Wednesday, July 4, 2018

ಸನಿಹ ನೀನಿರೆ


ಆಕಾಶದ ನೀರವ ಮೌನ
ಒಡಲ ಗೂಡಲಿ ನೆಲೆಸದೆ 
ಬೀಸುವ ಗಾಳಿಯ ಸುನಾದ
ಮನವ ಅರಳಿಸದೆ ಇರುವುದೆ 
ಅಲೆ ಅಪ್ಪಳಿಸುವ ಮಾಧುರ್ಯ
ತನು ಹೂವಾಗಿಸದೆ ಬಿಡುವುದೆ 
ಚರಾ ಚರದಲಿ ಸಂಭವಿಸಿಹೆ
ಚೇತನದ ಹಿಂದಿನ ತತ್ವ ತಿಳಿಯದೆ 
-ಸುಬ್ಬು ಪದ್ಮನಾಭ

No comments:

Post a Comment