Sunday, January 28, 2018

ರವಿಯ ಕಿರಣ

ರವಿಯ ಕಿರಣಗಳ ಸ್ಪರ್ಶದಿಂದಲ್ಲವೇ 
ನೆಚ್ಚಗಾಗುವುದು ಸಮಸ್ತ ಜೀವಿತವು

ಸ್ವ ಸ್ವರೂಪ ಪರಚೇತನ ಬೆಳಕಿನಾಗಸದಿ  
ಶಕ್ತಿ ಸಂತಸ ಉಕ್ಕಿ ಚಿಮ್ಮುವುದು ಮನದಿ  

ಸಹಸ್ರ ವರುಷ ಕಳೆದರೇನು ಬೆಳಕಿಗೆ 
ತೆನೆಗೆ ಸ್ಪರ್ಶ ಬೇಡವೇ ತಂಡುಲ ಪ್ರಾಪ್ತಿಗೆ 

ಜಗದಲ್ಲೊಬ್ಬ ರವಿ ಸಾಕು ಸಕಲ ಜೀವರಾಶಿಗೆ 
ಒಡಲರಮನೆಗೆ ಬೇಕಿರುವ ಚೇತನವಿದು ಮಿಗೆ !

-ಸುಬ್ಬು ಪದ್ಮನಾಭ್

No comments:

Post a Comment