Monday, July 4, 2016

ಮುತ್ತು-ರತ್ನಗಳು


ಓ ಮನವೇ ,
ಜೀವನದ ಪರೀಕ್ಷೆಗಳ ಎದುರಿಸದೆ
ಬದುಕಿನ ಪಾಠ ಕಲಿಯಲು ಸಾಧ್ಯವೆ
ನನ್ನ ಅಸಹನೆಗೆ ಪರರನ್ನೂ ನಿಂದಿಸಲಾರೆ 
ಕಷ್ಟ-ಕಾರ್ಪಣ್ಯಗಳು ಎರಗಿದರೆ ನಲುಗಲಾರೆ 
ಕ್ಲಿಷ್ಟ ಅನುಭವಕ್ಕೊಳಪಡದೆ ಪಕ್ವವಾಗುವೆನೇ 
ನ್ಯೂನತೆಗಳ ತಿದ್ದುವ ಕಲಿಕೆ ಬೇಡ ಎನ್ನುವೆನೇ 
ಕಲಿತ ಪಾಠವೇ ಗಳಿಸಿದ ಮುತ್ತು-ರತ್ನಗಳು
ಹಂಚಿಕೊಳ್ಳಲೆಂದೂ ಮರೆಯದಿರು !!
-ಸುಬ್ಬು ಪದ್ಮನಾಭ
4th July 2016

No comments:

Post a Comment