Monday, July 6, 2020

ಗುರು ಪೂರ್ಣಿಮೆ - July 5 2020

ಗುರು ಪೂರ್ಣಿಮೆ - ಕತ್ತಲೆಯಿಂದ ಬೆಳೆಕಿನಡೆಗೆ ಕರೆದೊಯ್ಯುವವರನ್ನು ಗುರು ಎಂದು ಕರೆಯುತ್ತಾರೆ . ನಮ್ಮ ಮೂರು ಜನ ಆಚಾರ್ಯರು ವೈದಿಕ ಮಾರ್ಗ ಉಳಿಸುವುದಕ್ಕೆಂದೇ ಎಂಟನೇ ಶತಮಾನದಿಂದಲೂ ಕರ್ಣಾಟಕವನ್ನು ಆರಿಸಿಕೊಂಡಿರುವುದು ನಿಮಗೆ ತಿಳಿದ ವಿಷಯ. ಇವತ್ತಿಗೂ ವೈದಿಕರು ಎಂದರೆ ವೇದಗಳನ್ನು ಸಂರಕ್ಷಿಸುವವರು ಎಂದು ಅವರಿಗೆ ಸಮಾಜದಲ್ಲಿ ಗೌರವ ಏಕೆಂದರೆ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಸಮಾಜದ ಐಕ್ಯತೆಗೆ ಶ್ರಮಿಸುವವರು ಎಂದು . ಒಬ್ಬ ಭಾರತೀಯನಾಗಿ ಅದರಲ್ಲೂ ವೈದಿಕನಾಗಿ ಅಮೇರಿಕಾದಲ್ಲಿ ನೆಲೆಸಿದರೆ ತಮ್ಮ ತಮ್ಮ ಮಾತೃಭಾಷೆಯಿಂದ ಭಾರತೀಯ ಸಂಸ್ಕೃತಿಯನ್ನು  ಉಳಿಸಿಕೊಳ್ಳುವುದಕ್ಕೆ ನಿತ್ಯವೂ ಶ್ರಮಿಸುತ್ತಾರೆ ಮತ್ತು ಅವ್ಯಕ್ತವಾಗಿರುವ ಪರಮಾತ್ಮನಿಗೆ ನಿತ್ಯವೂ ಪೂಜೆ ಪುನಸ್ಕಾರಗಳನ್ನು ಮಾಡಿ ನಮ್ಮ ಪುರಾತನ ಸಂಸ್ಕೃತಿಯು ಅಮೇರಿಕಾದಲ್ಲಿ ಉಳಿಯುವುದಕ್ಕೆ ಸಹಾಯ ಮಾಡುತ್ತಿರುವ ಪ್ರತಿಯೊಬ್ಬರಿಗೂ ಅರಳಿಕಟ್ಟೆ ಅಭಾರಿಯಾಗಿರುತ್ತದೆ. ಹೀಗೆ ವೇದಗಳನ್ನು ಸಂರಕ್ಷಿಸುತ್ತಿರುವ ಬೇ ಏರಿಯಾದ ಕನ್ನಡದವರೇ ಆದ ಒಟ್ಟು ೨೦ ಪುರೋಹಿತರಿಗೆ ಅರಳಿಕಟ್ಟೆ ಫೇಸ್ಬುಕ್ ಗ್ರೂಪ್ನ ವತಿಯಿಂದ ಇಂದು ಗುರು ದಕ್ಷಿಣೆ ನೀಡಿರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನಮ್ಮ ಸನಾತನ ಧರ್ಮ ಕೇಂದ್ರದ ಪುರೋಹಿತರಾದ ಕುಮಾರಸ್ವಾಮಿ ಜೋಶಿಯವರು ತಮ್ಮ ಅಮೃತ ಹಸ್ತದಿಂದ ಇಪ್ಪತ್ತು ಜನ ಪುರೋಹಿತರನ್ನು ಕೂರಿಸಿ ಮಂತ್ರಗಳನ್ನು ಹೇಳಿಕೊಂಡು ಗುರು ದಕ್ಷಿಣೆ ನೀಡಿರುವುದನ್ನು ತಿಳಿಸಲು ತುಂಬಾ ಸಂತೋಷವಾಗುತ್ತಿದೆ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತಿನಂತೆ ನಾವು ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಆದ್ದರಿಂದ ತಮ್ಮ ತಮ್ಮ ಕೈಲಾದ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಅರಳಿಕಟ್ಟೆ ಅಭಾರಿಯಾಗಿರುತ್ತದೆ . ಈ ಮಹತ್ತರ ಕಾರ್ಯ ಮಾಡುವುದಕ್ಕೆ ಸಹಕರಿಸಿದ ಸಹೃದಯ ಕನ್ನಡಿಗರಿಗೆಲ್ಲರಿಗೂ ದೇವರ ಕೃಪೆ ಮತ್ತು ಗುರುಗಳ ಆಶೀರ್ವಾದ ಇರುತ್ತದೆ ಎಂದು ಹೇಳಲು ಇಚ್ಛಿಸುತ್ತೇನೆ .🙏 -  ಸುಬ್ರಹ್ಮಣ್ಯ ಪದ್ಮನಾಭ





No comments:

Post a Comment