ಅಲ್ಲೆಲ್ಲೋ ಸ್ವರ್ಗದಲ್ಲಿ ಎಲ್ಲಾ ದೇವರುಗಳು ಕೂತಿರೋ ಹಾಗೆ ಜನರು ಅಂದರೆ ನಾವುಗಳು ಆ ಪರಬ್ರಹ್ಮ ಸ್ವರೂಪನಿಗೆ ಆಕಾರ ಕೊಟ್ಟಿದ್ದೀವಿ ( ನಂಬಿಕೆಗೆ ಸುಲಭವಾಗಲಿ ಎಂದು ). ನಿಮಗೆ ತಿಳಿದಿರುವ ಹಾಗೆ ವೇದಾಂತ ಅಂದರೆ ಉಪನಿಷದ್ ಹೇಳಿರೋ ಸಾರ. ವೇದಾಂತದ ಪ್ರಕಾರ ನಿರ್ಗುಣ ನಿರಾಕಾರ ಪರಮಾತ್ಮನಿಗೆ ಹೆಸರಿಲ್ಲ ಆಕಾರ ಇಲ್ಲ. ನಮ್ಮೊಳಗೇ ಆತ್ಮವನ್ನು ಬೆಳಗುತ್ತಿರುವ ದಿವ್ಯವಸ್ತು ಅದೇ ಆಗಿದೆ . ಶರೀರ ಇಂದ್ರಿಯಗಳು ಜಡ , ಅದು ಪ್ರಕೃತಿ . ಯಾವಾಗಲೂ ಬದಲಾಗುವ ಮತ್ತು ನಾಶವಾಗುವ ವಸ್ತು . ಚಿತ್ತದಲ್ಲಿರುವ ಪರಬ್ರಹ್ಮ ಅನುಭವವನ್ನು ನಿತ್ಯ ಧ್ಯಾನ ಮಾಡಿ ಸೂಕ್ಷ್ಮ ಶರೀರದಿಂದ ಅನುಭವ ಪಡೆದುಕೊಳ್ಳಬಹುದು. ನಮ್ಮ ಸ್ತೂಲ ಶರೀರ(ದೇಹ (ಪ್ರಕೃತಿ)), ಬುದ್ದಿ , ಅಹಂಕಾರಕ್ಕೆ ಎಟುಕದ ಚಿಲುಮೆ . ದೇವ ಮಂದಿರ ಭಜನೆ ಇದೆಲ್ಲವೂ ಭಕ್ತಿಯ ಮಾರ್ಗ ಮತ್ತು ಇದರ ಅಗತ್ಯವೂ ತುಂಬಾ ಇದೆ. ಭಕ್ತಿ ಮಾರ್ಗ , ಕರ್ಮ ಮಾರ್ಗ, ಜ್ಞಾನ ಮಾರ್ಗ ಬೇರೆ ಬೇರೆ ಮಾರ್ಗಗಳು . ಇದರ ಬಗ್ಗೆ ಹಲವಾರು ಸಿದ್ದಂತಾಗಳು ಇದೆ , ಅದ್ವೈತ ಸಿದ್ದಾಂತದ ಪ್ರಕಾರ ಆತ್ಮವಸ್ತು ಶೂನ್ಯ ಅಲ್ಲ ಅದೇ ನಮ್ಮೊಳಗೆ ಮತ್ತು ಹೊರಗೆ ನಿತ್ಯ ನಿರಂತರ ಬೆಳಗುತ್ತಿರುವ ಜ್ಯೋತಿ . ( ಉದಾಹರಣೆ : ಬುದ್ದಿಯು ತನ್ನ ಬುದ್ದಿಯನ್ನು ವಿಚಾರ ಮಾಡುವುದಕ್ಕೆ ಬೇಕಾಗಿರುವ ಆತ್ಮವಸ್ತು ).ಸಾಮಾನ್ಯವಾಗಿ ಹೇಳುವುದಾದರೆ ಧ್ಯಾನ ಮಾಡದೆ ಚಿತ್ತ ವಿಚಾರಗಳನ್ನು ಶ್ರವಣ ಮತ್ತು ಮನನ ಮಾಡದೆ ಅವನಿರುವಿಕೆಯ ಅನುಭವ ಸಾಧ್ಯವಿಲ್ಲ. ಮನಸ್ಸನ್ನು ಬೆಳಗುತ್ತಿರುವ ಆತ್ಮವಸ್ತುವನ್ನು ಅನುಭವಿಸಬೇಕಾದರೆ ದಿನನಿತ್ಯ ಧ್ಯಾನ ಮಾಡುತ್ತಾ ಹೋದರೆ ಆ ದಿವ್ಯ ಪರಬ್ರಹ್ಮ ಸ್ವರೂಪದ ಅನುಭವವಾಗುತ್ತದೆ ( ಧ್ಯಾನ ಮಾಡದೆ ಕೆಲವರಿಗೆ ಆ ಸಿದ್ದಿ ಸಿಗಬಹುದು ,ಅದೇ ಮಹಶ್ರೀ ರಮಣರು ತಮ್ಮ ಹದಿನಾರನೇ ವಯಸ್ಸಿಗೆ ಕಂಡುಕೊಂಡ ಚಾರುರ್ತ್ಯಾವಸ್ಥೆ ಕೂಡ ). ಸ್ವಾಮಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಈ ಚತುರ್ತ್ಯಾವಸ್ಥೆಯನ್ನು ತಲುಪಿ ಇರುವುದೆಲ್ಲವೂ ಅವನೊಬ್ಬನೇ . ಕಣ್ಣಿಗೆ ಕಾಣುವ ಜಗತ್ತು ಬರಿ ಅವನ ಸೃಷ್ಟಿಯ ಮಾಯೆ ಮಾತ್ರ ಎಂದರು. ಜಗತ್ತೆಲ್ಲ ಮಲಗಿರಲು ಸಿದ್ದಾರ್ಥ ಬುದ್ಧನಾಗುವುದಕ್ಕೂ ಈ ನಾಲ್ಕನೇ ಅವಸ್ಥೆಯನ್ನು ತಲುಪುವ ಅವರವರ ಸಾಧನೆ ಕಾರಣವಾಯಿತು. ಸಾಮಾನ್ಯರಿಗೆ ಮೂರು ಅವಸ್ಥೆಗಳು ಲಭ್ಯ ( ಎಚ್ಚರ ಕನಸ್ಸು ನಿದ್ದೆ ). ಅವನು ನಿತ್ಯ ನಿರಂತರ ಎಲ್ಲೆಲ್ಲೂ ಬೆಳಗುವ ( ನಮ್ಮೊಳಗೆ ಮತ್ತು ಹೊರಗೆ ) ಅವಿನಾಶಿ ನಿರ್ಗುಣ ನಿರಾಕಾರ ಸಾಕ್ಷಿ . ವೇದಾಂತದ ಪ್ರಕಾರ ಚತುರ್ತ್ಯಾವಸ್ಥೆಯನ್ನು ನಮ್ಮದಾಗಿಸಿಕೊಳ್ಳಲು ಯಾವುದಾದರೂ ಒಂದು ನಂಬಿರುವ ಶಕ್ತಿಯನ್ನು ಆಧಾರವಾಗಿಟ್ಟುಕೊಂಡು ಧ್ಯಾನ ಮಾಡಿದರೆ ಆತ್ಮದರ್ಶನ ಪ್ರಾಪ್ತಿ . ವೇದಾಂತದ ಪ್ರಕಾರ ಇದನ್ನ ಯಾರು ಬೇಕಾದರೂ ಅನುಭವಿಸಬಹುದು ಆದರೆ ನಿರಂತರ ಧ್ಯಾನದಿಂದ ಸಾಧ್ಯ .ಅದಕ್ಕೆಂದೇ ನಮ್ಮ ಹಿರಿಯರು ಸ್ವಲ್ಪ ಪೂಜೆ ಮಾಡು , ಧ್ಯಾನ ಮಾಡು , ಸಂಧ್ಯಾವಂದನೆ ಮಾಡಿ ೨೦ ನಿಮಿಷ ೧೦೮ ಗಾಯತ್ರಿ ಜಪ ಮಾಡು ಹೀಗೆಲ್ಲ ಹೇಳುತ್ತಿದ್ದರು . ಅವರು ಏನಿಕ್ಕೆ ಹೇಳುತ್ತಿದ್ದರು ಎಂದು ಅವರಿಗೆ ತಿಳಿಯದಿರಬಹುದು ಆದರೆ ಇದೆಲ್ಲವೂ ಒಂದು ಜಾಗದಲ್ಲಿ ಕೂತು ಕಣ್ಣು ಮುಚ್ಚಿ ಧ್ಯಾನ ಮಾಡುವ ಕಾರ್ಯ ಸ್ವಲ್ಪ ಅಭ್ಯಾಸ ಆಗಲಿ ಎಂದು . ಚಿಕ್ಕಂದಿನಿಂದ ಸ್ವಲ್ಪ ಸ್ವಲ್ಪ ಅಭ್ಯಾಸ ಮಾಡಿ ಬಂದರೆ ಏನೂ ಬೇಕಾದರೂ ಸಾಧಿಸಬಹುದು ಪರಬ್ರಹ್ಮನ ಇರುವಿಕೆಯೂ ಕೂಡ . ನಾವು ಒಬ್ಬರಿಗೊಬ್ಬರು ಕೈ ಮುಗಿದು ನಮಸ್ಕಾರ ಮಾಡುವ ಅರ್ಥವೂ ಕೂಡ ಇದೇ ಕಾರಣಕ್ಕೆ ನಿನ್ನೊಳಗಿರುವ ಆತ್ಮವನ್ನು ಬೆಳಗುತ್ತಿರುವವನು ನಾನು ನಾನೆಂಬ ಅಸ್ತಿತ್ವವನ್ನು ಬೆಳಗುವವನೂ ಒಬ್ಬನೇ ಆಗಿದ್ದಾನೆ , ಅದಕ್ಕೆ ನಿಮಗೆ ನಮಸ್ಕಾರ .
ಸನ್ಯಾಸಿಯಾಗದೆ ಸಂಸಾರದಲ್ಲಿ ಇದ್ದು ಸಾಧನೆ ಮಾಡಬಹುದು ಅಂತಾರೆ ಹಿರಿಯರು , ಪ್ರಯತ್ನಿಸೋಣ
ಸನ್ಯಾಸಿಯಾಗದೆ ಸಂಸಾರದಲ್ಲಿ ಇದ್ದು ಸಾಧನೆ ಮಾಡಬಹುದು ಅಂತಾರೆ ಹಿರಿಯರು , ಪ್ರಯತ್ನಿಸೋಣ
No comments:
Post a Comment