾ ರಂಗದಲ್ಲಿ ಮಾಡಿದ ಸಾಧನೆ ಮರೆತರೆ ನಾವು ಕನ್ನಡಿಗರೇ ಅಲ್ಲ . ಆ ಮಟ್ಟಕ್ಕೆ ಸಾಧನೆ ಮಾಡಿದ ಕಲಾವಿಧ ವಿಷ್ಣುವರ್ಧನ್.
ಮೊನ್ನೆ ಶನಿವಾರ ರಾತ್ರಿ ಅಂಬರೀಷ್ ಕಾಲವಾದಾಗಲೂ ವಿಪರೀತ ದುಃಖವಾಯಿತು. ಮೈಸೂರಿನಲ್ಲಿ ನಾನು ಆರನೇ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಅವರ "ಚಕ್ರವ್ಯೂಹ" ಸಿನಿಮಾ ತೆರೆ ಕಂಡಿತ್ತು . ನಮ್ಮ ನೆಂಟರು ಸಿನಿಮಾಕ್ಕೆ ಕರ್ಕೊಂಡು ಹೋಗುತ್ತಿದ್ರು. ಶಾಲೆಯಲ್ಲಿ ವಾರಕ್ಕೆ ಒಮ್ಮೆ ಕಡೆ ಪಿರಿಯಡ್ ಅಲ್ಲಿ ಪಾಠ ಮಾಡಲು ಬೇಜಾರಾದಾಗ ಟೀಚರ್ ಹಾಡು ಹಾಡಿಸುತ್ತಿದ್ದರು. ಒಂದು ದಿನ ಹೀಗೆ ಹಾಡು ಹಾಡೋ ಸುಬ್ರಮಣ್ಯ ಎಂದು ನಮ್ಮ ಟೀಚರ್ ಕರೆದರು. ಧೈರ್ಯವಾಗಿ ಹೋಗಿ ನಿಂತು ಚಕ್ರವ್ಯೂಹ ಇದು ಚಕ್ರವ್ಯೂಹ ಹಣದ ಮೋಹ ಅಧಿಕಾರದ ದಾಹ ಹಾಡು ಹಾಡಿದೆ . ನಮ್ಮ ಟೀಚರ್ ಕೂಡ ಸಂತೋಷ ಪಡುತ್ತಿದಿದ್ದು ಅವರ ಕಣ್ಣಲ್ಲಿ ಗಮನಿಸುತ್ತಿದ್ದೆ. ಅಲ್ಲಿಂದ ಶುರುವಾದ ಪ್ರೀತಿ ಮೊನ್ನೆ ಮೊನ್ನೆ ವಸತಿ ಸಚಿವರಾಗಿ ಸರ್ಕಾರದಿಂದ ಹೊರಬರುವವರೆಗೂ ಅವರು ಮಾಡಿದ ಕೆಲಸಗಳು ಎಷ್ಟೊಂದು ಜನರಿಗೆ ಸಹಾಯ ಮಾಡುತ್ತಿದ್ದ ರೀತಿ ಎಲ್ಲವೂ ಗಮನಿಸಿದ್ದೆ. ಅವರಿಗೇನಾದರೂ ನಮ್ಮ ಮನೆಯವರಿಗೆ ಏನೋ ಆದಂತೆ ಅನಿಸುವುದು ಸಹಜ. ಮಂಡ್ಯ ಜನರು ಎಷ್ಟು ಪ್ರೀತಿ ಇಟ್ಟುಕೊಂಡಿದ್ರು ಎಂದು ನಾನು ಮಂಡ್ಯದಲ್ಲಿ ಇಂಜಿನಿಯರಿಂಗ್ ಮಾಡುವ ಸಮಯದಲ್ಲಿ ಕಂಡಿದ್ದೇನೆ . ಮಂಡ್ಯ ಕ್ಷೇತ್ರ ಬಿಟ್ಟು ಎಲ್ಲೂ ಚುನಾವಣೆಗೆ ಅವರು ನಿಲ್ಲಲಿಲ್ಲ . ಕರ್ನಾಟಕದಲ್ಲಿ ಎಲ್ಲಿ ನಿಂತು ಗೆದ್ದು ಬರುವ ಪ್ರೀತಿ ವಿಶ್ವಾಸ ಜನರಿಂದ ಪಡೆದುಕೊಂಡಿದ್ದ ವ್ಯಕ್ತಿ.
ಇಡೀ ದಿನ ಟೀ ವಿ ಮುಂದೆ ಕುಳಿತು ದುಃಖಿಸುತ್ತಿದ್ದೆ. ನಾನು ಅವರ ಹಾಡು ಹಾಡುತ್ತಿದ್ದ ಬಗ್ಗೆ ಎಲ್ಲಾ ಮಕ್ಕಳಿಗೆ ತಿಳಿಸಿಕೊಟ್ಟೆ. ಜನರ ಪ್ರೀತಿ ಹೇಗೆ ಸಂಪಾದನೆ ಮಾಡಿದರು ಅನ್ನುವ ವಿಷಯ ಮಕ್ಕಳಿಗೆ ತಿಳಿಸಿಕೊಟ್ಟೆ . ಎಷ್ಟು ಜನರ ಮನಸ್ಸಿನಲ್ಲಿ ಪ್ರೀತಿ ಸಂಪಾದಿಸಿ ಬೇರೂರಿದ್ದರು ಅನ್ನುವ ವಿಷಯ ಮರಣ ಬಂದಾಗಲೇ ತಿಳಿಯುವುದು .

ಸರ್ಕಾರದಲ್ಲಿದ್ದಾಗ ಅಂಬರೀಷ್ ರವರು ವಿಷ್ಣು ಸ್ಮಾರಕ ವಿಷಯವಾಗಿ ಹಲವಾರು ಮೀಟಿಂಗ್ ಅಲ್ಲಿ ಭಾಗವಸಿದ್ದರು .ಬಹಿರಂಗವಾಗಿ ವಿಷ್ಣುಗೆ ಹೀಗೆ ಕಷ್ಟವೇ ಆಯಿತು ಅವನ ಜೀವನ ಇದ್ದಾಗ್ಲೂ ಕಷ್ಟ ಪಟ್ಟ ಹೋದಾದ್ಮೇಲೂ ಇದೇ ಕಥೆ ಅನ್ನೋ ನೋವಿನ ಮಾತು ಜನತೆಗೆ ತಿಳಿಸಿದ್ದರು. ವಿಷ್ಣುವರ್ಧನ್ ಸ್ಮಾರಕ ಕೆಲ್ಸದಲ್ಲಿ ೯ ವರ್ಷಗಳಿಂದ ಸರ್ಕಾರಗಳು ಎಡವಿರುವುದು ಎದ್ದು ಕಾಣುತ್ತಿದೆ . ಇದು ಒಬ್ಬ ನಾಯಕ ನಟರ ಅಭಿಮಾನಿಗಳ ಪ್ರಶ್ನೆ ಅಲ್ಲ , ಇದು ಕರ್ನಾಟಕದ ಗೌರವದ ಪ್ರಶ್ನೆ . ವಿಷ್ಣುವರ್ಧನ್ರವರ ಸ್ಮಾರಕದ ವಿಚಾರವಾಗಿ ಭಾರತಿಯವರು ಏನು ಇಷ್ಟಪಡುತ್ತಾರೋ ಹಾಗೆ ನಡೆಸಿದರೆ ಸರ್ಕಾರಕ್ಕೆ ಹೆಚ್ಚಿನ ಗೌರವ ಸಲ್ಲುವುದು .ಕರ್ನಾಟಕಕ್ಕೆ ಗೊತ್ತು ಅವರ ಸ್ನೇಹ ಎಷ್ಟು ಆತ್ಮೀಯವಾಗಿತ್ತು ಎಂದು. ಅಂಬರೀಷ್ ಬದುಕಿದ್ದಾಗ ಕೂಡ ಭಾರತಿಯವರು ಏನು ಬಯಸುತ್ತಾರೋ ಆ ರೀತಿಯೇ ಸ್ಮಾರಕ ಕೆಲಸ ನಡೆಯಬೇಕು ಎಂದು ತಿಳಿಸಿದ್ದರು . ಕಲೆಗೆ ಸಂಭಂದಪಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ನಟರೆಲ್ಲರ ಹೆಸರಲ್ಲಿ ನಡೆಯಬೇಕು, ಅಕಾಡೆಮಿ ಸ್ಪಾಪಿಸಿ ಅದರಡಿಯಲ್ಲಿ ಹಲವಾರು ಕೆಲಸ ಶುರುವಾಗಬೇಕು. ಕುಮಾರಣ್ಣ ಚಿತ್ರಗಳ ನಿರ್ಮಾಪಕರು ಮತ್ತು ಹಂಚಿಕೆದಾರರು ಹೌದು . ಈ ಕೆಲಸ ಮಾಡಲು ಸಾಧ್ಯವಿರುವ ಮುಖ್ಯಮಂತ್ರಿಗಳವರು. ದಯವಿಟ್ಟು ಈ ಕೆಲಸ ಬೇಗ ಮಾಡಿಕೊಡಿ. ಈಗಾಗಲೇ ೯ ವರ್ಷ ತಡವಾಗಿರುವುದು ಗಮನಿಸಬೇಕಾದ ವಿಷಯ. ಅಭಿನಂದಸಲೇಬೇಕಾದ ವಿಷಯ ಏನೆಂದರೆ ಅಂಬರೀಷ್ ರವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ತುಂಬಾ ಕಾಳಜಿ ವಹಿಸಿ ಸುಸೂತ್ರವಾಗಿ ನೆರವೇರಿಸಿ ಜನಗಳ ಹೃದಯದಲ್ಲಿ ಮಾನ್ಯ ಮುಖ್ಯಮಂತ್ರಿಗಳು ವಿಶೇಷವಾದ ಸ್ಥಾನಮಾನವನ್ನು ಗಳಿಸಿರುತ್ತಾರೆ . ಅವರಿಗೆ ತುಂಬು ಹೃದಯದ ಅಭಿನಂದನೆಗಳು . ಅಂಬರೀಷ್ ರವರು ಇದ್ದಾಗಲೇ ವಿಷ್ಣು ಸ್ಮಾರಕ ಆಗಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು. ಹಳೆಯದ್ದು ಏನೇ ಕಾರಣವಿರಲಿ ಅದನ್ನು ಎಲ್ಲರೂ ಮರೆತರೆ ಒಳ್ಳೆಯದು. ಈ ಸ್ಮಾರಕ ಕೆಲಸಕ್ಕೆ ತುಂಬಾ ಸರಿಯಾದ ಸಮಯ ಒದಗಿ ಬಂದಿದೆ ಎಂದು ಅನಿಸುತ್ತಿದೆ. ಸುದೀಪ್ರವರು ಸ್ಮಾರಕ ಕಾರ್ಯ ನಿರ್ವಹಿಸುವ ತಂಡದ ಅಧ್ಯಕ್ಷತೆ ವಹಿಸುರುವುದು ಸ್ವಾಗತಾರ್ಹ .