Thursday, December 19, 2019

ಹಿರಿಯರು ಮನೆಯಲ್ಲಿ ಏನು ಕಲಿಸಿಕೊಟ್ಟಿದ್ದು ???

ಹಿರಿಯರು ಮನೆಯಲ್ಲಿ ಏನು ಕಲಿಸಿಕೊಟ್ಟಿದ್ದು ???
--------------------------------------
ಉಪಾಕರ್ಮಕ್ಕೆ ಅಂತ ನಮ್ಮ ಮನೆಯಲ್ಲೇ ೨೦-೨೫ ಜನ ಬರ್ತಿದ್ದ ಕಾಲ ಅದು .ನಮ್ಮ ತಾತನೇ ಹೋಸ್ಟ್ .
 ನನಗೆ ಆಗ ೧೦ ವರ್ಷ .
ನಮ್ಮ ತಾತನಿಗೆ ಪ್ರಶ್ನೆ ಕೇಳಿದ್ದೆ ,
ಏನ್ ತಾತ ಬ್ರಾಹ್ಮಣ ಅಂದ್ರೆ ?
ದೊಡ್ಡ ಪ್ರಶ್ನೆನೇ ಕೇಳಿದೀಯಾ . ನಾಳೆ ಬರ್ತಾರಲ್ಲ ಮನೆಗೆ ಅವ್ರನ್ನ ಬ್ರಾಹ್ಮಣರು ಅಂತ ಕರೀತೀವಿ .ಅವರು ನಿತ್ಯ ಗಾಯತ್ರಿ ಮಂತ್ರವನ್ನು ಪಠಿಸುವವರು , ನಿತ್ಯ ಶಿಸ್ತಿನ ಬದುಕು ನಡೆಸುವವರು . ಅನುಷ್ಠಾನ ಮಾಡುವವರು .

ನಮ್ ವಠಾರದಲ್ಲಿ ಎಲ್ಲರೂ ಹಾಗಾದ್ರೆ ಬ್ರಾಹ್ಮಣರು ಅಲ್ವಾ , ಅವರ್ಯಾಕೆ ಈ ಗಾಯತ್ರಿ ದೇವರ ಮಂತ್ರ ಹೇಳಲ್ವಾ ? ಮತ್ತೆ ನಮ್ಮನ್ನು ಬ್ರಾಹ್ಮಣ ಜಾತಿ ಅಂತಾರಲ್ಲ ಅದೇನು ಮತ್ತೆ ?
ತಾತ (ನಗಾಡಿಕೊಂಡು ಹೇಳುದ್ರು ) ಎಲ್ಲರೂ ಮಾಡುವುದಿಲ್ಲ . ಬ್ರಾಹ್ಮಣ ಅನ್ನುವುದು ವರ್ಣ , ಹಾಗೆಯೇ ಕ್ಷತ್ರಿಯ , ವೈಶ್ಯ ಶೂದ್ರವರ್ಣಗಳಿವೆ . ಅವರವರ ಕೆಲಸದ ಅಭಿರುಚಿಗೆ ತಕ್ಕಂತೆ ನಮ್ಮ ಪರಂಪರೆಯಲ್ಲಿ ೪ ವರ್ಣಗಳನ್ನು ಮಾಡಿದ್ದಾರೆ.
ಬ್ರಾಹ್ಮಣ್ಯ ಅನ್ನೋದೇ ಉತ್ತಮವಾದ ಸಂಸ್ಕಾರ -ಅದೊಂದು ರೀತಿ ಸಿದ್ದಿ , ಅದನ್ನು ಸಂಪಾದಿಸಿದವರು ನಾಳೆ ಜನಿವಾರ ಬದಲಾಯಿಸಿಕೊಳ್ಳುವ ಹಬ್ಬ . ಅದಕ್ಕೆ ಮನೆಗೆ ಬರುತ್ತಿದ್ದಾರೆ .

ದಿನಕಳೆದಂತೆ ಪೂಜೆ ಪುನಸ್ಕಾರ ಮಾಡುವ ಅರಿವು ಹೆಚ್ಚ್ ಹೆಚ್ಚು ಬಂತು .
ಅವರಿಂದ ಮತ್ತು ದೊಡ್ಡಪ್ಪ ಚಿಕ್ಕಪ್ಪ ತಂದೆಯವರನ್ನು ಕೆದಕಿ ಕೆದಕಿ ಮಾತನಾಡಿಸಿ ಇಷ್ಟು ಕಲಿತುಕೊಂಡ ವಿಷಯಗಳು.
ಚಿನ್ಮಯ ಮಿಷನ್ ಗರಡಿಗೆ ಬಂದ ಮೇಲೆ ಸ್ವಾಮಿ ಬ್ರಹ್ಮಾನಂದರ ಪ್ರವಚನಗಳನ್ನು ಕೇಳಿ ಕೇಳಿ ನನಗೆ ಕೆಳಗಡೆ ಬರೆದಿರುವುದು ಮನವರಿಕೆಯಾಯಿತು .  
ಹುಟ್ಟಿನಿಂದ ಬ್ರಾಹ್ಮಣನಾಗಲು ಸಾಧ್ಯವಿಲ್ಲ.
ಬ್ರಾಹ್ಮಣ್ಯವನ್ನು ಸಂಪಾದಿಸಿದರೆ ಬ್ರಾಹ್ಮಣನಾಗಬಹುದು .
ಅದು ನಮ್ಮ ವೃತ್ತಿಯ ಆಧಾರದ ಮೇಲೆ.
ಎಷ್ಟು ಆಗುತ್ತೆ ಅಷ್ಟು ಜನರನ್ನು ಸಂಪಾದನೆ ಮಾಡು.
ಅವರಲ್ಲೇ ೪-೫ ಜನ ಅನುಷ್ಠಾನ ರೂಡಿಯಲ್ಲಿರಿಸಿಕೊಂಡಿರುವ ವೈದಿಕ ಮನೆತನದವರು ಸಿಕ್ಕೇ ಸಿಗುತ್ತಾರೆ .
ಒಬ್ಬರನ್ನು ಮಾರ್ಗದರ್ಶನಕ್ಕೆ ಅಂತ ಗುರುವನ್ನಾಗಿ ಮಾಡಿಕೊ .
ವೇದ ಮಂತ್ರಗಳನ್ನು ಕಲಿತುಕೊ .
೪೦ ವರ್ಷ ಪೂಜೆ ಪುನಸ್ಕಾರ ಮೊದಲು ಮಾಡು .
ನಿತ್ಯ ಜಪ ಬಿಡಬೇಡ .
ನಿನ್ನೊಳಗೆ ಧ್ಯಾನ ಮಾಡಬೇಕು ಅಂತ ನಿನಗೆ ಅನಿಸಲು ಶುರುವಾಗುತ್ತೆ ಆಗ ಆ ದನಿಯನ್ನು ಆಲಿಸಿಕೊಂಡು ಯಾರಾದರು ಒಬ್ಬರು ನಿನಗೆ ಇಷ್ಟವಾಗುವ ಗುರುಗಳ ಮಾರ್ಗದರ್ಶನ ಪಡೆದುಕೋ .

ಇವತ್ತಿನ ದಿನ ವಯಸ್ಸು ೪೪ ಆದರೆ ನಮ್ಮ ಜಾಯಿಂಟ್ ಫ್ಯಾಮಿಲಿಯಲ್ಲಿ ನನಗೆ ಮಾರ್ಗದರ್ಶನ ನೀಡುತ್ತಿದ್ದವರಲ್ಲಿ ೯೫% ಜನರು ಕಾಲಾತೀತರಾಗಿದ್ದಾರೆ.

ಅವರನ್ನು ನೆನೆಸಿ ಓಂ ವಸು ದೈವ್ಯೋ ರುದ್ರಾಯ ನಮಃ ಎಂದು ಹಿಂದಿನವರನ್ನು ಸ್ಮರಿಸಿ
ಗಂಗೇಚ ಯಮುನೇಚ ಗೋದಾವರಿ ಸರಸ್ವತಿ .....ಶುರು ...
ಸೂರ್ಯನಿಗೆ ಅರ್ಘ್ಯ
ಕೃಷ್ಣನಿಗೆ ಅರ್ಪಣ ಕೊಡದೆ ಆಹಾರ ಸ್ವೀಕರಿಸುವುದಿಲ್ಲ.
ಇದೆಲ್ಲವೂ ಬದುಕಿಗೆ ನಿಯಮವಾಗಿ ಬಿಟ್ಟಿದೆ .
ತತ್ಸತ್ . ಕೃಷ್ಣಾರ್ಪಣಮಸ್ತು  🙏🙏

No comments:

Post a Comment