Thursday, December 1, 2022

Dec 1 , 2022 - Kannada Notes

 ೬  - ವೈಧಿಕ ಸಿದ್ದಂತಕ್ಕೆ ವಿರೋಧ ವ್ಯಕ್ತಿಪಡಿಸಿದವರು - ಚಾರುವಾಕ , ಬೌದ್ಧ ಮತ್ತು ಜೈನ .

ಜೈನರು ಅಹಿಂಸೆವಾದ , ವೈಧಿಕರಿಗೆ ತುಂಬಾ ವಿರುದ್ಧ ವ್ಯಕ್ತಪಡಿಸಿಲ್ಲ .


ಜೈನ ತೀರ್ಥಂಕರರು ನಮ್ಮ ಶಕ್ತಿ ದೇವತೆಗಳನ್ನು ಒಪ್ಪುತ್ತಿದ್ದರು.


ಜೈನ ಅಂದರೆ ಜಯಿಸು ಅಂತ .

ಏನನ್ನು ಜಯಿಸುವುದು ?

ನನ್ನನ್ನು ನಾನು .

ಸ್ಥಿತಪ್ರಜ್ಞತೆಗೆ ಒಟ್ಟು ಕೊಟ್ಟುವರು ಅವರಲ್ಲಿ ಕೂಡ ಇದ್ದರು. 

ಜ್ಞಾನ ಎಲ್ಲಿಂದಲಾದರೂ ಬರಲಿ , ತೆಗೆದುಕೊಳ್ಳಬೇಕು .

ಕರ್ಮಸಿದ್ಧಾಂತ ಮತ್ತು ಪುನರ್ಜನ್ಮದಲ್ಲಿ ನಂಬುತ್ತಿದ್ದರು.

ವೇದವನ್ನು ಮಾನ್ಯತೆ ಮಾಡಿದೆ ಇದ್ದ ಕಾರಣ ನಾವು ಅವರನ್ನು ನಾಸ್ತಿಕರು ಎಂದು ಕರೆಯುತ್ತೇವೆ .

ಮನುಷ್ಯನನ್ನೇ ದೇವರನ್ನಾಗಿ ನೋಡಬೇಕಾದರೆ ಮನಯೇವ ಮನುಷ್ಯಾಣಾಮ್  ಎಂಬಂತೆ ಸಮ್ಯಕ್ ದರ್ಶನ ವಾಗಿರಬೇಕು . ಮನಸ್ಸನ್ನು ಪೂರ್ತಿ ತಿಳಿಯಬೇಕು ಆಗಲೇ ಆಸಕ್ತಿ ಬಂದು ಆತ್ಮವಿಚಾರದಲ್ಲಿ ಆಸಕ್ತಿ ಕಂಡುಕೊಳ್ಳಬೇಕು. ಅಧ್ಯಯನ ಮಾಡಬೇಕು .

ವಿಧ್ಯೆಯಿಂದ ವಿನಯ ಬರಬೇಕು . ವಿನಯವನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು . ಬರುವ ಹಣವನ್ನು ಧರ್ಮ ಮಾರ್ಗದಲ್ಲಿ ವ್ಯಯ ಮಾಡಬೇಕು .  


ಮಾತೃಭಾಷೆಯಾದ ಮಲಯಾಳಂ ಮತ್ತು ಸಂಸ್ಕೃತವನ್ನು ಮಾತನಾಡುತ್ತಿದ್ದ ಶಂಕರ.

ಗುರುಕುಲದಲ್ಲಿ ಸಂಸ್ಕೃತ ವ್ಯಾಕರಣ ಕಾವ್ಯ ಪುರಾಣ ಎಲ್ಲವೂ ಸ್ವಂತ ಓದಿ ಅರ್ಥಮಾಡಿಕೊಳ್ಳುತ್ತಿತ್ತು ೩ ವರ್ಷದ ಮಗು. ಬೆಳಗ್ಗೆ ತಾನೀರು ಸ್ನಾನ , ಶುಭ್ರವಾದ ಬಟ್ಟೆ , ಹಣೆಗೆ ವಿಭೂತಿ , ಸ್ತೋತ್ರ ಪಾರಾಯಣ ಇದೆಲ್ಲ ನಿತ್ಯ ಮಾಡುತ್ತಿದ್ದ ಶಂಕರ.

ಶಂಕರ ಚಿಕ್ಕ ಮಗುವಾಗಿದ್ದಾಗಲೇ ಗುರುಗಳಿಂದ ಛಂದಸ್ಸು, ಅಲಂಕಾರ , ಕಾವ್ಯ ಎಲ್ಲಾ ಕಲಿತು ೫ ವರ್ಷಕ್ಕೆ ಬಂದಾಗ ಉಪನಯನವಾಯಿತು. ೫ ಕ್ಕೆ ಉಪನಯನ ಮಾಡಿದರೆ ಬ್ರಹ್ಮತೇಜಸ್ಸು ಉಂಟಾಗುವುದು ಎಂದು ಶಸ್ತ್ರ ಹೇಳುತ್ತದೆ. 

ಶಂಕರನ ತಂದೆ ತೀರಿ ಹೋದ ಮೇಲೆ ತಂದೆಯ ಬಾಯಿಗೆ ನೀರು ಹಾಕಿ ನಾರಾಯಣ ನಾರಾಯಣ ಎಂದು ಹೇಳುತ್ತಾನೆ. ಪಕ್ಕದಲ್ಲಿ ಕುಳಿತು ಸ್ತೋತ್ರಗಳನ್ನು ಪಠಣ ಮಾಡಲು ಶುರುಮಾಡುತ್ತಾನೆ .

ಜೊತೆಗೆ ಪಂಡಿತರು ಸೇರಿ ಉಪನಿಷತ್ ಶುರುಮಾಡುತ್ತಾರೆ .

ಶಂಕರಾಚಾರ್ಯರು ಹುಟ್ಟುವುದಕ್ಕೆ ಮುಂಚೆ ಗರ್ಭದಲ್ಲೇ ಕಲಿತು ಬಂದವರ ಹಾಗೆ ಬದುಕುತ್ತಿದ್ದರು .

ನಾವೆಲ್ಲರೂ ಹೊರಗಿಂದ ಕಲಿಯಬೇಕು.

ವಿವೇಕಾನಂದರು ೧೯ನೆ ಶತಮಾನದಲ್ಲಿ ಹುಟ್ಟಿ ೮ ನೇ ಶತಮಾನದಲ್ಲಿ ಹುಟ್ಟಿದ ಶಂಕರಾಚಾರ್ಯರ ಬಗ್ಗೆ ಪೂರ್ತಿ ಅಧ್ಯಯನ ಮಾಡಿ ಅವರ ಬಗ್ಗೆ ಪ್ರಪಂಚದಲ್ಲೆಲ್ಲಾ ತಿಳಿಸಿಕೊಟ್ಟರು.

ಶಂಕರಾಚಾರ್ಯರು ಗುರುಗಳ ಹತ್ತಿರ ಹೋದಾಗಲೇ ಅವರಿಗೆ ಎಲ್ಲಾ ಪಾಠ ತಿಳಿದಿತ್ತು. ಗುರುಗಳ ಪಟ್ಟ ಕೂಡ ಬಯಸಲಿಲ್ಲ. ಅವರಿಗೆ ಅವರೇ ಗುರುಗಳು ಆದ್ದರಿಂದಲೇ ಜಗದ್ಗುರುಗಳಾದರು.

ಬುದ್ಧನಾಗಲಿ , ಶಂಕರಾಚಾರ್ಯರಾಗಲಿ ಪ್ರಪಂಚ ಕಂಡ ಅದ್ಭುತ ವ್ಯಕ್ತಿಗಳು, ದಿವ್ಯಾತ್ಮಗಳು   

No comments:

Post a Comment