ಕರ್ನಾಟಕದ ಕನ್ನಡಿಗರು ಅಥವಾ ದೇಶದ ಹೊರಗೆ ಬದುಕುತ್ತಿರುವ ಗ್ಲೋಬಲ್ ಕನ್ನಡಿಗರಾಗಲಿ ದಿನದಲ್ಲಿ ೧೨ ಗಂಟೆಗಳ ಕಾಲ ಎಚ್ಚರವಾಗಿದ್ರೆ ಒಂದಿಷ್ಟು ೧೦-೧೫ ನಿಮಿಷವಾದರು ನಮ್ಮ ಬದುಕು ನಮ್ಮ ತನ ನಾವು ಏನು ಮಾಡಬೇಕು ಎಂದು ಅನಿಸಬೇಕು, ಕೆಲವರಿಗೆ ಅನಿಸಬಹುದು. ಕೆಲವು ಸಾಧಕರಿಗೆ ಬದುಕುವುದಕ್ಕೆ ನಮ್ಮ ತನ ನಮ್ಮನ್ನು ಸದಾ ಕಾಡುವುದು ಖಂಡಿತ .ವಿಶೇಷವಾಗಿ ಕನ್ನಡಿಗರಿಗೆ ಸ್ವಲ್ಪ ಮುದ್ದು ಮಾಡಿ ಎಳಿಸಬೆಕಾಗುತ್ತದೆ ಅಥವಾ ಹಾರೆಕೊಲಿನ ಪ್ರಯೋಗ ಬೇಕಾಗುತ್ತದೆ , ಅಷ್ಟು ಸುಲಭದಲ್ಲಿ ನಾವು ಎಳುವವರಲ್ಲ.
ನಮ್ಮ ತನವನ್ನು ಕಾಪಾಡುವುದಕ್ಕೆ ನಾವೇ ಕನ್ನಡಿಗರು ಸ್ವಪ್ರೇರಣೆಯಿಂದ ಎದ್ದು ನಿಂತು ಸಂಘ ಸಂಸ್ಥೆಗಳು, ಗುಂಪುಗಳು ಮಾಡಿಕೊಂಡು ವೃತ್ತಿಯ ಜೊತೆ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ನಮ್ಮ ತನ ಉಳಿಯುತ್ತೆ. ಅಂತ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಹೆಚ್ಚಿನ ಸಂತೃಪ್ತಿಯನ್ನೂ ಕೂಡ ಕಂಡುಹಿಡಿದುಕೊಳ್ಳಬಹುದು ಅದಕ್ಕೆ ಮನಸ್ಸು ಕೆಲವರಿಗೆ ಹಾತೊರೆಯುವುದು.
ನಮ್ಮೂರಿಗೆ ಬಂದು ಸಾಧನೆ ಮಾಡುತ್ತೇನೆ ಅನ್ನುವುದು ಒಂದು ಸಿದ್ಧಾಂತವಾದರೆ, ಇರುವ ಜಾಗದಲ್ಲೇ ಇದ್ದುಕೊಂಡು ಕೂಡ ಸಾಧಿಸಿ ತೋರಿಸಬಹುದು . ಸಾಧನೆ ಮಾಡುವವರು ಬೆಟ್ಟ ಹತ್ತಲೇಬೇಕು ನೆಲದಲ್ಲಿಯೇ ಕೂತು ಬೆಟ್ಟ ಹತ್ತದೇ ಈ ಕಾರ್ಯ ಸಿದ್ದಿಯಾಗುವುದಿಲ್ಲ. ಕರ್ನಾಟಕದಲ್ಲಿ ಇದ್ದು ಬದುಕುವ ಹಾಗೆಯೇ ಎಲ್ಲಿಯೂ ಕೂಡ ಬಾಳಿ ಬದುಕಬಹುದು ಮತ್ತು ತೃಪ್ತಿಯ ಜೀವನ ಅನುಭವಿಸಬಹುದು .
No comments:
Post a Comment