ತಾಯಿ ಇಲ್ಲದವನು ನತದೃಷ್ಟ
ಬದುಕಿಯಾನು ಕಳೆದುಕೊಂಡು ತ್ರಾಣ
ಮಾತೃಭಾಷೆ ಇರುವುದು ಅದೃಷ್ಟ
ಮರೆತರೆ ಹೋಗಲಿ ಇಂದಿಲ್ಲೇ ಪ್ರಾಣ
- ಸುಬ್ಬು ಪದ್ಮನಾಭ್
ಬದುಕಿಯಾನು ಕಳೆದುಕೊಂಡು ತ್ರಾಣ
ಮಾತೃಭಾಷೆ ಇರುವುದು ಅದೃಷ್ಟ
ಮರೆತರೆ ಹೋಗಲಿ ಇಂದಿಲ್ಲೇ ಪ್ರಾಣ
- ಸುಬ್ಬು ಪದ್ಮನಾಭ್
ಮಾತೃಭಾಷೆ ಕೇವಲ ಮಾತನಾಡುವುದಕ್ಕೆ ಇರುವ ಸಾಧನ ಮಾತ್ರವಲ್ಲ ಅದು ನಮ್ಮ ಸಂಸ್ಕೃತಿ, ನಮ್ಮತನ ನಮ್ಮ ಆಚಾರ-ವಿಚಾರಗಳು , ದೇಶದ ನಂಬಿಕೆ ವಿಶ್ವಾಸಗಳು , ನಮ್ಮಿಂದ ನಾಡಿಗೆ ಸಹಾಯವಾಗಲಿರುವ ಅಂಶಗಳು ಅಲ್ಲಿ ಹುದುಕಿಕೊಂಡಿರುತ್ತದೆ, ಹೀಗೆ ಹುದುಗಿಕೊಂಡಿರುವ ನಿಧಿಯನ್ನು ಆಚೆ ತರುವುದಕ್ಕೆ ಸಹಾಯ ಮಾಡುವ ಶ್ರೇಷ್ಠ ಸಾಧನ -ಅವರವರ ಮಾತೃಭಾಷೆ. ಅದಕ್ಕೋ ಏನೋ ನನ್ನ ೫ ವರ್ಷದ ಮಗ ಕನ್ನಡ ಕಲಿಯುವಾಗ ನನಗಾಗುವ ಆನಂದ ಅಪಾರ. ಕನ್ನಡ ಭಾಷೆಯನ್ನೂ ಅವನಿಗೆ ಕಲಿಸುತ್ತಿರುವ "ಕನ್ನಡ ಕಲಿ" ಗುರು ವೃಂದಕ್ಕೆ ನಮಸ್ಕರಿಸುತ್ತೇನೆ.
No comments:
Post a Comment