Detailed anawer below - ವೈಕುಂಠ ಸಿಕ್ಕಿದ್ರು ಈ ಲೋಕಕ್ಕೆ ಬಂದು ಮೋಕ್ಷ ಸಂಪಾದನೆ ಮಾಡಲೇಬೇಕು . ಅದಕ್ಕೆ ನಮ್ಮಲ್ಲಿ ಮೋಕ್ಷವನ್ನು ಅತ್ಯುತ್ತಮ ಸ್ಥಾನ ಕೊಟ್ಟಿರದು . ಮನುಷ್ಯರು ಇದನ್ನು ಪಡೆಯಬಹುದು ಅದಕ್ಕೆ ೮೪ ಲಕ್ಷ ಸ್ಪೀಸೀಸ್ ಗಳಲ್ಲಿ ಉತ್ತಮನಾದವನು ಮನುಷ್ಯ . ಅಷ್ಟು ಉತ್ತಮವಾದ ಮನುಷ್ಯನಾದ ಮೇಲೆ ಸಾವು ಬರುವುದರೊಳಗೆ ಮೋಕ್ಷಕ್ಕೆ ಹಾತೊರೆಯಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಮೋಕ್ಷ ಎನ್ನುವುದು ಬಂಧನದಿಂದ ಬಿಡುಗಡೆಯಲ್ಲ . ಬಂಧನದಲ್ಲಿ ನಾನಿಲ್ಲ ಎಂಬ ಶುದ್ಧ ಜ್ಞಾನ ಮೋಕ್ಷ . ಗಣೇಶನನ್ನು ಮೊದಲು ಪೂಜೆ ಮಾಡಿ . ಯಾಕೆ ಅಂದರೆ ನಮ್ಮೊಳಗೇ ಮೂಲಾಧಾರ ಶಕ್ತಿಯನ್ನು ನಮ್ಮೊಳಗಿರುವ ಗಣಗಳ ಅಧಿಪತಿ ಎಂದು ಹೇಳಲಾಗಿದೆ . ಅಂದ ಹಾಗೆ ದೇವ ಮಂದಿರ ಪೂಜೆ ಭಜನೆ ಜೀವನದ ಅಲಂಕಾರ ಮನಸ್ಸಿನ ಉದ್ದಾರ ಎಂದು D V ಗುಂಡಪ್ಪನವರು ಹೇಳಿರುವುದು ನಿಮಗೆ ತಿಳಿದಿರಬೇಕು . ಪೂಜೆ ಇರುವುದು ಚಿತ್ತ ಶುದ್ಧಿಗೋಸ್ಕರ . ನಿತ್ಯ ಪೂಜೆ ಮಾಡಿದರೆ ಮನಸ್ಸು ಶುದ್ಧವಾಗುತ್ತೆ . ಶುದ್ಧ ಮನಸ್ಸಿನಿಂದ ನೀವು ಯೋಚಿಸುವ ರೀತಿ ಬದಲಾಗುತ್ತೆ . ಮನಸ್ಸು ಬಂಧನದಿಂದ ಬಿಡುಗಡೆಗೆ ಹಾತೊರೆಯುವುದು ನಿಮಗೆ ತಿಳಿಯುತ್ತದೆ .
No comments:
Post a Comment