Tuesday, November 29, 2022

Nov 29 2022 - Notes

 ೫ - ಶಿವಗುರು ಒಬ್ಬನೇ ಮಗನನ್ನು ಬೇಡಿಕೊಳ್ಳುತ್ತಾನೆ .

ಆರ್ಯಾಂಬಾ ಗರ್ಭವಂತಳಾಗುತ್ತಾಳೆ . ಭೂಲಕಕ್ಕೆ ಬಂದಿರುವ ಶಿವಸ್ವರೂಪಿ ಆದಿಶಂಕರಾಚಾರ್ಯ ಗರ್ಭದಲ್ಲಿ ಬೆಳೆಯುತ್ತಿರುತ್ತದೆ . ಆಗ ಜ್ಞಾನಿಗಳು ಪಂಡಿತರು ಓಡಾಡುವ ಊರು ಪರಿಸರ . ನಿತ್ಯ ವೇದ ಮಂತ್ರ ಭಗವದ್ಗೀತೆ ತಾಯಿಯ ಕಿವಿ ಮೇಲೆ ಬೀಳುತ್ತಿತ್ತು .

ಸಂಸ್ಕಾರ ಗರ್ಭದಲ್ಲೇ ಬೆಳೆಯುವಂತದ್ದು . 


ಲೌಕಿಕ ಜನರು ಇದನ್ನು ಗಮನಿಸಬೇಕು .

ಯೋಗ ಧ್ಯಾನ ಸ್ತೋತ್ರಗಳ ಪಟನೆ ಆ ಹೆಣ್ಣಿಗೆ ಗರ್ಭವತಿಯಾದಾಗ ಕೊಡಬೇಕು . 

ಲೌಕಿಕ ಜಗತ್ತಿಗೆ ಬಂದಾಗ ಭಯ ಬಂದು ಅಳುತ್ತದೆ.


ಆದರೆ ಆರ್ಯಾಂಬಳಿಗೆ ಹುಟ್ಟಿದ ಮಗುವಿಗೆ ತುಂಬಾ ಸಂತೋಷವಿತ್ತು . 

ದುಃಖ ಇಲ್ಲ , ಅಳು ಇಲ್ಲ. ಏನಿಕ್ಕೆ ಹುಟ್ಟಿದೀನಿ ಎಂದು ತಿಳಿದಿತ್ತೇನೋ ಅನ್ನುವ ಹಾಗೆ .


ತೋಳಿನ ಬಲಭಾಗದಲ್ಲಿ ಈಶ್ವರ ಸಾಕೇತಿಕವಾಗಿ ತ್ರಿಶೂಲದ ಚಿನ್ಹೆ ಹೊತ್ತಿಕೊಂಡು ಹುಟ್ಟಿದ್ದ .  

ತೋಳಿನ ಎಡಬಾಗದಲ್ಲಿ ಅರ್ಧ ಚಂದ್ರಾಕೃತಿ .


ಪಂಡಿತರು ಜ್ಞಾನಿಗಳು ಮಗುವನ್ನು ನೋಡಿದ ತಕ್ಷಣ ಗೊತ್ತಾಗುತ್ತೆ ಈ ಮಗು ಸನ್ಯಾಸಿ ಆಗುತ್ತಾನೆ . ಲೋಕಕಲ್ಯಾಣಕ್ಕೆ ಹುಟ್ಟಿರೋ ಮಗು ಇದು ಎಂದು ಆತ್ರೇಯರು ( ಕುಲ ಗುರುಗಳು ) ಹೇಳುತ್ತಾರೆ.

ಪಂಡಿತರು ಮುಂದೆ ನಾವು ನಮಸ್ಕಾರ ಮಾಡುತ್ತೇವೆ ಎಂದು ಭವಿಷ್ಯ ನುಡಿತಾರೆ .


೬. ಚಾರುವಾಕ ಸಿದ್ದಾಂತ ಪರಿಚಯ ಆಗಿದೆ . ಈಗ ಬೌದ್ಧ ದರ್ಶನ ತಿಳಿದುಕೊಳ್ಳೋಣ .

ಶಂಕರಾಚಾರ್ಯರು ಹೋರಾಡಿದ್ದು ಈ ದರ್ಶನದ ವಿರುದ್ಧ .

ಬುದ್ಧ ತತ್ವಜ್ಞಾನಿ . ಅವನಿಂದ ಜಗತ್ತಿಗೆ ಬೌದ್ಧ ದರ್ಶನವಾಯಿತು . ಸಿದ್ದಾರ್ಥ( ಬುದ್ಧನ ಬಾಲ್ಯದ ಹೆಸರು )  ಹುಟ್ಟಿದ್ದು ಕ್ರಿಸ್ತ ಪೂರ್ವ  ೫೬೩ ರಲ್ಲಿ ಈಗಿನ ನೇಪಾಳದಲ್ಲಿ ಹುಟ್ಟಿದ .

ಸಿದ್ದಾರ್ಥನ ತಂದೆಗೆ ಮಗನ ಭವಿಷ್ಯ ಗೊತ್ತಾಗಿರುತ್ತೆ .

ಕಾಯಿಲೆಗೆ ಸಿಕ್ಕಿರುವ ಮನುಷ್ಯ ಮತ್ತು ಸತ್ತು ಹೋಗಿರುವ ವ್ಯಕ್ತಿಯನ್ನು ಒಮ್ಮೆ ನೋಡುತ್ತಾನೆ .

ಸತ್ಯಾನ್ವೇಷಣೆ ಬೇಕು ಎಂಬುದಾಗಿ ಆಸ್ತಿ ರಾಜ್ಯ ಎಲ್ಲ ತೊರೆದು ಹೊರಡುತ್ತಾನೆ .


ಎಂಟು ವಿಷಯಗಳನ್ನು ಬುದ್ಧ ಕೊಟ್ಟಿದ್ದು .

ಮಾಡುವ ಕೆಲ್ಸಕ್ಕೆ ಉದ್ದೇಶ ಚೆನ್ನಾಗಿರಬೇಕು . 

ಮಾತು ಚೆನ್ನಾಗಿರಬೇಕು 

ಒಳ್ಳೆಯ ಕೆಲಸ ಸರಿಯಾದ ಮಾರ್ಗದಲ್ಲಿ ಇದ್ದು ಮಾಡಬೇಕು .

ಸರಿಯಾದ ಪ್ರಯತ್ನ ಮಾಡಬೇಕು .

ಏಕಾಗ್ರತೆಯಿಂದ ಮಾಡಬೇಕು .

ಸರಿಯಾದ ಬುದ್ದಿಯಲ್ಲಿ ಶುದ್ಧತೆ ತಂದುಕೊಳ್ಳಬೇಕು.


ಮನುಷ್ಯನ ದುಃಖಕ್ಕೆ ಆಸೆಯೇ ಕಾರಣ ಎಂದು ಹೇಳಿದ . ಅದು ಸ್ವಲ್ಪ ಗಿಂಡಲಕ್ಕೆ ಈಡಾಗಿತ್ತು .

ಬುದ್ಧ ಅನ್ನೋದು ಬಿರುದು . ಯಾವುದೇ ವ್ಯಕ್ತಿ ಜ್ಞಾನಿಯಾದರೆ ಬುದ್ಧ ಎಂದು ಕರೆದರು.

ನಮ್ಮ ವೈಧಿಕ ಮಾರ್ಗವನ್ನು ಹಿಂದೆ ಸರಿಸಿ ಬುದ್ಧ ದರ್ಶನವನ್ನು ಸಿದ್ದಾರ್ಥ ನಿಲ್ಲಿಸಿದ್ದ.


ಸಿದ್ದಾರ್ಥ ತಾನೇ ಸತ್ಯವನ್ನು ಕಂಡುಹಿಡಿದುಕೊಳ್ಳುವುದಾಗಿ ಪ್ರಯತ್ನ ಪಟ್ಟ. ಅವನಿಗೆ ಗುರು ಇರಲಿಲ್ಲ.

ಆತ್ಮ ಅಂದರೆ ಏನು . ಯಾವುದು ನಿತ್ಯ ಯಾವುದು ಅಶಾಶ್ವತ ಅನ್ನೋದು ನಿತ್ಯ ವಿಚಾರ ಮಾಡಿಲ್ಲ ಅದಕ್ಕೆ ನಮಗೆ ದುಃಖ ಜಾಸ್ತಿ . ಅದು ಗೊತ್ತಾದರೆ ಜ್ಞಾನಿ ಎಂದು ತಿಳಿಯುವುದು .


ಬೌದ್ಧ ದರ್ಶನ ಭಾರದಲ್ಲಿ ಉಳಿಯಲೇ ಇಲ್ಲ. ಬೇರೆ ಕಡೆಯೂ ಕೂಡ ಉಳಿಲಿಲ್ಲ ಯಾಕೆ ಅಂದ್ರೆ ಆತ್ಮತತ್ವನ್ನು ಒಪ್ಪಿರಲಿಲ್ಲ . ಮನಸ್ಸೇ ಎಲ್ಲವೂ ಎನ್ನೋ ವಾದ ಅವರದ್ದಾಗಿತ್ತು . ವೇದವನ್ನು ಮಾನ್ಯತೆ ಮಾಡಿರದೆ ಇರೋದ್ರಿಂದ ಬುದ್ಧನ ವಾದವನ್ನು ನಾಸ್ತಿಕ ವಾದ ಎಂದು ಹೇಳುತ್ತಿದ್ದರು .


ಪುನರ್ಜನ್ಮದಲ್ಲಿ ನಂಬಿಕೆ ಇತ್ತು ಆದರೆ ಆತ್ಮಕ್ಕೆ ಬೆಲೆ ಕೊಡದೆ ಇದ್ದಿದ್ದು , ವೇದವನ್ನು ತಿರಸ್ಕಾರ ಮಾಡಿರೋ ಕಾರಣ ಬೌದ್ಧ ದರ್ಶನ ನಿಲ್ಲುವುದಕ್ಕೆ ಆಗಲಿಲ್ಲ .

ಬುದ್ಧ ಅಹಿಂಸೆಯನ್ನು ನಂಬಿದ್ದ ಆದರೆ ಅವನ ಅನುಯಾಯಿಗಳು ಮಾಂಸ ತಿನ್ನುತ್ತಿದ್ದರು . ಅದಕ್ಕೆ ಪ್ರಖ್ಯಾತಿ ಆಗಲಿಲ್ಲ, ಬಿದ್ದು ಹೋಯ್ತು .     

 

No comments:

Post a Comment