Sunday, November 27, 2022

Notes Nov 26 2022 - Adishankaracharya group 5

 ಈಶ್ವರ ಮತ್ತು ವಿಷ್ಣು ಚರ್ಚೆ ಮಾಡಿ ೪ ಮಾರ್ಗಗಳನ್ನು ಭೂಲೋಕದ ಸಮಸ್ಯೆಗೆ ಪರಿಹಾರವಾಗಿ ಕೊಟ್ಟರು 

ಕರ್ಮ ಮಾರ್ಗ - ಸುಬ್ರಹ್ಮಣ್ಯ ಅಧಿಪತಿ 

ಧ್ಯಾನ ಮಾರ್ಗ - ಪತಾಂಜಲಿ ಮಹರ್ಷಿ 

ಸಂಕೀರ್ತನ ಅಥವಾ ಉಪಾಸನಾ ಮಾರ್ಗ 

ಜ್ಞಾನ ಮಾರ್ಗ - ಆದಿಶಂಕರಾಚಾರ್ಯರು 

 

ಯೋಚನೆ ಬೇಡ 

ಆಲೋಚನೆ ಮಾಡಿ 


ಒಬ್ಬನೇ ಮಾಡುವುದು ಯೋಚನೆ 

ಜೊತೆಗೆ ಮಾಡುವುದು ಆಲೋಚನೆ 


ಚರ್ಚೆ ಮಾಡಿದರೆ ಪರಿಹಾರ 

ವಾದ ವಿವಾದ ಮಾಡಿದರೆ ಪರಿಹಾರ ಸಿಗುವುದಿಲ್ಲ 


ಕಲಿಯುವುದು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ 

ಕಲಿತಿರುವುದನ್ನು ಅಳವಡಿಸಿಕೊಳ್ಳಲು ತುಂಬಾ ಸಮಯವಾಗುತ್ತದೆ 


ಭಾರತದ ದಕ್ಷಿಣ ದಿಕ್ಕು - ಕೇರಳ ರಾಜ್ಯ - ಕಾಲಟಿ ಪ್ರಾಂತ್ಯ ( ಹಸಿರು ಕೂಡಿದ ವಾತಾವರಣ )

ದೇವರ ಜಾಗ ಎಂದೇ ಕರೆದುಕೊಳ್ಳುವ ಜಾಗ .


ಷಟ್ಕರ್ಮ ವೇದಾಧ್ಯಯನ ಸಕಲ ವಿದ್ಯಾ ಪಾರಂಗತರ ಮಗ ಶಿವಗುರು 

ತಂದೆಯ ಗುರುಕುಲದಲ್ಲಿ ೧೨ ವರ್ಷ ವೇದಾಧ್ಯಯನ 

ಮದುವೆ ವಯಸ್ಸಿನಲ್ಲಿ ದೈವಭಕ್ತೆ ಆರ್ಯಾಂಬ ಎಂಬ ಸುಂದರ ಹುಡುಗಿಯೊಂದಿಗೆ ವಿವಾಹ .

ಶಿವಗುರು - ಆರ್ಯಾಂಬ ಮನೆಯಲ್ಲಿ ನಿತ್ಯ ವೇದಾಭ್ಯಾಸ, ಸಾವಿರಾರು ಪಂಡಿತರು ಮನೆಗೆ ಬಂದುಹೋಗುವ ವಾತಾವರಣ. ಸತ್ಸಂಘ .

ಹಲವಾರು ವರ್ಷ ಮಕ್ಕಳಿಲ್ಲದ ಹಲವಾರು ವರ್ಷ ದುಃಖದಲ್ಲೇ ಕಳೆದರು.

ಶಿವನನ್ನು ಆರಾಧನೆ ಮಾಡುವುದಾಗಿ ಚರ್ಚೆ ನಡೆಯಿತು .

೪೮ ದಿವಸಗಳ ಮಂಡಲ  ನಡೆಯುತ್ತದೆ - ಶಿವನ ಜಪ ತಪ ಹೋಮ ಹವನ ಅನ್ನಸಂತರ್ಪಣೆ .

ಈಶ್ವರ ಸಂತೃಪ್ತನಾಗಿ ಅಲ್ಪಾಯುಷಿಯಾದ ಸರ್ವಜ್ಞ ಬೇಕೋ ಅಥವಾ ದೀರ್ಘಾಯುಷಿಯಾದ ದುರಾಚಾರಿ ಲೋಕಕಂಟಕ ದುರುಳ ಬೇಕೋ ಎಂದು  ಕೇಳಿದಾಗ ಶಿವಗುರು  ಅಲ್ಪಾಯುಷಿಯನ್ನೇ ಕೇಳುತ್ತಾನೆ .

ಲೋಕಕಲ್ಯಾಣಕ್ಕೆ ಆ ಮಗುವಿನ ಜನನವಾಗುತ್ತದೆ .

No comments:

Post a Comment