ಶಂಕರಾಚಾರ್ಯರು ಯಾವಾಗಲೂ ವೇಗವಾಗಿ ನಡೆಯುತ್ತಿದ್ದರು.
೮ ನೇ ಶತಮಾನದಲ್ಲಿ ಹೆಂಡ ಸೇಂಧಿ ಸಾರಾಯಿ ಅಂಗಡಿ ಊರಿನ ಒಳಗೆ ಇರುತ್ತಿರಲಿಲ್ಲ.
ಒಂದು ಸಾರಿ ಶಿಷ್ಯರಿಗೆ ಅವರ ದೇಹ ಶಕ್ತಿಯ ಬಗ್ಗೆ ತೋರಿಸಿಕೊಟ್ಟರು .
ಒಂದು ಸಾರಿ ಶಿಷ್ಯರು ಏನು ಮಾಡುತ್ತಾರೆ ನೋಡೋಣ ಎಂದುಕೊಂಡು , ದೊಡ್ಡ ಮಡಕೆ ಸಾರಾಯಿ ಕುಡಿದ ಮೇಲೆ ತಮ್ಮ ಶಿಷ್ಯರ ಮನಸ್ಸಿನಲ್ಲಿ ಆದ ಬದಲಾವಣೆ ತಕ್ಷಣ ತಿಳಿದುಕೊಳ್ಳುತ್ತಿದ್ದರು. ಶಿಷ್ಯರಿಗೂ ಕುಡಿಯುವ ಮನಸ್ಸು ಬಂದಿದ್ದು ತಿಳಿಯಿತು .
ಎರಡನೇ ಸಾರಿ ಕಬ್ಬಿಣದ ರಸ ಕುಡಿದ ಮೇಲೆ ಹಿಂದೆ ತಿರುಗಿ ಶಿಷ್ಯರ ಕುರಿತು ಹೇಳುತ್ತಾರೆ ಕಣ್ಣೂ ಮುಚ್ಚಿ ಒಬ್ಬರನ್ನು ಅನುಸರಿಸಬಾರದು ಎಂದು. ವಿಧ್ಯೆ ಕಲಿತು ಸ್ವಂತ ಬುದ್ದಿ ಉಪಯೋಗಿಸಬೇಕು ಎಂದು ಅವರ ನಡತೆಯಿಂದ ಪಾಠ ಮಾಡಿದರು. ಅತಿಮಾನುಶರು ಎಂದು ಆಗ ಶಿಷ್ಯರು ತಿಳಿದರು.
ರಾಮಾಯಣ ಮಹಾಭಾರತ ವೇದ ಪುರಾಣ ನಿತ್ಯಕ್ಕೆ ಓದುವ ಬರೆಯುವ ಅಭ್ಯಾಸ ಮಾಡಬೇಕು.
ನಮ್ಮ ಮಕ್ಕಳು ನಮ್ಮ ಪ್ರತಿಬಿಂಬವಾದ್ದರಿಂದ ನಮ್ಮ ಒಳ್ಳೆಯತನವನ್ನು ಪಾಲಿಸುವರು.
ಕೆಲವು ದಾರ್ಶನಿಕರು ವೇದವನ್ನು ಮಾನ್ಯತೆ ಮಾಡುತ್ತಿರಲಿಲ್ಲ. ಜನರ ಜೀವನ ಹದಗೆಟ್ಟಿತ್ತು. ಸುಸ್ಥಿತಿಗೆ ತರುವ ಸಮಯ ಬಂದಿತ್ತು. ಸನಾತನ ಧರ್ಮ ನಶಿಸಿ ಹೋಗುತಿತ್ತು.
ಕಾಪಾಲಿಕರು ತಲೆ ಬುರುಡೆಯಲ್ಲಿ ಊಟ ಮಾಡುತಿದ್ದರು.
ಚಾರುವಾಕರು ದೇವರು ಇಲ್ಲವೇ ಇಲ್ಲ ಎಂದು ನಂಬುವ ಹಾಗೆ ಭಾಷಣ ಮಾಡಿದ.
ಅವನನ್ನು ಹೇಗೆ ಅಷ್ಟು ಚೆನ್ನಾಗಿ ಮಾತನಾಡಿದೀಯ ಎಂದು ಕೇಳಿದಾಗ ದೇವರ ದಯೆ ಎಂದು ಉತ್ತರಿಸಿದ.
ಅಜ್ಞಾನ / ಅವಿಧ್ಯೆಯಿಂದ ಹೀಗೆ ಜನರಿಗೆ ಆಗುತ್ತದೆ .
ಪ್ರತಿಯೊಂದನ್ನು ನಮ್ಮ ಮನಸ್ಥಿತಿಗೆ ತಕ್ಕಂತೆ ಗೋಚರವಾಗುತ್ತದೆ.
ಚಾರುವಾಕರ ಸಿದ್ದಂತ ಚೆನ್ನಾಗಿ ತಿನ್ನು ಕುಡಿ ಪಂಚೇಂದ್ರಿಯಗಳನ್ನು ತೃಪ್ತಿ ಪಡಿಸು. ಬೇರೆಯವರ ಬಗ್ಗೆ ಯೋಚಿಸಬೇಡ, ದೇವರು ಇಲ್ಲ, ಕರ್ಮ ಇಲ್ಲ, ಸ್ವರ್ಗ ನರಕ ನಂಬಬೇಡಿ, ಆತ್ಮ ಇಲ್ಲ , ಅಪರ ಕರ್ಮ ಮಾಡಬೇಡಿ. ಪುನರ್ಜನ್ಮ ಇಲ್ಲ ಅಂತ ಹೇಳಿ ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದರು.
ಚಾರುವಾಕರು ಪಂಚಬೂತಗಳಿಂದ ಮನುಷ್ಯನ ಶರೀರವು ಆಗಿಲ್ಲ ಎಂದು ಹೇಳುತ್ತಿದ್ದರು .
ಕಣ್ಣಿಗೆ ಕಾಣದ್ದನ್ನು ನಂಬುವವರಲ್ಲ ( ಉದಾ : ಆಕಾಶ ). ಅವರ ಸಿದ್ದಂತ ಏನು ಅಂದರೆ ಸಾಲ ಆದರು ತುಪ್ಪ ತಿನ್ನು ಎಂದು ಹೇಳುತ್ತಿದ್ದರು. ಒಬ್ಬರಿಗೆ ಮೋಸ ಮಾಡಿದರೆ ಕರ್ಮ ಬರುತ್ತೆ , ನರಕ ಅನುಭವಿಸುತ್ತೀನಿ ಎಂಬುದು ತಳ್ಳಿಹಾಕಿದ್ದರು . ಯಮ ನಿಯಮ ( ನಾವೇ ಹಾಕಿಕೊಳ್ಳುವ ನಿಯಮ ) ನನ್ನ ಮುಂದಿನ ಜನ್ಮಕ್ಕೆ ಮತ್ತು ನನ್ನ ಮುಂದಿನ ಜನಾಂಗಕ್ಕೆ ಒಳ್ಳೇದಾಗ್ಬೇಕು.
ಗಾದೆ : ಹಾಲು ಕುಡಿದು ಬದುಕುವವರೇ ಬದುಕಲ್ಲ ಇನ್ನು ವಿಷ ಕುಡಿದು ಬದುಕುವುದುಂಟೆ ?
ಆ ೮ನೆ ಶತಮಾನದಲ್ಲಿ ಎಲ್ಲಾ ದಾರ್ಶನಿಕರು ಸಹ ಚಾರುವಾಕ ಸಿದ್ದಂತವನ್ನು ಒಪ್ಪುತ್ತಿರಲಿಲ್ಲ . ಅದೊಂದು ತುಂಬಾ ಒಳ್ಳೆಯದು ನಡೀತಿತ್ತು.
No comments:
Post a Comment