Sunday, December 29, 2019

ಸನ್ಯಾಸ ಯೋಗ ಎಲ್ಲರಿಗೆ ಸಿಗಲ್ಲ - ಪೇಜಾವರ ಶ್ರೀಗಳು ಮಹಾ ಯೋಗಿಗಳು


ಸನ್ಯಾಸ ಯೋಗ ಎಲ್ಲರಿಗೆ ಸಿಗಲ್ಲ - ಪೇಜಾವರ ಶ್ರೀಗಳು ಮಹಾ ಯೋಗಿಗಳು
----------------------------------
ಆರು ವರ್ಷ ಇರುವಾಗ ಅವರ ತಂದೆ ತಾಯಿ ಮಗು ವೆಂಕಟರಮಣನನ್ನು ಉಡುಪಿ ಮಠಕ್ಕೆ ಕರೆದುಕೊಂಡು ಹೋಗಿರುತ್ತಾರೆ . ಅಲ್ಲಿ ಪೂಜೆ ಪುನಸ್ಕಾರ ಭಕ್ತಿ ಜನರು ಎಲ್ಲವನ್ನು ನೋಡಿ ಆಶ್ಚರ್ಯ ಎಂಬಂತೆ ಕಣ್ಣು ಪಿಳಿ ಪಿಳಿ ಅಂತ ಬಿಟ್ಟುಕೊಂಡು ನೋಡುತ್ತಿದ್ದ ಬಾಲಕ ವೆಂಕಟರಮಣನನ್ನು ನೋಡಿ ಮುಂದೆ ಒಂದು ದಿನ ನೀನು ನನ್ನ ಹಾಗೆ ಸ್ವಾಮೀಜಿ ಆಗಬಹುದು . ನಿನಗೆ ಆಸಕ್ತಿ ಇದೆಯಾ ಎಂದು ಕೇಳಿದರಂತೆ ....
ತಕ್ಷಣವೇ ಸನ್ಯಾಸ ಅನ್ನೋದು ಏನು ಅಂತ ತಿಳಿಯದಿರುವ ವಯಸ್ಸಿನಲ್ಲೇ ಹ್ಞೂ ಎಂದು ಬಿಟ್ರಂತೆ .
ಅಲ್ಲಿಗೆ ಮುಗಿತು . ಸನಾತನ ಧರ್ಮ ಪುನರುತ್ತಾನವಾಗುವುದಕ್ಕೆ ಸ್ವತಃ ಭಗವಾನ್ ಕೃಷ್ಣನೇ ಕಳುಹಿಸಿಕೊಟ್ಟಂತೆ ಆಗಿದೆ ಎಂದು ತಂದೆ ತಾಯಿ ಒಪ್ಪಿಗೆ ಪಡೆದುಕೊಂಡು ಸನ್ಯಾಸ ಸ್ವಲ್ಪ ದಿನ ಬಿಟ್ಟು ತೆಗೆದುಕೊಂಡೇ ಬಿಟ್ಟರು .
ಮಾಧ್ವ ಮಠದ ಅಷ್ಟಮಠದ ಒಂದು ಮಠ ಪೇಜಾವರ . ಗುರು ಪೀಠದಲ್ಲಿ ಕುಳಿತ ನಂತರ ಅದನ್ನು ನಡೆಸಿಕೊಂಡು ಹೋಗುವ ಚಾಣಾಕ್ಷತನ ಬೇಕು . ನಿತ್ಯವೂ ಸಾವಿರ ಧರ್ಮ ಕರ್ಮದ ಕೆಲಸ . ವೇದ ಮಂತ್ರಗಳು ಶಿಷ್ಯರನ್ನು ತಯಾರು ಮಾಡುವ ಕೆಲಸ ಒಂದೆಡೆ ಆದರೆ ಆಸ್ಪತ್ರೆ ಸೇವಾಕ್ಷೇತ್ರ ಪೂರ್ಣಪ್ರಜ್ಞ ವಿದ್ಯಾಭ್ಯಾಸ ಕೇಂದ್ರಗಳ ಮೇಲ್ವಿಚಾರಣೆ ದೇಶಾದ್ಯಂತ ಪ್ರಯಾಣ, ಕಾರ್ಯಕ್ರಮಗಳಿಗೆ ಆಶೀರ್ವಚನ ಹೀಗೆ ಒಂದೇ ಎರಡೇ ಕೆಲ್ಸಗಳು ....ಸಂಸಾರಿಗೆ ಅಬ್ಬಬ್ಬಾ ಅಂದ್ರೆ ೨ ಮಕ್ಳು ಇವತ್ತು . ಪ್ರಪಂಚದಲ್ಲಿರುವವರೆಲ್ಲರೂ ಅವರ ಮಕ್ಕಳೇ ಮತ್ತು ಅವರು ಎಂದೂ ವಿಶ್ವಮಾನವರು . ಇಂತ ಅದಮ್ಯ ಚೇತನ ಉಳ್ಳಂತ ವ್ಯಕ್ತಿತ್ವಗಳೇ ಸನ್ಯಾಸಿಗಳು . ಸನ್ಯಾಸ ಅದಕ್ಕೆ ಒಂದು ಯೋಗ . ಇವರು ತುಂಬಾ ವಿಶೇಷ ಯಾಕೆ ಅಂದರೆ ೫ ಪರ್ಯಾಯ ಮಾಡಿಕೊಂಡು ಬಂದಿರುವ ಅವಕಾಶ ಇವರಿಗೆ ಮಾತ್ರ ಸಿಕ್ಕಿದ್ದು ಮತ್ತದನ್ನು ಅವರ ಅದೃಷ್ಟ ಅಂತ ಭಾವಿಸಿದ್ದ ಅದಮ್ಯ ಚೇತನ ಅವರೇ ಹೇಳಿದ್ದ ಮಾತು " ಅದೂ ದೇವರ ಅನುಗ್ರಹ , ಧನ್ಯತೆಯ ಭಾವನೆ ನನ್ನದ್ದು . ಲೋಕದ ಹಿತ ನನ್ನ ಪಾಲಿಗೆ ಪರಮಾತ್ಮ ಕೊಟ್ಟಿರುವುದು ನನ್ನ ಯೋಗ ಅಂತ ತಿಳಿದಿರುತ್ತೇನೆ" .


No comments:

Post a Comment