Thursday, January 12, 2017

ಸ್ಪರ್ಶ

ರವಿಯ ಕಿರಣಗಳ ಸ್ಪರ್ಶದಿಂದಲ್ಲವೇ 
ನೆಚ್ಚಗಾಗುವುದು ಸಮಸ್ತ ಜೀವಿತವು

ಸ್ವ ಸ್ವರೂಪ ಪರಚೇತನ ಬೆಳಕಿನಾಗಸದಿ 
ಶಕ್ತಿ ಸಂತಸ ಉಕ್ಕಿ ಚಿಮ್ಮುವುದು ಮನದಿ 

ಸಹಸ್ರ ವರುಷ ಕಳೆದರೇನು ಬೆಳಕಿಗೆ
ತೆನೆಗೆ ಸ್ಪರ್ಶ ಬೇಡವೇ ತಂಡುಲ ಪ್ರಾಪ್ತಿಗೆ

ಜಗದಲ್ಲೊಬ್ಬ ರವಿ ಸಾಕು ಸಕಲ ಜೀವರಾಶಿಗೆ
ಒಡಲರಮನೆಗೆ ಬೇಕಿರುವ ಚೇತನವಿದು ಮಿಗೆ !

-ಸುಬ್ಬು ಪದ್ಮನಾಭ್

No comments:

Post a Comment